ರಾಯಚೂರು:- ಕೆಲಸದ ವೇಳೆಯಲ್ಲಿಯೇ ಓರ್ವ ಕಾರ್ಮಿಕ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆ ಲಿಂಗಸೂರು ತಾಲೂಕಿನ ಹಟ್ಟಿ ಚಿನ್ನದ ಗಣಿಯಲ್ಲಿ ಜರುಗಿದೆ. ಬೆಳಗಿನ ಪಾಳ್ಯದಲ್ಲಿ ಕೆಲಸ ಮಾಡುವಾಗ ದುರ್ಘಟನೆ ಜರುಗಿದೆ. ಶರಣಬಸವ (38) ಮೃತ ಕಾರ್ಮಿಕ.
ಕಳ್ಳರ ಕರಾಮತ್ತು: ಕಾರಿನ ಗ್ಲಾಸ್ ಒಡೆದು 11.5 ಲಕ್ಷ ರೂ. ನಗದು ದೋಚಿ ಎಸ್ಕೇಪ್.. ದೂರು ದಾಖಲು!
2,800 ಸೀಟ್ ಭೂಗರ್ಭದಲ್ಲಿ ಕೆಲಸ ಮಾಡುವಾಗ ಏರ್ ಬ್ಲಾಸ್ಟ್ ಆಗಿ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಇನ್ನೋರ್ವ ನಿರುಪಾದಿ ಎಂಬುವ ಕಾರ್ಮಿಕರಿಗೆ ಮಾರಣಾಂತಿಕ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಸ್ಥಳಕ್ಕೆ ಚಿನ್ನದ ಗಣಿ ಅಧಿಕಾರಿಗಳು ಬೇಟಿ ನೀಡಿದ್ದ ವೇಳೆ ಕಾರ್ಮಿಕರು ಆಕ್ರೋಶ ಹೊರ ಹಾಕಿದ್ದಾರೆ.