ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರ ಪಟ್ಟಣದ ವಾರ್ಡ್ ನಂಬರ್ 14ರ ಕೆಂಗೇರಿಮಡ್ಡಿಯಲಿ ಸರಿ ಸುಮಾರು ಒಂದು ತಿಂಗಳಾದರೂ ಕುಡಿಯೋಕೆ ನೀರಿಲ್ಲದೆ ಜನರು ಪರದಾಡುತ್ತಿದ್ದಾರೆ..
ಸಾರ್ವಜನಿಕರು ಅವರ ಗೋಳು ಹೇಳಲ್ಲೂ ಸಂಬಂಧ ಪಟ್ಟ ಅಧಿಕಾರಿಗಳ ಮೊರೆ ಹೋದರು ಸಹ ಕ್ಯಾರೆ ಅನ್ನುತ್ತಿಲ್ಲ….
ಅಲ್ಲಿನ ಮಹಿಳೆಯರು ಚಿಕ್ಕ ಚಿಕ್ಕ ಮಕ್ಕಳನ್ನು ಕರೆದುಕೊಂಡು ಬೇರೆಯವರ ತೋಟಕ್ಕೆ ಹೋಗಿ ಕುಡಿಯಲು ನೀರು ತರೋದು ನೋಡಿದರೆ… ಕರುಳು ಕಿತ್ತು ಬರುತ್ತದೆ..
ಈ ಸುದ್ದಿಯನ್ನು ನೋಡಿಯಾದರು ಸಂಬಂಧ ಪಟ್ಟ ಅಧಿಕಾರಿಗಳ ಮನಸ್ಸು ಕರಗಿ ಇಲ್ಲಿ ವಾಸಿಸುವ ಬಡ ಕುಟುಂಬಗಳಿಗೆ ಕುಡಿಯೋ ನೀರಿನ ಸಮಸ್ಯೆಗೆ ಬ್ರೇಕ್ ಹಾಕುತ್ತಾರೋ ಅತ್ವಾ ಅವರು ಹಾಕುವ ಹಿಡಿ ಶಾಪಕ್ಕೆ ಗುರಿಯಾಗುತ್ತಾರೋ ಎಂದು ಕಾದು ನೋಡೋಣ..
ಪ್ರಕಾಶ ಕುಂಬಾರ
ಬಾಗಲಕೋಟೆ