ತುಮಕೂರು : ರಾತ್ರೋ ರಾತ್ರಿ ಬರೊಬ್ಬರಿ 80 ಅಡಿಕೆ ಸಸಿಗಳನ್ನು ಹಾಳು ಮಾಡಿರುವ ಘಟನೆ ನಡೆದಿದೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಹಾಗಲವಾಡಿ ಬಳಿಯ ಶಿವರಾಂಪುರ ಗ್ರಾಮದಲ್ಲಿ ಘಟನೆ ನಡೆದಿದೆ. 80 ಅಡಿಕೆ ಸಸಿಗಳನ್ನ ಕಳೆದುಕೊಂಡು ರೈತ ತಿರುಮಲ್ಲಯ್ಯ ಕಣ್ಣೀರು ಹಾಕುತ್ತಿದ್ದು, ಕೈ ಮುಗಿದು ನಮ್ಮನ್ನ ಕಾಪಾಡಿ ಎಂದು ಬೇಡಿಕೊಂಡಿದ್ದಾರೆ.
ಒಂದೇ ರಾತ್ರಿಯಲ್ಲಿ ರೈತ ತಿರುಮಲಯ್ಯ ಅವರಿಗೆ ಸೇರಿದ 80 ಅಡಿಕೆ ಸಸಿಗಳನ್ನು ಕಡಿದು ಹಾಕಿದ್ದಾರೆ. ಈ ಹಿಂದೆಯೂ ಮೆಡಿಸಿನ್ ಸೌತೆಕಾಯಿ ಬೆಳೆಯನ್ನು ನಾಶಾ ಮಾಡಿದ್ದರು. ದೂರು ನೀಡಿದ್ದರೂ ಚೇಳೂರು ಪೊಲೀಸ್ ಠಾಣೆಯವರು ಯಾರನ್ನೂ ಬಂಧಿಸಿರಲಿಲ್ಲ. ಇತ್ತೀಚೆಗಷ್ಟೇ ನಾಲ್ಕು ಲಕ್ಷ ಸಾಲ ಮಾಡಿ ಬೋರ್ ವೆಲ್ ಮಾಸಿದ್ದರು. ಆದರೆ ಇದೀಗ ಅಡಿಕೆ ಸಸಿ ನಾಶ ಆಗಿರೋದನ್ನ ನೋಡಿ ತಿರುಮಲಯ್ಯ ಕಂಗಾಲಾಗಿದ್ದಾರೆ.