ಬೆಂಗಳೂರು: ಯುಗಾದಿ ಪ್ರತಿವರ್ಷ ಬಹಳ ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಪ್ರತಿ ವರ್ಷ ಹಬ್ಬದ ಸಮಯದಲ್ಲಿ ಮಾರುಕಟ್ಟೆ ಜನ ಜಂಗಳಿಯಿಂದ ಕೂಡಿರುತ್ತದೆ. ಖರೀದಿ ಭರಾಟೆ ಜೋರಾಗಿರುತ್ತದೆ. ಯುಗಾದಿ ಹಬ್ಬದ ಆಚರಣೆ ಹಿನ್ನೆಲೆ ನಾಡಿದಾದ್ಯಂತ ಖರೀದಿ ಬರದಿಂದ ಸಾಗುತ್ತಿದೆ.
ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು ಹೀಗೆ ಮಾಡಿ: ಈ 4 ಸ್ಥಳಗಳಲ್ಲಿ ದೀಪ ಹಚ್ಚುವುದನ್ನು ಮರೆಯಬೇಡಿ..!
ಹೂವು, ಹಣ್ಣು-ಹಂಪಲು, ತರಕಾರಿಯ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ, ಹಣ್ಣುಗಳ ದರ ಕೊಂಚ ದುಬಾರಿಯಾಗಿದ್ದು, ಹೂವುಗಳ ದರ ಗಗನ ಕುಸುಮವಾಗಿದೆ. ಇನ್ನು ತರಕಾರಿ ದರ ಯಥಾಸ್ಥಿತಿ ಇದೆ. ಬೆಲೆ ಏರಿಕೆಯಾದರೂ ಗ್ರಾಹಕರು ಬೇರೆ ವಿಧಿಯಿಲ್ಲದೆ ದುಬಾರಿ ಬೆಲೆ ತೆತ್ತು ಖರೀದಿಸುತ್ತಿದ್ದಾರೆ.
ಯಾವ ಹೂವಿನ ಬೆಲೆ ಎಷ್ಟಿದೆ?
ಕನಕಾಂಬರ ಮಾರು 600ರೂ, ಸೇವಂತಿ ಮಾರು 300ರೂ, ಮಲ್ಲಿಗೆ ಹೂವಿನ ಒಂದು ದಿಂಡಿಗೆ 200ರೂ, ಮಾವಿನ ಎಲೆ, ಬೇವಿನ ಎಲೆ ಒಂದು ಕಟ್ಟು 25-30 ರೂಪಾಯಿ ಇದೆ. ಹಬ್ಬದ ಹಿನ್ನೆಲೆ ಹೂವು, ಹಣ್ಣಿನ ಬೆಲೆ ಡಬಲ್ ಆಗಿದೆ ಅಂತ ಗ್ರಾಹಕರು ಕಂಗಾಲು.
ಫುಲ್ ಜಾಮ್ ಜಾಮ್
ಯುಗಾದಿ ಮತ್ತು ರಂಜಾನ್ ಹಬ್ಬ ಒಂದರ ಹಿಂದೆ ಒಂದು ಬಂದ ಹಿನ್ನೆಲೆಯಲ್ಲಿ ಜನರು ತಮ್ಮ ತಮ್ಮ ಊರುಗಳತ್ತ ತೆರಳಿದ್ದಾರೆ. ಸಾಲು ಸಾಲು ರಜೆಗಳಿದ್ದು, ಬೆಂಗಳೂರಿನಲ್ಲಿ ನಿನ್ನೆ ರಾತ್ರಿಯೇ ಫುಲ್ ಜಾಮ್ ಆಗಿತ್ತು.
ಜನರು ಬಸ್ಸು, ಹಾಗೂ ತಮ್ಮ ತಮ್ಮ ವಾಹನಗಳಲ್ಲಿ ಊರುಗಳಿಗೆ ತೆರಳುತ್ತಿದ್ದಾರೆ. ಇದ್ರಿಂದ ಗೋವರ್ಧನ್ ಥಿಯೇಟರ್, ಗೊರಗುಂಟೆಪಾಳ್ಯ ಬಳಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ವಾಹನಗಳು ಸಾಲುಗಟ್ಟಿ ನಿಂತಿತ್ತು, ಸವಾರರು ಪರದಾಡುವಂತಾಯ್ತು. ಇಂದು ಕೂಡ ಫುಲ್ ಜಾಮ್ ಆಗುವ ಸಾಧ್ಯತೆ ಇದೆ.