ಮುಂಬೈ:- ಪ್ರಧಾನಿ ನರೇಂದ್ರ ಮೋದಿಯವರು ಇಂದು ನಾಗ್ಪುರದ ರೇಶಿಂಬಾಗ್ನಲ್ಲಿರುವ ಆರ್ಎಸ್ಎಸ್ ಪ್ರಧಾನ ಕಚೇರಿ ಹೆಡ್ಗೆವಾರ್ ಸ್ಮೃತಿ ಭವನಕ್ಕೆ ಭೇಟಿ ನೀಡಲಿದ್ದಾರೆ. ಭೇಟಿ ವೇಳೆ, ದೀಕ್ಷಭೂಮಿಗೂ ಭೇಟಿ ನೀಡಲಿದ್ದಾರೆ.
GT Vs MI: ಮುಂಬೈ ಮಣಿಸಿ ಗೆಲುವಿನ ಖಾತೆ ತೆರೆದ ಗುಜರಾತ್- 36 ರನ್ಗಳ ಭರ್ಜರಿ ಜಯ!
ಇಂದು ಮೋದಿ ಅವರು ನಾಗ್ಪುರಕ್ಕೆ ತೆರಳಲಿದ್ದು, ಹಿಂದೂ ಹೊಸ ವರ್ಷದ ಆರಂಭವನ್ನು ಗುರುತಿಸುವ ಆರ್ಎಸ್ಎಸ್ `ಪ್ರತಿಪದ’ ಕಾರ್ಯಕ್ರಮ ಮತ್ತು ಮರಾಠಿ ಹೊಸ ವರ್ಷವಾದ ಗುಡಿ ಪಾಡ್ವದಲ್ಲಿ ಭಾಗಿಯಾಗಲಿದ್ದಾರೆ. RSS ಮುಖ್ಯಸ್ಥ ಮೋಹನ್ ಭಾಗವತ್ ಜೊತೆ ಪ್ರಧಾನಿಯವರು ವೇದಿಕೆ ಹಂಚಿಕೊಳ್ಳಲಿದ್ದಾರೆ. ಪ್ರಧಾನಿ ಅವರು ಸ್ಮೃತಿ ಮಂದಿರದಲ್ಲಿ ದರ್ಶನ ಪಡೆದು, ಆರ್ಎಸ್ಎಸ್ನ ಪಿತಾಮಹರಿಗೆ ಗೌರವ ಸಲ್ಲಿಸಲಿದ್ದಾರೆ. ಬಳಿಕ ದೀಕ್ಷಭೂಮಿಗೂ ಭೇಟಿ ನೀಡಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಲಿದ್ದಾರೆ.