ಚಾಮರಾಜನಗರ: ಹಾಸನ ಬಳಿಕ ತಾಳಿ ಕಟ್ಟಿದ ಮರುಕ್ಷಣವೇ ಪರೀಕ್ಷೆಗೆ ನವವಧು ಹಾಜರಾದ ಅಪರೂಪದ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿ ನಡೆದಿದೆ.
ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಸಿಂಧುವಳ್ಳಿ ಯೋಗೇಶ್ ಜೊತೆ ಕೊಳ್ಳೇಗಾಲದ ಆರ್ ಸಂಗೀತಾ ಇಂದು ವಿವಾಹ ನಿಶ್ಚಯವಾಗಿತ್ತು. ಕೊಳ್ಳೇಗಾಲ ಪಟ್ಟಣದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ ವಿವಾಹ ಮುಹೂರ್ತ ಮುಗಿದಿದೆ. ವಾಸವಿ ಕಾಲೇಜಿನಲ್ಲಿ ಅಂತಿಮ ಬಿ.ಕಾಂ ಓದುತ್ತಿದ್ದ ಸಂಗೀತಾ, ತಾಳಿ ಕಟ್ಟುತ್ತಿದ್ದಂತೆ ಹಸೆಮಣೆಯಿಂದ ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ಓಡೋಡಿ ಬಂದು ಬಿಕಾಂ ಪರೀಕ್ಷೆ ಬರೆದಿದ್ದಾಳೆ.
ಮದುವೆ ಸಂಭ್ರಮದ ನಡುವೆ ಶಿಕ್ಷಣದ ಮಹತ್ವ ಸಾರಿದ ಯುವತಿ ಸಂಗೀತಾ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಮಾಂಗಲ್ಯಧಾರಣೆ ಬಳಿಕ ಪರೀಕ್ಷಾ ಕೇಂದ್ರಕ್ಕೆ ಬಂದು ಬಿಕಾಂ ಫೈನಲ್ ಪರೀಕ್ಷೆ ಬರೆದ ನವವಧು: Video