ಬೆಂಗಳೂರು:- ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ ವಿರುದ್ಧ ಹೈ ಕೋರ್ಟ್ ಗೆ PIL ಅರ್ಜಿ ಸಲ್ಲಿಸಲಾಗಿದೆ. ನಿರ್ದೇಶಕ TS ನಾಗಾಭರಣ, ಜಿ ಮಂಜುನಾಥ್ ಮತ್ತು ಜಿ ಎಸ್ ರೇಣುಕಾಪ್ರಸಾದ್ ರಿಂದ ಅರ್ಜಿ ಸಲ್ಲಿಕೆ ಮಾಡಲಾಗಿದೆ.
ಗ್ರೆಟರ್ ಬೆಂಗಳೂರು ಆಡಳಿತ ಕಾಯ್ದೆ ಸಂವಿಧಾನ ಬಾಹೀರ ಅಂತಾ ಘೋಷಿಸುವಂತೆ PIL ನಲ್ಲಿ ಮನವಿ ಮಾಡಿದ್ದಾರೆ. ಬೆಂಗಳೂರು ಆಡಳಿತ ಮತ್ತು ನಿರ್ವಹಣೆ ತನ್ನ ಹತೋಟಿಗೆ ತೆಗೆದುಕೊಳ್ಳಲು ಸರ್ಕಾರ ಪ್ರಾಧಿಕಾರ ರಚನೆ ಮಾಡಿದೆ. ಇದರಿಂದ ಚುನಾಯಿತರಲ್ಲದವರಿಗೂ ಅಧಿಕಾರ ಜಾಸ್ತಿ ಸಿಗಲಿದೆ. ಪ್ರಾಧಿಕಾರ ರಚನೆ ಸಂವಿಧಾನದ 74ನೇ ತಿದ್ದುಪಡಿಗೆ ವಿರುದ್ಧವಾಗಿದೆ.
ಇದು ಸಂವಿಧಾನ ಬಾಹೀರ ಎಂದು ಘೋಷಿಸಿ ಬಿಬಿಎಮ್ ಪಿ ಚುನಾವಣೆಗೆ ನಿರ್ದೇಶಿಸುವಂತೆ ಅರ್ಜಿ ಸಲ್ಲಿಕೆ ಮಾಡಲಾಗಿದೆ. ವಕೀಲ ಎಸ್ ವಿವೇಕಾನಂದ ಎಂಬುವರ ಮೂಲಕ PIL ಸಲ್ಲಿಸಲಾಗಿದೆ.