Close Menu
Ain Live News
    Facebook X (Twitter) Instagram YouTube
    Monday, June 9
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ನಿಜ್ಜಾರ್ ಹತ್ಯೆ ಪ್ರಕರಣದಲ್ಲಿ ಮೋದಿ, ಜೈಶಂಕರ್, ದೋವಲ್ ನಂಟಿರುವ ಬಗ್ಗೆ ಪುರಾವೆಯಿಲ್ಲ: ಸ್ಪಷ್ಟನೆ ನೀಡಿದ ಕೆನಡಾ

    By Author AINNovember 23, 2024
    Share
    Facebook Twitter LinkedIn Pinterest Email
    Demo

    2023ರ ಜೂನ್ ನಲ್ಲಿ ನಡೆದ ಖಾಲಿಸ್ತಾನ ಪ್ರತ್ಯೇಕತಾವಾದಿ ನಾಯಕ ಹರದೀಪ್ ಸಿಂಗ್ ನಿಜ್ಜಾರ್ ಹತ್ಯೆ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ವ್ಯವಹಾರ ಸಚಿವ ಎಸ್.ಜೈಶಂಕರ್ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರಿಗೆ ನಂಟು ಕಲ್ಪಿಸುವ ಪುರಾವೆಯು ಇರುವ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲವೆಂದು ಕೆನಡಾ ಸರಕಾರ ಸ್ಪಷ್ಟನೆ ನೀಡಿದೆ.

    ಎಸ್.ಜೈಶಂಕರ್, ದೋವಲ್ ಹಾಗೂ ನರೇಂದ್ರ ಮೋದಿಯವರ ಬೆಂಬಲದೊಂದಿಗೆ ಭಾರತದ ಗೃಹ ಸಚಿವ ಅಮಿತ್ ಶಾ ಅವರು ನಿಜ್ಜಾರ್ ಹತ್ಯೆಗೆ ಹಸಿರು ನಿಶಾನೆ ನೀಡಿದ್ದರೆಂದು ಒಟ್ಟಾವದಲ್ಲಿರುವ ರಾಷ್ಟ್ರೀಯ ಭದ್ರತಾ ಅಧಿಕಾರಿಯವರ ವರದಿಯನ್ನು ಆಧರಿಸಿ ಕೆನಡಾದ ಸುದ್ದಿಸಂಸ್ಥೆಯೊಂದು ವರದಿ ಮಾಡಿದ ಮರುದಿನವೇ ಕೆನಡಿಯನ್ ಸರಕಾರವು ಈ ಹೇಳಿಕೆ ನೀಡಿದೆ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆನಡಾ ಪ್ರಧಾನಿಯವರ ರಾಷ್ಟ್ರೀಯ ಭದ್ರತೆ ಹಾಗೂ ಬೇಹುಗಾರಿಕಾ ಸಲಹೆಗಾರ್ತಿ ನತಾಲಿ ಜಿ. ಡ್ರೂಯಿನ್, ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಪ್ರಧಾನಿ ಮೋದಿ, ವಿದೇಶಾಂಗ ಸಚಿವ ಜೈಶಂಕರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕೈವಾಡ ಇರುವ ಬಗ್ಗೆ ಉಲ್ಲೇಖಿಸಲಾಗಿದ್ದು, ಮಾಧ್ಯಮಗಳ ಈ ವರದಿ ಊಹಾಪೋಹವಾಗಿದ್ದು, ತಪ್ಪಾದ ಆಧಾರದ ಮೇಲೆ ಬರೆಯಲಾಗಿದೆ ಎಂದು ಹೇಳಿದ್ದಾರೆ.

    ಕೆನಡಾ ಸರ್ಕಾರವು ಈ ಹೇಳಿಕೆಯನ್ನು ನೀಡಿಲ್ಲ, ಅಥವಾ ಕೆನಡಾದಲ್ಲಿ ನಡೆಯುವ ಗಂಭೀರ ಅಪರಾಧ ಚಟುವಟಿಕೆಗಳಲ್ಲಿ ಪ್ರಧಾನಿ ಮೋದಿ, ವಿದೇಶಾಂಗ ಸಚಿವ ಜೈಶಂಕರ್ ಅಥವಾ ಎನ್‌ಎಸ್‌ಎ ಅಜಿತ್ ದೋವಲ್‌ ಇರುವ ಬಗ್ಗೆ ಯಾವುದೇ ಪುರಾವೆಗಳಿಲ್ಲ. ಈ ವರದಿ ಕೇವಲ ಊಹಾಪೋಹವನ್ನು ಆಧರಿಸಿದ್ದಾಗಿದೆ ಎಂದು ತಿಳಿಸಿದ್ದಾರೆ.

    ಸಾರ್ವಜನಿಕ ಸುರಕ್ಷತೆಗೆ ಗಂಭೀರವಾದ ಬೆದರಿಕೆಯಿರುವ ಹಿನ್ನೆಲೆಯಲ್ಲಿ ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್( ಆರ್ಸಿಎಂಪಿ ) ಹಾಗೂ ಇತರ ಅಧಿಕಾರಿಗಳು ಆಕ್ಟೋಬರ್ 14ರಂದು ನೀಡಿದ ಹೇಳಿಕೆಯೊಂದರಲ್ಲಿ ಕೆನಡಾದಲ್ಲಿ ಕ್ರಿಮಿನಲ್ ಚಟುವಟಿಕೆಗಳನ್ನು ಭಾರತ ಸರಕಾರದ ಏಜೆಂಟರುಗಳು ನಡೆಸಿದ್ದಾರೆಂದು ಆಪಾದಿಸಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿ, ಸಚಿವ ಜೈಶಂಕರ್ ಅಥವಾ ರಾಷ್ಟ್ರೀಯ ಭದ್ರತಾ ಅಧಿಕಾರಿ ಅಜಿತ್ ದೋವಲ್ ಅವರಿಗೆ ಕೆನಡಾದೊಳಗೆ ನಡೆದ ಕ್ರಿಮಿನಲ್ ಚಟುವಟಿಕೆಗಳೊಂದಿಗೆ ಸಂಬಂಧವಿದೆ ಹಾಗೂ ಆ ಬಗ್ಗೆ ಪುರಾವೆಯಿದೆಯೆಂದು ಕೆನಡಾ ಸರಕಾರ ಎಂದೂ ಹೇಳಿಲ್ಲವೆಂದು ನತಾಲಿ ತಿಳಿಸಿದ್ದಾರೆ.


    ಪ್ರಧಾನಿ
    ಮೋದಿ, ಸಚಿವರಾದ ಅಮಿತ್ ಶಾ, ಜೈಶಂಕರ್ ಮತ್ತು ಎನ್ಎಸ್ಎ ಅಜಿತ್ ಧೋವಲ್ ಅವರ ವಿರುದ್ಧ ಕೆನಡಾದ ಸುದ್ದಿಸಂಸ್ಥೆಯು ಪ್ರಕಟಿಸಿದ ವರದಿಗೆ ಭಾರತವು ಗುರುವಾರ ತೀವ್ರ ಪ್ರತಿಭಟನೆಯನ್ನು ವ್ಯಕ್ತಪಡಿಸಿತ್ತು.

    ಈ ರೀತಿಯ ಕಳಂಕಕಾರಿ ಅಪಪ್ರಚಾರವು ಈಗಾಗಲೇ ಹಳಸಿರುವ ಉಭಯದೇಶಗಳ ಬಾಂಧವ್ಯವನ್ನು ಇನ್ನಷ್ಟು ಹದೆಗೆಡಿಸಲಿದೆ ಎಂದು ಭಾರತ ಸರಕಾರದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.

    Demo
    Share. Facebook Twitter LinkedIn Email WhatsApp

    Related Posts

    ಭಾರತದ ಇಬ್ಬರು ದಿಗ್ಗಜ ಕ್ರಿಕೆಟಿಗರಿಗೆ ವಿದಾಯ ನೀಡಲು ಸಿದ್ಧತೆ ನಡೆಸಿದ ಆಸ್ಟ್ರೇಲಿಯಾ ಕ್ರಿಕೆಟ್​..!

    June 8, 2025

    Elon Musk: ರಾಜಕೀಯಕ್ಕೆ ಎಲಾನ್ ಮಸ್ಕ್: ವಿಶ್ವದ ಕೋಟ್ಯಾಧಿಪತಿಯ ಹೊಸ ಪಕ್ಷದ ಹೆಸರೇನು ಗೊತ್ತಾ..?

    June 7, 2025

    ಟ್ರಂಪ್ ಜೊತೆ ಬಿರುಕು: ಟೆಸ್ಲಾ ಷೇರುಗಳು ಶೇ.14 ರಷ್ಟು ಕುಸಿತ – ಮಸ್ಕ್’ಗೆ 13 ಲಕ್ಷ ಕೋಟಿ ರೂ. ನಷ್ಟ

    June 6, 2025

    Pakistan Earthquake: 48 ಗಂಟೆಗಳಲ್ಲಿ 21 ಬಾರಿ ಕಂಪಿಸಿದ ಭೂಮಿ..! ಜನರಲ್ಲಿ ಹೆಚ್ಚಿದ ಆತಂಕ

    June 5, 2025

    ಛೀ.. ಹಣಕ್ಕಾಗಿ ಹೆತ್ತವರನ್ನು ಕೊಂದು 4 ವರ್ಷಗಳ ಕಾಲ ಶವಗಳೊಂದಿಗೆ ಬದುಕಿದ ಮಗಳು!

    June 5, 2025

    ಅಮೆರಿಕ ಅಧ್ಯಕ್ಷ ಟ್ರಂಪ್ ವಿರುದ್ಧ ಗಂಭೀರ ಆರೋಪ ಮಾಡಿದ ಮಸ್ಕ್..! ಕಾರಣವೇನು ಗೊತ್ತಾ..?

    June 4, 2025

    ಫೈನಲ್ ಫೈಟ್: RCBಗೆ ಶುಭ ಕೋರಿದ ಬ್ರಿಟನ್ ಮಾಜಿ ಪ್ರಧಾನಿ!

    June 3, 2025

    TikTok star: ಪಾಕಿಸ್ತಾನದ 17 ವರ್ಷದ ಟಿಕ್ ಟಾಕ್ ಸ್ಟಾರ್ ಮೇಲೆ ಗುಂಡಿಕ್ಕಿ ಹತ್ಯೆ..!

    June 3, 2025

    ಪಾಕಿಸ್ತಾನದಲ್ಲಿ ಭೂಕಂಪ: ಜೈಲಿನ ಗೋಡೆ ಕುಸಿತ, 216 ಕೈದಿಗಳು ಪರಾರಿ

    June 3, 2025

    ಬಾಂಗ್ಲಾ ಮಾಜಿ ಪ್ರಧಾನಿ ವಿರುದ್ಧ ವಿಚಾರಣೆ ಶುರು: ಶೇಖ್ ಹಸೀನಾಗೆ ಮರಣದಂಡನೆ ಸಾಧ್ಯತೆ!

    June 2, 2025

    ಲಕ್ಷಾಂತರ ಜೇನುನೊಣಗಳನ್ನು ಸಾಗಿಸುತ್ತಿದ್ದ ಟ್ರಕ್ ಪಲ್ಟಿ: ಆಗಿದ್ದೇನು? ಆಮೇಲೇನಾಯ್ತು?

    June 1, 2025

    Nigeria floods: ನೈಜೀರಿಯಾದಲ್ಲಿ ಪ್ರವಾಹ: 111 ಮಂದಿ ಸಾವು

    May 31, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.