ದೇವನಹಳ್ಳಿ:- ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ ಸುಮಾರು 1,777 ಎಕರೆ ಫಲವತ್ತಾದ ಭೂಮಿಯನ್ನು ಕೆಐಎಡಿಬಿ ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿರುವುದನ್ನು ವಿರೋಧಿಸಿ ಚನ್ನರಾಯಪಟ್ಟಣ ರೈತ ಮುಖಂಡರು ನಾಳೆ ದೇವನಹಳ್ಳಿ ಚಲೋ ಬೃಹತ್ ಹೋರಾಟ ಹಮ್ಮಿಕೊಂಡಿದ್ದಾರೆ.
ರಾತ್ರಿ ಹೊತ್ತು ಎರಡು ಲವಂಗ ತಿನ್ನೋದ್ರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ!?
ಇದರಲ್ಲಿ ಇದರಲ್ಲಿ ರೈತ, ದಲಿತ, ಕಾರ್ಮಿಕ, ಮಹಿಳಾ, ಯುವಜನ ಚಳವಳಿಗಾರರು, ಪ್ರಗತಿಪರ ಹೋರಾಟಗಾರರು ರಾಜ್ಯದ ಮೂಲೆ ಮೂಲೆಗಳಿಂದ ದೇವನಹಳ್ಳಿಗೆ ಬಂದು ಅಲ್ಲಿನ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟಿಸಲಿದ್ದಾರೆ. ಈ ಬಗ್ಗೆ ದೇವನಹಳ್ಳಿ ಯಲ್ಲಿ ಚನ್ನರಾಯಪಟ್ಟಣ ರೈತ ಮುಖಂಡರು ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆ ಕೊಟ್ಟಿದ್ದಾರೆ.
ಒಂದೆಡೆ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ಮೂರು ಗ್ರಾಮಗಳಲ್ಲಿ ಒಟ್ಟು 495 ಎಕರೆ ಭೂಮಿಯನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಕೆಐಎಡಿಬಿ ಭೂಸ್ವಾಧೀನ ವಿರೋಧಿಸಿ ಇಲ್ಲಿನ 13 ಗ್ರಾಮಗಳ ರೈತರು 1180 ದಿನಗಳಿಂದ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಆದರೆ ಭೂಸ್ವಾಧೀನಕ್ಕೆ ಅಧಿಸೂಚಿಸಿರುವ ಜಾಗದಲ್ಲಿ 495 ಎಕರೆ ಭೂಮಿ ಕೈ ಬಿಡುವ ಪ್ರಸ್ತಾವವನ್ನು ರಾಜ್ಯ ಸರ್ಕಾರ ಈ ಹಿಂದೆಯೇ ರೈತರ ಮುಂದಿಟ್ಟಿತ್ತು. ಆದರೆ, ಇದನ್ನು ಒಪ್ಪದ ರೈತರು ಯಾವುದೇ ಕಾರಣಕ್ಕೂ ಹೋಬಳಿಯಲ್ಲಿ ಒಂದಿಂಚು ಭೂಮಿ ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.
ಈಗ ರಾಜ್ಯ ಸರ್ಕಾರ ಅದೇ ಹಳೆಯ ಪ್ರಸ್ತಾವವನ್ನು ಮತ್ತೊಮ್ಮೆ ರೈತರ ಮುಂದಿಟ್ಟಿದೆ. ಜೊತೆಗೆ ಇನ್ನು ಮುಂದೆ ಹೋಬಳಿಯಲ್ಲಿ ಯಾವುದೇ ಭೂಸ್ವಾಧೀನ ನಡೆಸುವುದಿಲ್ಲ ಎಂದು ಭರವಸೆ ನೀಡಿದೆ. ಈ ಬಗ್ಗೆ ದೇವನಹಳ್ಳಿ ಯಲ್ಲಿ ಬೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ ಕಿಡಿಕಾರಿದೆ. ಅನ್ಯಾಯದ ಬಲವಂತದ ಭೂ ಸ್ವಾಧೀನ ನಾವು ಒಪ್ಪುವುದಿಲ್ಲ. ದೇವನಹಳ್ಳಿ ಚಲೋ ರೈತ ಹೋರಾಟ ಹತ್ತಿಕ್ಕಲು ಇವತ್ತು ಕೈಗಾರಿಕಾ ಸಚಿವರು ಪತ್ರಿಕಾಘೋಷ್ಟಿ ಮಾಡಿದ್ದಾರೆ. ನಾವು ಯಾವುದೇ ಕಾರಣಕ್ಕೂ ನಮ್ಮ ಹೋರಾಟ ಹಿಂಪಡೆಯಲ್ಲ. ನಾಳೆ 5000 ಕ್ಕೂ ಹೆಚ್ಚು ರೈತರು ದೇವನಹಳ್ಳಿ ಚಲೋದಲ್ಲಿ ಭಾಗವಹಿಸಲಿದ್ದಾರೆ.
ನಾಳಿನ ಹೋರಾಟ ಸಕ್ಸಸ್ ಹಾಗಲಿದೆ, ಸರ್ಕಾರದ ವಿರುದ್ದ ಕಹಳೆ ಮುಳಗಲಿದೆ. ಎಂಬಿ ಪಾಟೀಲ್ ಕಂಪನಿಗಳ ಪರವಾಗಿ ಇವತ್ತು ಪ್ರೇಸ್ ಮಿಟ್ ಮಾಡಿದ್ದಾರೆ. ನಾವ್ಯಾರು ಭೂಮಿ ಬೆಲೆ ಹೆಚ್ಚು ಮಾಡಿಕೊಡಿವಂತೆ ನಮ್ಮ ಹೋರಾಟವಲ್ಲ. ನಮ್ಮ ಹೋರಾಟ 1777 ಎಕರೆ ಭೂ ಸ್ವಾದೀನವೂ ಕೈಬಿಡುವಂತೆ ಹೋರಾಟ ಮಾಡಲಾಗುತ್ತದೆ ಎಂದರು.