ಆಂಜನೇಯ ಸ್ವಾಮಿಯನ್ನು ನಾವು ಮಂಗಳವಾರದ ದಿನದಂದು ಪೂಜಿಸಬೇಕು. ಇದು ಆಂಜನೇಯನ ದಿನವಾಗಿದೆ. ಮಂಗಳವಾರದ ದಿನದಂದು ಶುದ್ಧ ಮನಸ್ಸಿನಿಂದ ಆಂಜನೇಯ ಸ್ವಾಮಿಯನ್ನು ಪೂಜಿಸುವುದರಿಂದ, ಆತನ ಮಂತ್ರಗಳನ್ನು ಪಠಿಸುವುದರಿಂದ ಭಕ್ತರ ಸಕಲ ಇಷ್ಟಾರ್ಥಗಳು ಈಡೇರುತ್ತದೆ ಎನ್ನುವ ನಂಬಿಕೆಯಿದೆ.
ದೇಹಕ್ಕೆ ಒಳ್ಳೆಯದು ಅಂತ ಹೆಚ್ಚು ಖರ್ಜೂರ ತಿನ್ನೋ ಮುನ್ನ ಹುಷಾರ್! ಈ ಭಾಗಕ್ಕೆ ಹಾನಿಕಾರಕ!
ಜ್ಯೋತಿಷ್ಯದಲ್ಲಿ, ಒಬ್ಬ ವ್ಯಕ್ತಿಯು ತನ್ನ ಜಾತಕದಲ್ಲಿ ಕಡಿಮೆ, ಮಧ್ಯಮ ಮತ್ತು ಅಧಿಕ ಮಂಗಲ ದೋಷವನ್ನು ಹೊಂದಿರಬಹುದು. ಕಡಿಮೆ ಮತ್ತು ಮಧ್ಯಮ ಮಂಗಲ ದೋಷ ಚಿಂತೆ ಮಾಡುವ ವಿಷಯವಲ್ಲ ಆದರೆ, ಹೆಚ್ಚು ಮಂಗಳ ದೋಷ ನಿಮ್ಮ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು.
ಈ ದೋಷವು ಕೆಲವು ಸ್ಥಳೀಯರಿಗೆ ಮದುವೆಯಲ್ಲಿ ವಿಳಂಬವನ್ನು ಉಂಟುಮಾಡುತ್ತದೆ. ಆದ್ದರಿಂದ ಸಾಧ್ಯವಾದಾಗಲೆಲ್ಲಾ ಮಂಗಳ ಗ್ರಹವನ್ನು ಮೆಚ್ಚಿಸಲು ನೀವು ಪರಿಹಾರಗಳನ್ನು ಅನುಸರಿಸುವುದು ಉತ್ತಮ. ಮತ್ತು ಪ್ರಾಮಾಣಿಕವಾಗಿ, ನೀವು ಮಂಗಳವಾರ ಈ ಕೆಲಸಗಳನ್ನು ಮಾಡುತ್ತಿದ್ದರೆ ಅಥವಾ ಈ ವಸ್ತುಗಳನ್ನು ಖರೀದಿಸುತ್ತಿದ್ದರ, ನಿಲ್ಲಿಸಿ.
ಉದ್ದಿನ ಬೇಳೆ: ಮಂಗಳವಾರ ಯಾವುದೇ ಕಾರಣಕ್ಕೂ ಉದ್ದಿನ ಬೇಳೆಯನ್ನ ಮನೆಗೆ ತರಬಾರದು. ಜ್ಯೋತಿಷ್ಯದ ಪ್ರಕಾರ ಉದ್ದಿನ ಬೇಳೆ ಶನಿ ಗ್ರಹಕ್ಕೆ ಸಂಬಂಧಪಟ್ಟಿದ್ದಾಗಿದೆ. ಶನಿ ಹಾಗೂ ಮಂಗಳ ಗ್ರಹದ ನಡುವೆ ಉತ್ತಮವಾದ ಸಂಬಂಧವಿಲ್ಲ. ಮಂಗಳವಾರ ಉದ್ದಿನ ಬೆಳೆ ತಂದರೆ ಅದರಿಂದ ಕುಟುಂಬದಲ್ಲಿ ಜಗಳ ಆಗುತ್ತದೆ. ಇದು ನಿಮ್ಮ ಮನೆಯ ಶಾಂತಿಯನ್ನ ಹಾಳು ಮಾಡುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಮಂಗಳವಾರ ಉದ್ದಿನ ಬೇಳೆಯನ್ನ ಮನೆಗೆ ತರಬೇಡಿ.
ಕಪ್ಪು ಬಣ್ಣದ ಬಟ್ಟೆ ಧರಿಸಬೇಡಿ: ಮಂಗಳವಾರ ಯಾವುದೇ ಕಾರಣಕ್ಕೂ ನೀವು ಮಂಗಳವಾರ ಕಪ್ಪು ಬಣ್ಣದ ಬಟ್ಟೆಯನ್ನ ಧರಿಸಬೇಡ. ಅಲ್ಲದೇ, ಈ ದಿನ ಕಪ್ಪು ಬಣ್ಣದ ಬಟ್ಟೆಯನ್ನ ಮನೆಗೆ ತರಲೂ ಬೇಡಿ. ಮೊದಲೇ ಹೇಳಿದಂತೆ ಶನಿ ಹಾಗೂ ಮಂಗಳನ ನಡುವೆ ಉತ್ತಮವಾದ ಸಂಬಂಧವಿಲ್ಲ.
ಈ ಕಪ್ಪು ಬಣ್ಣ ಸಹ ಉದ್ದಿನ ಬೇಳೆಯ ಹಾಗೆ ಶನಿಗೆ ಸಂಬಂಧಿಸಿದೆ. ಹಾಗಾಗಿ ನೀವು ಮಂಗಳವಾರ ಕಪ್ಪು ಬಣ್ಣದ ಬಟ್ಟೆ ಧರಿಸಬೇಡಿ ಹಾಗೂ ಮನೆಗೆ ಯಾವುದೇ ಕಾರಣಕ್ಕೂ ತರಬೇಡಿ. ಇದರಿಂದ ಸಮಸ್ಯೆಗಳಾಗುತ್ತದೆ. ಮಂಗಳವಾರದಂದು, ಕಪ್ಪು ಧರಿಸುವುದು ನಿಮ್ಮ ಪ್ರಗತಿ ಮತ್ತು ಸಂಪತ್ತಿನ ಸಮಸ್ಯೆಯನ್ನ ಅನುಭವಿಸಬೇಕಾಗುತ್ತದೆ.
ಮಂಗಳವಾರ ಶೇವ್ ಮಾಡಬಾರದು: ಯಾವುದೇ ಕಾರಣಕ್ಕೂ ಮಂಗಳವಾರ ಶೇವ್ ಮಾಡಬಾರದು. ಮಂಗಳ ಗ್ರಹವು ಶಾಖದೊಂದಿಗೆ ಸಂಪರ್ಕ ಹೊಂದಿದೆ ಎನ್ನಲಾಗುತ್ತದೆ. ಈ ದಿನವು ದೇಹದ ಕಾರ್ಯಗಳು ಮತ್ತು ರಕ್ತದಂತಹ ಸಂಬಂಧಿತ ಪದಾರ್ಥಗಳ ಮೇಲೆ ಪ್ರಭಾವ ಬೀರುವ ಮತ್ತು ಕ್ರೋಧವನ್ನು ಉಂಟುಮಾಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಶೇವಿಂಗ್ ಮಾಡುವುದರಿಂದ ನಿಮಗೆ ಸಮಸ್ಯೆಗಳಾಗಬಹುದು. ಇದರಿಂದ ನಿಮಗೆ ಆರೋಗ್ಯ ಸಮಸ್ಯೆಗಳು ಸಹ ಬರಬಹುದು.
ಅಲ್ಲದೇ, ಮಂಗಳವಾರ ಯಾವುದೇ ಕಾರಣಕ್ಕೂ ಉಗುರು ಕತ್ತರಿಸಬಾರದು. ಉಗುರು ಶನಿಗೆ ಸಂಬಂಧಿಸಿದ ವಸ್ತುವಾಗಿದೆ. ಇದನ್ನ ಮಂಗಳವಾರ ಕತ್ತರಿಸಿದರೆ ಅದರಿಂದ ಸಮಸ್ಯೆಗಳಾಗುತ್ತದೆ. ಮಂಗಳ ಹಾಗೂ ಶನಿ ಇಬ್ಬರ ಕೋಪಕ್ಕೂ ಗುರಿಯಾಗಬೇಕಾಗುತ್ತದೆ. ಇದು ನಮ್ಮ ಜೀವನದಲ್ಲಿನ ಕಷ್ಟಗಳನ್ನ ಹೆಚ್ಚು ಮಾಡುತ್ತದೆ. ಒಂದು ರೀತಿಯಾಗಿ ನೆಮ್ಮದಿಯೇ ಇರುವುದಿಲ್ಲ ಎನ್ನಬಹುದು.
ಹೊಸ ಮನೆಗೆ ಗುದ್ದಲಿ ಪೂಜೆ ಮಾಡಬೇಡಿ: ಜ್ಯೋತಿಷ್ಯದಲ್ಲಿ ಹನುಮಂತನನ್ನು ಭೂಮಿಯ ಮಗ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಮಂಗಳವಾರ ಹೊಸ ಮನೆಗೆ ಭೂಮಿಯನ್ನ ಖರೀದಿಸಬೇಡಿ ಅಥವಾ ಹೊಸ ಮನೆ ಕಟ್ಟಲು ಭೂಮಿಪೂಜೆಯನ್ನು ಮಾಡಬಾರದು ಎನ್ನಲಾಗುತ್ತದೆ.