ಹುಬ್ಬಳ್ಳಿ: ಜಾತಿಗಣತಿ ಪರ ವಿರೋಧ ಚರ್ಚೆ ವಿಚಾರವಾಗಿ ಅದು ಸ್ವಾಭಾವಿಕ, ಯಾವುದೇ ವರದಿ ಬಂದಾಗ ನೂರಕ್ಕೆ ನೂರು ಒಪ್ಪಲ್ಲ ಎಂದು ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನಾಳೆ ವಿಶೇಷ ಕ್ಯಾಬಿನೇಟ್ ಇದೆ. ತರಾತುರಿಯಲ್ಲಿ ಸರ್ಕಾರ ಮಾಡಲ್ಲ ̤ ಸಾಧಕ ಬಾಧಕ ಚರ್ಚೆ ಮಾಡಿಯೇ ಸರ್ಕಾರ ನಿರ್ಧಾರ ಕೈಗೊಳ್ಳುತ್ತದೆ. ಇದರ ಹಿಂದೆ ಯಾವುದೇ ರಾಜಕೀಯ ಲಾಭ ನಷ್ಟವಾಗಲ್ಲ. ಕೆಲವರು ಬಹಿರಂಗವಾಗಿ, ಕೆಲವರು ಗುಪ್ತವಾಗಿ ಸಭೆ ನಡೆಸುತ್ತಿದ್ದಾರೆ. ಈ ಬಗ್ಗೆ ಚರ್ಚೆ ಮಾಡಲು ವಿಶೇಷ ಸದನ ಕರೆದ್ರೆ ಒಳ್ಳೆಯದ. ಈ ಬಗ್ಗೆ ಬಹಿರಂಗ ಚರ್ಚೆಯಾಗೋದು ಒಳ್ಳೆಯದು ಎಂದರು
ಮೋದಿ ಅವರು ರಾಜ್ಯ ಸರ್ಕಾರ ಕೆಡವಲು ಯತ್ನಿಸುತ್ತಾರೆ ಅನ್ನೋ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಮೊದಲ ದಿನದಿಂದ ನಾನು ಕೂಡಾ ಇದನ್ನೇ ಹೇಳಿದ್ದೇನೆ. ನಮ್ಮ ಸರ್ಕಾರ ಕೊನೆ ದಿನ ಇದೆ ಅಂದ್ರು ಪ್ರಯತ್ನ ಮಾಡ್ತಾರೆ. ನಾವು 14೦ ಶಾಸಕರಿದ್ದೇವೆ ಯಾವುದೇ ಆತಂಕವಿಲ್ಲ. ವಕ್ಪ್ ಕಾಯ್ದೆ ಬಗ್ಗೆ ಸರ್ಕಾರ ಸೂಕ್ತ ನಿರ್ಧಾರ ಕ್ರಮ ಕೈಗೊಳ್ಳಬೇಕಿದೆ. ಸದ್ಯಕ್ಕಂತೂ ದಲಿತ ಸಮಾವೇಶ ಇಲ್ಲ ಎಂದರು.