ದಾವಣಗೆರೆ: ಹೊಸ ಪಕ್ಷ ಕಟ್ಟೇನು, ಆದ್ರೆ ನನ್ನ ಹೆಣ ಕೂಡ ಕಾಂಗ್ರೆಸ್ಗೆ ಹೋಗಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ದಾವಣಗೆರೆಯಲಿ ಮಾತನಾಡಿದ ಅವರು, ನಾನು ಹೈಕಮಾಂಡ್ಗೆ ಕ್ಷಮೆ ಕೇಳಿಲ್ಲ. ಯಾವುದೂ ಪತ್ರ ಕೂಡ ಬರೆದಿಲ್ಲ, ಕೈಮುಗಿದಿಲ್ಲ.
ನನಗೆ ಅದರ ಅವಶ್ಯಕತೆ ಇಲ್ಲ. ಇನ್ನು ಡಿಕೆಶಿ ಸಿಎಂ, ವಿಜಯೇಂದ್ರ ಉಪಮುಖ್ಯ ಮಂತ್ರಿ ಅಂತ ದೆಹಲಿಯಲ್ಲಿ ಒಪ್ಪಂದ ಆಗಿತ್ತು. ನನಗೆ ಗೊತ್ತಿಲ್ವಾ ಅದು? ಕಾಂಗ್ರೆಸ್ ಸೇರುತ್ತಾರೆಂದು ಹೇಳುತ್ತಿದ್ದಾರೆ. ಅದು ಸುಳ್ಳು. ನಾನು ಸತ್ತರೂ, ನನ್ನ ಹೆಣ ಕೂಡ ಕಾಂಗ್ರೆಸ್ಗೆ ಹೋಗಲ್ಲ ಎಂದರು.
ಏನಾದರೂ ಮಾಡಿ ಶಕ್ತಿ ತೋರಿಸುವೆ. ಸಮಯ ಬಂದಾಗ ಹೊಸ ಪಕ್ಷ ಕಟ್ಟಲು ನಾಂದಿ ಹಾಡುವೆ. ಹೊಸ ಪಕ್ಷ ಕಟ್ಟಲು ಹೋಗಿ ಕೆಲ ನಾಯಕರು ವಿಫಲರಾದರೆಂದು ಹೇಳುತ್ತಿದ್ದಾರೆ. ಆದರೆ, ದೇವೇಗೌಡರು, ಕುಮಾರಸ್ವಾಮಿ ರೀತಿ ಸಕ್ಸಸ್ ಆಗಿ 50 – 60 ಸೀಟ್ ಗೆದ್ದರೆ ನಾನೇ ಸಿಎಂ ಆಗಬಹುದು.
ಆಗ ಹೈಕಮಾಂಡ್ ನನ್ನ ಮನೆಗೆ ಬಂದು ನೀವೇ ಸಿಎಂ ಆಗಿ ಅಂತ ಹೇಳಬಹುದು. ರಾಜ್ಯ ಬಿಜೆಪಿಗೆ ನಾನು ಅಪರೇಷನ್ ಮಾಡಲ್ಲ. ಅದಕ್ಕೆ ಅದುವೇ ಡೆಲಿವರಿ ಆಗಲಿದೆ, ಹೊಸ ಕೂಸು ಹುಟ್ಟಲಿದೆ ಎಂದು ವ್ಯಂಗ್ಯ ವಾಡಿದರು.