ಶ್ರೀಲೀಲಾ ಸಿಕ್ಕಾಪಟ್ಟೆ ಸ್ಪೀಡ್ ಆಗಿ ಓಡ್ತಿದ್ದಾರಾ? ಕಥೆ ಆಯ್ಕೆಯಲ್ಲಿ ಎಡವುತ್ತಿದ್ದಾರಾ? ಖಂಡಿತ..2019ರಲ್ಲಿ ಕಿಸ್ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ನಿಂದ ಸಿನಿ ಜರ್ನಿ ಆರಂಭಿಸಿದ್ದ ಈ ನಟಿ ಈಗ ಟಾಲಿವುಡ್ ಜೊತೆಗೆ ಬಾಲಿವುಡ್ ಅಂಗಳದಲ್ಲಿಯೂ ಧಮಾಲ್ ಮಾಡಲು ರೆಡಿಯಾಗಿದ್ದಾಳೆ. ಚಾಕಲೇಟ್ ಹೀರೋ ಕಾರ್ತಿಕ್ ಆರ್ಯನ್ ಜೊತೆ ಆಶಿಕಿ-3 ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
2021ರಲ್ಲಿ ರಿಲೀಸ್ ಆದ ಪೆಳ್ಳಿ ಸಂದಡಿ ಚಿತ್ರ ಮೂಲಕ ತೆಲುಗು ಸಿನಿಮಾಮಂದಿಗೆ ಪರಿಚಿತರಾದ ಶ್ರೀಲೀಲಾ ಆ ಬಳಿಕ ಮಹೇಶ್ ಬಾಬು, ಬಾಲಯ್ಯ, ನಿತಿನ್, ಅಲ್ಲು ಅರ್ಜುನ್ ಹೀಗೆ ದೊಡ್ಡ ಸ್ಟಾರ್ ಜೊತೆ ಅಭಿನಯಿಸಿದ್ದಾರೆ. ಬರೀ 5 ವರ್ಷದಲ್ಲಿ ಬರೋಬ್ಬರಿ 10ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಶ್ರೀಲೀಲಾ ನಟಿಸಿದ್ದಾರೆ. ಆದರರೆ ಈ ಪೈಕಿ ಹೇಳಿಕೊಳ್ಳಿವಂತಹ ಸಕ್ಸಸ್ ಅವರಿಗೆ ಸಿಕ್ಕಿಲ್ಲ. ಅದಕ್ಕೆ ಕಾರಣ ಒಳ್ಳೆ ಕಥೆಗಳನ್ನು ಶ್ರೀಲೀಲಾ ಆಯ್ಕೆ ಮಾಡಿಕೊಳ್ಳುತ್ತಿಲ್ಲ. ಬದಲಾಗಿ ಸಿಕ್ಕ ಸಿಕ್ಕ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಇದು ಅವರ ಸಕ್ಸಸ್ ರೇಟ್ ಕುಸಿತಕ್ಕೆ ಕಾರಣ ಎನ್ನಲಾಗುತ್ತಿದೆ. ಶ್ರೀಲೀಲಾ ಓಡ್ತಿರುವ ಸ್ಪೀಡ್ ನೋಡಿ ಇಸ್ಮಾರ್ಟ್ ಶಂಕರ್ ಹೀರೋಯಿನ್ ನಿಧಿಗೆ ಅಭಿಮಾನಿಯೊಬ್ಬ ಪ್ರಶ್ನೆ ಕೇಳಿದನ್ನೇ ಅದನ್ನೇ ಆಕೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ಕೊಟ್ಟಿದ್ದಾರೆ.
2019ರಲ್ಲಿ ಇಸ್ಮಾರ್ಟ್ ಶಂಕರ್ ಬಳಿಕ ನೀವು ಏನ್ ಮಾಡಿದ್ರಿ? ಅದೇ 2021ರಲ್ಲಿ ಬಂದ ಶ್ರೀಲೀಲಾ 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ ಎಂದು 0ನಿಧಿಯನ್ನು ಶ್ರೀಲೀಲಾ ಹೋಲಿಕೆ ಮಾಡಿದ್ದಾನೆ. ಇದಕ್ಕೆ ನಿಧಿ ಸರಿಯಾಗಿ ಉತ್ತರ ಕೊಟ್ಟಿದ್ದಾರೆ. ಇಸ್ಮಾರ್ಟ್ ಶಂಕರ್ ಬಳಿಕ ಹೀರೋ ಚಿತ್ರದಲ್ಲಿ ನಟಿಸಿದ್ದೇನೆ. ಆ ನಂತರ ಮೂರು ತಮಿಳು ಸಿನಿಮಾ ಮಾಡಿದ್ದೇನೆ. ಹರಿಹರ ವೀರ ಮಲ್ಲು ಸಿನಿಮಾ ಮಾಡಿದ್ದೇನೆ. ಒಳ್ಳೆ ಕಥೆಯನ್ನು ಆಯ್ಕೆ ಮಾಡಿಕೊಳ್ಳಲು ಸಮಯ ಬೇಕಾಗುತ್ತದೆ. ಒಳ್ಳೆ ಚಿತ್ರದಲ್ಲಿ ನಟಿಸುವುದು ನನ್ನ ಉದ್ದೇಶ. ನನಗೆ ಯಾವುದೇ ರೀತಿ ಭಯವಿಲ್ಲ. ನಾನು ಇಲ್ಲಿಯೇ ಇರುತ್ತೇನೆ ಬ್ರದರ್..ಡೋಂಟ್ ವರಿ ಎಂದು ಕಮೆಂಟ್ ಮಾಡಿದ್ದಾರೆ.
ಸಮಯ ಹಿಡಿದರು ಪರವಾಗಿಲ್ಲ. ಒಳ್ಳೆ ಸಿನಿಮಾ, ಒಳ್ಳೆಯಲ್ಲಿ ನಟಿಸೋದು ನಿಧಿ ಅಗರ್ವಾಲ್ ಉದ್ದೇಶ. ಅದೇ ರೀತಿ ಆಕೆ ಕೂಡ ಹೆಜ್ಜೆ ಇಡುತ್ತಿದ್ದಾಳೆ. ಸಿಕ್ಕ ಸಿಕ್ಕ ಪಾತ್ರಗಳನ್ನು ಮಾಡುತ್ತಿಲ್ಲ. ನಿಧಿ ಕಮೆಂಟ್ ಫುಲ್ ವೈರಲ್ ಆಗಿದ್ದು, ಮಾಸ್ ರಿಪ್ಲೈ, ಅಂತಾ ಅಭಿಮಾನಿಗಳ ಕಮೆಂಟ್ ಮಾಡುತ್ತಿದ್ದಾರೆ. ನಿಧಿ ಅಗರ್ವಾಲ್ ಮೂಲತಃ ಬೆಂಗಳೂರಿನ ಹುಡ್ಗಿ. ಆದರೆ ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಹರಿಹರ ವೀರ ಮಲ್ಲು ಹಾಗೂ ದಿ ರಾಜ್ ಸಾಬ್ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.