Close Menu
Ain Live News
    Facebook X (Twitter) Instagram YouTube
    Saturday, June 28
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಶನಿವಾರ ಈ ಐದು ಕೆಲಸಗಳನ್ನು ಮಾಡಿದ್ರೆ ಶನಿದೋಷ ದೂರವಾಗತ್ತೆ.. ತಪ್ಪದೇ ಮಾಡಿ!

    By AIN AuthorJune 28, 2025
    Share
    Facebook Twitter LinkedIn Pinterest Email
    Demo

    ಶನಿವಾರ ನ್ಯಾಯದ ದೇವರು ಶನಿ ದೇವರಿಗೆ ಅರ್ಪಿತವಾಗಿದೆ. ಶನಿ ದೇವರು ಪ್ರತಿಯೊಬ್ಬ ವ್ಯಕ್ತಿಯ ಕರ್ಮಗಳ ಅನುಸಾರ ಶುಭ ಮತ್ತು ಅಶುಭ ಫಲಿತಾಂಶವನ್ನ ನೀಡುತ್ತಾನೆ. ಶನಿದೇವರು ಅಸಾಧಾರಣ ಶಕ್ತಿಗಳನ್ನು ಹೊಂದಿರುವ ದೇವರು. ಶನಿದೇವ ಸೂರ್ಯನ ಮಗ, ಆದರೆ ಅವರಿಗೆ ಸೂರ್ಯ ದೇವರ ಜೊತೆ ಹೊಂದಾಣಿಕೆ ಸರಿಯಿಲ್ಲ. ಶನಿದೇವನ ಅಶುಭ ಸ್ಥಿತಿಯಲ್ಲಿ ಯಾವುದೇ ಒಬ್ಬ ವ್ಯಕ್ತಿಯು ಅನೇಕ ರೀತಿಯ ತೊಂದರೆಗಳನ್ನು ಎದುರಿಸಬೇಕಾಗಬಹುದು. ಆದರೆ ಶನಿವಾರ ಕೆಲವು ಕೆಲಸಗಳನ್ನ ಭಕ್ತಿಯಿಂದ ಮಾಡುವ ಮೂಲಕ ಶನಿದೇವರ ಆಶೀರ್ವಾದ ಪಡೆಯಬಹುದು.

    ಎಷ್ಟು ದಿನಕ್ಕೊಮ್ಮೆ ಬಾತ್ ಟವೆಲ್ ವಾಶ್ ಮಾಡ್ಬೇಕು? ತಜ್ಞರು ಹೇಳುವುದು ಹೀಗಿದೆ!

    ಶನಿ ದೇವನನ್ನು ನ್ಯಾಯದ ದೇವರು ಎನ್ನುವ ಹೆಸರಿನಿಂದಲೂ ಕರೆಯಲಾಗುತ್ತದೆ. ಶನಿದೇವನು ಜನರಿಗೆ ಅವರ ಕಾರ್ಯಗಳಿಗೆ ಅನುಗುಣವಾಗಿ ಫಲವನ್ನು ನೀಡುತ್ತಾನೆ ಎಂದು ನಂಬಲಾಗಿದೆ. ಕೆಟ್ಟ ಕೆಲಸ ಮಾಡುವವರನ್ನು ಶಿಕ್ಷಿಸಿದರೆ, ಒಳ್ಳೆಯ ಕೆಲಸ ಮಾಡುವವರನ್ನು ಕಂಡು ಆಶೀರ್ವದಿಸುತ್ತಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿದೇವನು ತನ್ನ ಶುಭ ದೃಷ್ಟಿಯನ್ನು ಯಾರಿಗಾದರೂ ಹಾಕಿದರೆ, ಅವನು ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ಸನ್ನು ಪಡೆಯುತ್ತಾನೆ. ಅವನನ್ನು ರಾಜನನ್ನಾಗಿ ಮಾಡುತ್ತಾನೆ. ಆದರೆ ಒಬ್ಬ ವ್ಯಕ್ತಿಗೆ ಶನಿಯ ಕೆಟ್ಟ ದೃಷ್ಟಿ ಇದ್ದರೆ, ಅವನು ರಾಜನಿಂದ ಭಿಕ್ಷುಕನಾಗಲು ಕೂಡ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಆದ್ದರಿಂದ, ಶನಿ ದೇವರನ್ನು ಮೆಚ್ಚಿಸಲು, ಶನಿವಾರದಂದು ಪೂಜೆ ಮತ್ತು ಉಪವಾಸ ಮಾಡುವುದರಿಂದ ತನ್ನ ಅನುಗ್ರಹವನ್ನು ಕರುಣಿಸುತ್ತಾನೆ.

    ಧಾರ್ಮಿಕ ನಂಬಿಕೆಗಳ ಪ್ರಕಾರ, ಶನಿದೇವನು ಬೇಗನೆ ಕೋಪಗೊಳ್ಳುತ್ತಾನೆ. ಅಂತಹ ಪರಿಸ್ಥಿತಿಯಲ್ಲಿ, ಅವನ ಅನುಗ್ರಹವನ್ನು ಪಡೆಯಲು ಶನಿವಾರ ವಿಧಿ – ವಿಧಾನಗಳ ಪ್ರಕಾರ ಆತನನ್ನು ಪೂಜಿಸಬೇಕು. ನಿಮ್ಮ ಜಾತಕದಲ್ಲಿ ಶನಿ ದೋಷ ಅಥವಾ ಶನಿ ಮಹಾದಶ ಇದ್ದರೆ ಮತ್ತು ಶನಿ ದೇವನನ್ನು ಮೆಚ್ಚಿಸಲು ಬಯಸಿದರೆ, ಶನಿವಾರದಂದು ಈ ಐದು ಕೆಲಸಗಳನ್ನು ಮಾಡಿ. ಶನಿವಾರದಂದು ಈ ಐದು ಕೆಲಸಗಳನ್ನು ಮಾಡುವುದರಿಂದ ಶನಿದೇವನು ಖಂಡಿತವಾಗಿಯೂ ಸಂತುಷ್ಟನಾಗುತ್ತಾನೆ ಮತ್ತು ಅವನ ಆಶೀರ್ವಾದವು ನಿಮ್ಮ ಮೇಲೆ ಬೀಳುತ್ತದೆ ಎಂದು ನಂಬಲಾಗಿದೆ

    ಜಾತಕದಲ್ಲಿ ಶನಿ ಗ್ರಹದ ಸ್ಥಾನ ದುರ್ಬಲವಾಗಿದ್ದರೆ, ಶನಿ ಬಲಗೊಳ್ಳಲು, ಶನಿವಾರದಂದು ಉಪವಾಸ ಮಾಡಿ. ಒಬ್ಬ ವ್ಯಕ್ತಿಯು ತನ್ನ ಜಾತಕದಲ್ಲಿ ಶನಿ ದೋಷವನ್ನು ಹೊಂದಿದ್ದರೆ ಅಥವಾ ಶನಿ ಮಹಾದಶಾದಿಂದ ಬಳಲುತ್ತಿದ್ದರೆ, ಆ ಜನರು ವಿಧಿ – ವಿಧಾನಗಳ ಪ್ರಕಾರ ಉಪವಾಸ ವ್ರತವನ್ನು ಮಾಡಬೇಕು.

    ಶನಿವಾರದಂದು ಭಸ್ಮ, ವಿಭೂತಿ ಅಥವಾ ಕೆಂಪು ಚಂದನವನ್ನು ನಿಮ್ಮ ದೇಹಕ್ಕೆ ಹಚ್ಚಿಕೊಳ್ಳಿ. ಈ ವಸ್ತುಗಳು ಭಗವಾನ್‌ ಹನುಮನಿಗೆ ಮತ್ತು ಶಿವನಿಗೆ ಅತ್ಯಂತ ಪ್ರಿಯವಾದುವು. ಹನುಮಂತನ ಮತ್ತು ಶಿವನ ಕೃಪೆಯಿಂದ ಕೂಡ ಶನಿ ದೋಷ ದೂರಾಗುವುದು

    ಶನಿವಾರದಂದು ಶನಿದೇವನನ್ನು ಮೆಚ್ಚಿಸಲು ಸುಂದರಕಾಂಡ ಮತ್ತು ಭಜರಂಗಬಾಣವನ್ನು ತಪ್ಪದೇ ಪಠಿಸಬೇಕು ಎನ್ನುವ ನಂಬಿಕೆಯಿದೆ.

    ಶನಿವಾರದಂದು ಶಮಿ ವೃಕ್ಷಕ್ಕೆ ನೀರನ್ನು ಅರ್ಪಿಸುವುದರಿಂದ ಸಹ ಪ್ರಯೋಜನವಾಗುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೆ, ಈ ದಿನ ಛಾಯಾ ದಾನ ಮಾಡಿ. ಶನಿವಾರದಂದು ಯಾವುದೇ ರೀತಿಯ ಅಮಲು ಪದಾರ್ಥಗಳಿಂದ ಅಥವಾ ಮಾಂಸ ಮದ್ಯದಂತಹ ವಸ್ತುಗಳಿಂದ ದೂರಿರಬೇಕು. ಶನಿವಾರದಂದು ಮಾಂಸ, ಮೊಟ್ಟೆ, ಈರುಳ್ಳಿ, ಬೆಳ್ಳುಳ್ಳಿ ಇತ್ಯಾದಿಗಳನ್ನು ತಿನ್ನಬಾರದು ಎಂದು ಹೇಳಲಾಗುತ್ತದೆ

    ಶನಿದೇವನನ್ನು ಮೆಚ್ಚಿಸಲು, ಬಡವರಿಗೆ, ಅಂಗವಿಕಲರಿಗೆ, ಅಂಧರಿಗೆ, ಮಹಿಳೆಯರಿಗೆ ಅಥವಾ ಯಾವುದೇ ರೀತಿಯ ದುರ್ಬಲರಿಗೆ ತೊಂದರೆ ಕೊಡಬೇಡಿ. ನಿಮ್ಮ ಹೆತ್ತವರನ್ನು ಗೌರವಿಸಿ ಮತ್ತು ಅವರನ್ನು ನೋಯಿಸಬೇಡಿ.

    Demo
    Share. Facebook Twitter LinkedIn Email WhatsApp

    Related Posts

    ಡಿವೈಡರ್ ಗೆ KSRTC ಬಸ್ ಡಿಕ್ಕಿ: ತಪ್ಪಿದ ದುರಂತ.. ಪ್ರಯಾಣಿಕರು ಸೇಫ್!

    June 28, 2025

    ಎಷ್ಟು ದಿನಕ್ಕೊಮ್ಮೆ ಬಾತ್ ಟವೆಲ್ ವಾಶ್ ಮಾಡ್ಬೇಕು? ತಜ್ಞರು ಹೇಳುವುದು ಹೀಗಿದೆ!

    June 28, 2025

    ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಖ್ಯ ದ್ವಾರ ಇಡುವ ಮಾಹಿತಿ!

    June 28, 2025

    ಬೆಂಗಳೂರಿನ ಈ ಏರಿಯಾಗಳಲ್ಲಿ ನಾಳೆಯಿಂದ ಎರಡು ದಿನ ವಿದ್ಯುತ್ ಕಡಿತ: ಪವರ್ ಕಟ್ ಆಗುವ ಏರಿಯಾಗಳ ಪಟ್ಟಿ ಇಲ್ಲಿದೆ!

    June 28, 2025

    ಬೇರೆಯವರಿಗೆ ತಿಳಿಯದಂತೆ ಕಾಲ್ ರೆಕಾರ್ಡ್ ಮಾಡ್ಬಹುದು: ಈ ಟ್ರಿಕ್ ಫಾಲೋ ಮಾಡಿ!

    June 28, 2025

    ಮಧುಮೇಹಿಗಳೇ ಗಮನಿಸಿ.. ಸಕ್ಕರೆ ಕಾಯಿಲೆಗೆ ಕೆಂಪು ದಂಟಿನ ಸೊಪ್ಪು ವರದಾನ..! ಸಿಕ್ಕರೆ ಬಿಡದೆ ತಿನ್ನಿ

    June 28, 2025

    “ನಿಮ್ಮ ಮದುವೆಯ ಅಥವಾ ಸಪ್ತಪದಿ ಮಹತ್ವವೇನು?

    June 28, 2025

    ಈ ರಾಶಿಯವರ ಹಿತ ಶತ್ರುಗಳನ್ನು ನಿಯಂತ್ರಿಸುವುದೇ ಕಷ್ಟ: ಶನಿವಾರದ ರಾಶಿ ಭವಿಷ್ಯ – 28 ಜೂನ್ 2025

    June 28, 2025

    ರಕ್ತವಾಂತಿಯಿಂದ ನರಳಿ-ನರಳಿ ಪ್ರಾಣಬಿಟ್ಟ ಬೀದಿನಾಯಿಗಳು: ವಿಷಪ್ರಾಶನದ ಶಂಕೆ?

    June 27, 2025

    ಮನೆಯಲ್ಲಿ ಕಪ್ಪು ಹಲ್ಲಿ ಕಾಣಿಸಿಕೊಂಡ್ರೆ ಏನದರ ಸೂಚನೆ: ನಿಮಗೆ ಗೊತ್ತಿಲ್ಲದ ವಿಚಾರ ಇಲ್ಲಿದೆ!

    June 27, 2025

    ಸಿಎಂ ಬದಲಾವಣೆಯ ಅಗತ್ಯವಿಲ್ಲ, ಸಿದ್ದರಾಮಯ್ಯಗೆ ಇರುವಷ್ಟು ಬೆಂಬಲ ಯಾರಿಗೂ ಇಲ್ಲ: ರಾಯರೆಡ್ಡಿ

    June 27, 2025

    ಕೃಷಿ ಸಚಿವ ಚಲುವರಾಯಸ್ವಾಮಿ ಕಾನೂನು ಸಮರಕ್ಕೆ ಜಯ: ಕ್ಷಮೆಯಾಚಿಸಿದ ಮಾಜಿ ಶಾಸಕ ಸುರೇಶ್ ಗೌಡ

    June 27, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.