ಬೆಂಗಳೂರು :- ವ್ಯಕ್ತಿಯೋರ್ವನ ಮೇಲೆ ಲಾಂಗು, ಮಚ್ಚಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಹೆಚ್ ಎ ಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ಇದೇ ತಿಂಗಳ ಕಳೆದ 17 ರ ಮಧ್ಯರಾತ್ರಿ ಘಟನೆ ಜರುಗಿದ್ದು, ಹಳೇ ದ್ವೇಷದ ಹಿನ್ನಲೆ ಈ ಡೆಡ್ಲಿ ಅಟ್ಯಾಕ್ ನಡೆದಿದೆ.
ನಹೀಮ್ ಎಂಬಾತ ಮಾರಣಾಂತಿಕ ಹಲ್ಲೆಗೊಳಗಾದ ವ್ಯಕ್ತಿ. ಶಪೀಕ್, ಇಮ್ರಾನ್, ಸದ್ದಾಂ ಎಂಬುವರಿಂದ ಕೃತ್ಯ ನಡೆದಿದೆ. ಎರಡು ವರ್ಷದ ಹಿಂದೆ ಶಪೀಕ್ ಮೇಲ್ ನಹೀಂ ಅಟ್ಯಾಕ್ ಮಾಡಿದ್ದ. ಘಟನೆ ಬಳಿಕ ಹೆಚ್ ಎಎಲ್ ಬಿಟ್ಟು ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಹೀಮ್ ವಾಸವಿದ್ದ. ಕಳೆದ 17 ನೇ ತಾರೀಖು ಚಿಕ್ಕಮ್ಮನ ಮನೆಗೆ ನಹೀಮ್ ಬಂದಿದ್ದ ಇದೇ ಸಮಯ ನೋಡಿ ನಹೀಮ್ ಮೇಲೆ ಗುಂಪೊಂದು ಡೆಡ್ಲಿ ಅಟ್ಯಾಕ್ ನಡೆಸಿದೆ. ಸದ್ಯ ಗಂಭೀರವಾಗಿ ಗಾಯಗೊಂಡಿದ್ದ ಗಾಯಾಳುಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.