ನವದೆಹಲಿ:- ಚೊಚ್ಚಲ IPL ಟ್ರೋಫಿ ಎತ್ತಿರುವ RCB ತಂಡಕ್ಕೆ ಉದ್ಯಮಿ ವಿಜಯ್ ಮಲ್ಯ ಅವರು ವಿಶ್ ಮಾಡಿದ್ದಾರೆ. ಈ ಬೆನ್ನಲ್ಲೇ SBI ನಯವಾಗಿ ಭಾರತಕ್ಕೆ ನೀವು ಬನ್ನಿ ಎಂದು ವಿಜಯ್ ಮಲ್ಯಗೆ ಸ್ವಾಗತ ಕೋರಿದೆ.
ಒಂದು ಸಮಯದಲ್ಲಿ ಕುಭೇರನಾಗಿ ಮೆರೆಯುತ್ತಿದ್ದ ವಿಜಯ್ ಮಲ್ಯ ವಿಲಾಸಿ ಜೀವನಕ್ಕೆ ಜೋತು ಬಿದ್ದು, ಭಾರತದ ಹಲವಾರು ಬ್ಯಾಂಕುಗಳಿಂದ ಸಾಲ ಪಡೆದು, ಆ ಸಾಲವನ್ನು ಮರು ಪಾವತಿಸದೆ ಎಲ್ಲಾ ಬ್ಯಾಂಕುಗಳಿಗೆ ವಂಚಿಸಿ ವಿದೇಶಕ್ಕೆ ಪಲಾಯನ ಮಾಡಿದ್ದಾರೆ. ಮಲ್ಯ, SBI ಸೇರಿದಂತೆ ಇತರ ಬ್ಯಾಂಕುಗಳಲ್ಲಿ ಸುಮಾರು 9,000 ಕೋಟಿ ರೂ.ಗಳಷ್ಟು ಸಾಲವನ್ನು ಬಾಕಿ ಉಳಿಸಿಕೊಂಡಿದ್ದಾರೆ. ಪ್ರಸ್ತುತ ಲಂಡನ್ನಲ್ಲಿ ವಾಸಿಸುತ್ತಿರುವ ಮಲ್ಯ, ತಮ್ಮ X ನಲ್ಲಿ ಆರ್ಸಿಬಿಗೆ ಶುಭಾಶಯ ತಿಳಿಸಿದ್ದಾರೆ. ಇದಕ್ಕೆ SBI ಕೂಡ ತಕ್ಕ ಪ್ರತ್ಯುತ್ತರ ನೀಡಿದೆ.
ಕೊನೆಗೂ, 18 ವರ್ಷಗಳ ನಂತರ ಆರ್ಸಿಬಿ ಐಪಿಎಲ್ ಚಾಂಪಿಯನ್ ಆಗಿದೆ. 2025 ರ ಟೂರ್ನಮೆಂಟ್ನಲ್ಲಿ ಐಪಿಎಲ್ ತಂಡದ ಪ್ರದರ್ಶನ ಬಲಿಷ್ಠವಾಗಿತ್ತು. ಈ ತಂಡವು ಪಂದ್ಯಾವಳಿಯ ಉದ್ದಕ್ಕೂ ಜವಾಬ್ದಾರಿಯುತ ಆಟವನ್ನು ಆಡಿದ್ದು ಕಂಡುಬಂದಿದೆ. ಆಟಗಾರರಲ್ಲಿ ಸರಿಯಾದ ತರಬೇತಿ ಮತ್ತು ಸಮನ್ವಯ ಕಂಡುಬಂದಿದೆ. ಇಡೀ ತಂಡವಾಗಿ ಆಟವನ್ನು ಆಡಿದರು. ಈ ತಂಡಕ್ಕೆ ನನ್ನ ಶುಭಾಶಯಗಳು’ ಎಂದು ವಿಜಯ್ ಮಲ್ಯ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ವಿಜಯ್ ಮಲ್ಯ ಅವರ ಈ ಪೋಸ್ಟ್ ಅನ್ನು ಸುಮಾರು 6 ಲಕ್ಷ ಜನರು ವೀಕ್ಷಿಸಿದ್ದು, ಪ್ರತಿಕ್ರಿಯಿಸಿದ್ದಾರೆ. ಇದರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಒಂದಾಗಿದೆ. ಮಲ್ಯ ಅವರ ಪೋಸ್ಟ್ಗೆ ಎಸ್ಬಿಐ ಪ್ರತಿಕ್ರಿಯಿಸಿದ್ದು, ‘ಸರ್, ಭಾರತಕ್ಕೆ ಹಿಂತಿರುಗಿ. ಒಟ್ಟಿಗೆ ಆಚರಿಸೋಣ’ ಎಂದು ಟ್ವೀಟ್ ಮಾಡಿದೆ