ಬೀದರ್ : ಸಿಬಿಐ ಆಫೀಸರ್ ಹೆಸರಲ್ಲಿ ಬ್ಲ್ಯಾಕ್ ಮೇಲ್ ಮಾಡಿ ಎರಡು ಲಕ್ಷ ಕಣಕ್ಕೆ ಡಿಮ್ಯಾಂಟ್ ಇಟ್ಟಿರುವ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ನಡೆದಿದೆ.
ನಗರದ ಕರೀಮ್ ಕಾಲೋನಿ ನಿವಾಸಿ ಮುನಿರ್ ತುರುಂಚಿ ಎಂಬ ವ್ಯಕ್ತಿಗೆ ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ವ್ಯಕ್ತಿಯೋರ್ವ ಕರೆ ಮಾಡಿದ್ದು, ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಮಗಳು ಸಿಇಟಿ ಎಕ್ಸಾಂ ಬರೆಯಲು ತೆರಳಿದ್ದಾಳೆ. ಈ ವೇಳೆಯೆ ಮುನೀರ್ ಅವರಿಗೆ ಬೆದರಿಕೆ ಕರೆ ಬಂದಿದೆ.
ಸಿಇಟಿ ಪರೀಕ್ಷಾರ್ಥಿಗಳು ಜನಿವಾರ ತೆಗೆಸಿದ ಸಿಬ್ಬಂದಿ ; ಬ್ರಾಹ್ಮಣ ಸಮುದಾಯ ಆಕ್ರೋಶ
ಸಿಬಿಐ ಅಧಿಕಾರಿಗಳೆಂದು ಹೇಳಿಕೊಂಡು ಕರೆ ಮಾಡಿದ್ದ ವಂಚಕರು ನಾಲ್ಕು ಜನ ಯುವತಿಯರೊಂದಿಗೆ ನಿಮ್ಮ ಮಗಳನ್ನು ಬಂಧಿಸಲಾಗಿದೆ. ಅವರನ್ನು ಬಿಡಬೇಕಾದರೆ 2 ಲಕ್ಷಕ್ಕೆ ನೀಡಬೇಕು ಎಂದು ಡಿಮ್ಯಾಂಡ್ ಮಾಡಿದ್ದಾರೆ. 2 ಲಕ್ಷ ಇಲ್ಲ ಅಂದಿದ್ದಕ್ಕೆ, ಎಷ್ಟಿದೆ ಅಷ್ಟು ಹಾಕಿ ಎಂದು 14,000 ಹಣ ಹಾಕಿಸಿಕೊಂಡಿದ್ದಾರೆ. ಇದಾದ ಬಳಿಕ ಮುನೀರ್ ಪೊಲೀಸ್ ಠಾಣೆಗೆ ತಂದೆ ಹೋದ ಬಳಿಕ ಇದು ಫ್ರಾಡ್ ಆಗಿದೆ ಎಂದು ಗೊತ್ತಾಗಿದೆ ನಂತರ ಎಕ್ಸಾಮ್ ಸೆಂಟರ್ ಗೆ ದೌಡಾಯಿಸಿ ಮಗಳನ್ನು ನೋಡಿ ಮುನೀರ್ ನಿಟ್ಟುಸಿರು ಬಿಟ್ಟಿದ್ದಾರೆ.