Close Menu
Ain Live News
    Facebook X (Twitter) Instagram YouTube
    Saturday, July 5
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಮನೆ ಕಳ್ಳತನ ಪ್ರಕರಣ ಬೇಧಿಸಿದ ಪೊಲೀಸರು: ಇಬ್ಬರು ಆರೋಪಿಗಳ ಬಂಧನ

    By Author AINJuly 5, 2025
    Share
    Facebook Twitter LinkedIn Pinterest Email
    Demo

    ಹುಬ್ಬಳ್ಳಿ: ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ತಾರಿಹಾಳ ಹಾಗೂ ಅಂಚಟಗೇರಿ ಗ್ರಾಮಗಳಲ್ಲಿ ನಡೆದಿದ್ದ ಮನೆ ಕಳ್ಳತನ ಪ್ರಕರಣಗಳನ್ನು ಪೊಲೀಸರು ಯಶಸ್ವಿಯಾಗಿ ಪತ್ತೆಹಚ್ಚಿದ್ದಾರೆ. ಇಬ್ಬರು ಆರೋಪಿಗಳನ್ನು ಬಂಧಿಸಿ, ಒಟ್ಟು 9 ಲಕ್ಷ ಮೌಲ್ಯದ ಬಂಗಾರದ ಆಭರಣಗಳು ಮತ್ತು ಎರಡು ಮೋಟಾರ್ ಸೈಕಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

    19 ಜೂನ್ 2025 ರಂದು ತಾರಿಹಾಳ ಗ್ರಾಮದ ಸೈದುಸಾಬ್ ದಾವಲಸಾಬ ನದಾಫ್ ಅವರ ಮನೆಯ ಮುಂದಿನ ಬಾಗಿಲು ತೆರೆದು ಒಳ ನುಗ್ಗಿದ್ದ ಕಳ್ಳರು, ಹಾಲ್‌ನಲ್ಲಿ ಇದ್ದ ಕಪಾಟಿನ ಬಾಗಿಲು ಮುರಿದು, ಅದರೊಳಗಿನ ಬಂಗಾರ ಹಾಗೂ ಬೆಳ್ಳಿಯ ಆಭರಣಗಳು ಮತ್ತು ನಗದು ಹಣ ಕಳ್ಳತನ ಮಾಡಿ ಪರಾರಿಯಾಗಿದ್ದರು. ಇನ್ನೊಂದೆಡೆ 30 ಜೂನ್ 2025 ರಂದು ಅಂಚಟಗೇರಿ ಗ್ರಾಮದ ಆಶ್ರಯ ಪ್ಲಾಟ್ ನಲ್ಲಿ ಮನೆಯ ಬಾಗಿಲಿನ ಕೀಲಿ ಮುರಿದು ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದರು.

    ಈ ಇಬ್ಬರು ಆರೋಪಿಗಳನ್ನು ಗುರುತಿಸಿ ಬಂಧಿಸುವ ಕಾರ್ಯವನ್ನು ಧಾರವಾಡ ಜಿಲ್ಲಾ ಎಸ್‌ಪಿ ಡಾ. ಗೋಪಾಲ ಬ್ಯಾಕೋಡ, ಹೆಚ್ಚುವರಿ ಎಸ್‌ಪಿ ನಾರಾಯಣ ಭರಮನಿ ಹಾಗೂ ಡಿಎಸ್‌ಪಿ ವಿನೋದ ಮುಕ್ತದಾರ ಅವರ ಮಾರ್ಗದರ್ಶನದಲ್ಲಿ ನಡೆಸಲಾಯಿತು.

    ಹುಬ್ಬಳ್ಳಿ ಗ್ರಾಮೀಣ ಪೋಲಿಸ್ ಇನ್ಸ್‌ಪೆಕ್ಟರ್ ಬಿ.ಎ. ಕಾಮನಬೈಲ್, ಇನ್ಸ್‌ಪೆಕ್ಟರ್ ಮುರುಗೇಶ್ ಚನ್ನನವರ, ಪಿಎಸ್‌ಐ ಸಚಿನ್ ಆಲಮೇಲಕರ್, ಎಎಸ್‌ಐ ಎನ್.ಎಮ್. ಹೊನ್ನಪ್ಪನವರ, ಸಿಬ್ಬಂದಿ ಜನರಾದ ಎ. ಎ. ಕಾಕರ್, ಹೆಚ್ ಬಿ ಐಹೋಳೆ, ಹೆಚ್ ಎಲ್ ಮಲ್ಲಿಗವಾಡ, ಸಂತೋಷ ಚವ್ಹಾಣ, ಚನ್ನಪ್ಪ ಬಳ್ಳೋಳ್ಳಿ, ಮಹಾಂತೇಶ ಮದ್ದಿನ್, ಗಿರೀಶ ತಿಪ್ಪಣ್ಣವರ, ವಿಶ್ವನಾಥ ಬಡಿಗೇರ, ವಿಶ್ವ ಶಿವಬಸಣ್ಣವರ, ಶಂಭುಲಿಂಗ ಹಿರೇಮಠ, ಪ್ರೇಮ ರಾಠೋಡ, ನಾಗರಾಜ ಮಾಣೀಕ್ ಹಾಗೂ ತಾಂತ್ರಿಕ ಸಿಬ್ಬಂದಿ ಆರೀಪ್ ಗೊಲಂದಾಜ, ವಿಠಲ್ ಡೊಂಗನವರ, ಚೇತನ ಮಾಳಗಿ ಮತ್ತು ಇತರ ಸಿಬ್ಬಂದಿ ಸದಸ್ಯರ ನಿರಂತರ ಪರಿಶ್ರಮದಿಂದ ದಿನಾಂಕ 28 ಜೂನ್ ಮತ್ತು 4 ಜುಲೈ 2025 ರಂದು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ಸು ಸಾಧಿಸಿದ್ದಾರೆ.

    Demo
    Share. Facebook Twitter LinkedIn Email WhatsApp

    Related Posts

    ಕೊಪ್ಪಳದಲ್ಲಿ ಹೃದಯಾಘಾತಕ್ಕೆ ರಂಗಭೂಮಿ ಕಲಾವಿದ ಬಲಿ

    July 5, 2025

    ಆ್ಯಂಬುಲೆನ್ಸ್ ನಲ್ಲೇ ಹೆರಿಗೆ ; ತಾಯಿ, ಮಗು ಆರೋಗ್ಯ

    July 5, 2025

    ಮೊಹರಂ ಆಚರಣೆ ; ನಿಗಿ ನಿಗಿ ಕೆಂಡದ ಮೇಲೆ ಕುಳಿತು ಭಕ್ತಿ ಪ್ರದರ್ಶನ

    July 5, 2025

    ಮಗನ ಸಾವಿನಲ್ಲೂ ಸಾರ್ಥಕತೆ ಮೆರೆದ ಕುಟುಂಬ

    July 5, 2025

    ಮಾಜಿ ಸ್ಪೀಕರ್ ರಮೇಶ್ ಕುಮಾರ್ ತೋಟದಲ್ಲಿ ಅವಘಡ

    July 5, 2025

    ಟಿಬಿ ಡ್ಯಾಂನಿಂದ 80,000 ಕ್ಯೂಸೆಕ್ಸ್ ನೀರು ಹೊರಹರಿವು ; ಮುಳುಗಡೆ ಭೀತಿಯಲ್ಲಿ ಕಂಪ್ಲಿ ಸೇತುವೆ

    July 5, 2025

    ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಕಾರು: ತಪ್ಪಿದ ಅನಾಹುತ!

    July 5, 2025

    ಓವರ್ ಟೇಕ್ ತಂದ ಆಪತ್ತು: ಸ್ಕಿಡ್ ಆಗಿ ಬೈಕ್ ನಿಂದ ಬಿದ್ದ ಸವಾರ Spot Death!

    July 5, 2025

    ಬೆಂಗಳೂರು ಹೊರವಲಯದಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತ: ದೇವಾಲಯ ಪ್ರವೇಶಕ್ಕೆ ದಲಿತರಿಗೆ ನಿರ್ಬಂಧ!

    July 5, 2025

    ಟಮೋಟ ತುಂಬಿಕೊಂಡು ಗುಜರಾತ್ ಗೆ ತೆರಳುತ್ತಿದ್ದ ಲಾರಿ ಪಲ್ಟಿ: 15 ಲಕ್ಷ ಮೌಲ್ಯದ ಹಣ್ಣು ನಜ್ಜುಗುಜ್ಜು

    July 5, 2025

    ಕೊಡಗು: ಕೋಕೇರಿ,ನರಿಯಂದಡ ಗ್ರಾಮದ ತೋಟಗಳಲ್ಲೇ ಕಾಡಾನೆಗಳ ವಾಸ್ತವ್ಯ- ಕೃಷಿ ಗಿಡಗಳಿಗೆ ಹಾನಿ!

    July 5, 2025

    ಹುಬ್ಬಳ್ಳಿ| ಚಿನ್ಮಯ ವಿದ್ಯಾಲಯದಲ್ಲಿ ಜರುಗಿದ ಶಾಲಾ ಸಂಸತ್ತು ರಚನೆ ಸಮಾರಂಭ!

    July 5, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.