ಬೆಂಗಳೂರು:- ಅಧಿಕಾರ ಪಡೆವ ದುರಾಸೆಗಾಗಿ ಸಿದ್ದರಾಮಯ್ಯ ನನ್ನ ವಿರುದ್ಧ ಅಕ್ರಮ ಗಣಿಗಾರಿಕೆ ಆರೋಪ ಮಾಡಿ ನನ್ನನ್ನು ಜೈಲಿಗೆ ಹೋಗುವಂತೆ ಮಾಡಿದ್ದರು ಎಂದು ಶಾಸಕ ಜನಾರ್ಧನ ರೆಡ್ಡಿ ಆರೋಪಿಸಿದ್ದಾರೆ.
ಈ ರಾಶಿಯವರಿಗೆ ಮದುವೆ ಅಡಚಣೆ ನಿವಾರಣೆಯಾಗಿ ಅತಿ ಶೀಘ್ರದಲ್ಲಿ ಮದುವೆ ಯೋಗ:ಶುಕ್ರವಾರದ ರಾಶಿ ಭವಿಷ್ಯ 13 ಜೂನ್ 2025
ನಗರದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರ ಪಡೆಯಬೇಕೆಂಬ ರಾಜಕೀಯ ದುರಾಸೆಯಿಂದ ಬಳ್ಳಾರಿವರೆಗೆ ಪಾದಯಾತ್ರೆ ಮಾಡಿ, ತನ್ನ ವಿರುದ್ಧ ಅಕ್ರಮ ಗಣಿಗಾರಿಕೆಯ ಆರೋಪ ಹೊರೆಸಿ ಜೈಲಿಗೆ ಹೋಗುವಂತೆ ಮಾಡಿದ್ದರು ಎಂದು ಹೇಳಿದರು.
ಆದರೆ, ಸಿಬಿಐ ಕೋರ್ಟ್ ತನ್ನ ತೀರ್ಪಿನಲ್ಲಿ ಅಕ್ರಮ ಗಣಿಗಾರಿಕೆ ನಡೆದಿಲ್ಲ ಎಂದು ಹೇಳಿದೆ ಮತ್ತು ಓಬಳಪುರಂ ಮೈನಿಂಗ್ ಕಂಪನಿಯಿಂದ ಬೇರೆ ದೇಶಗಳಿಗೆ ಅದಿರನ್ನು ರಫ್ತು ಮಾಡಿದರೆಂಬ ಅರೋಪವನ್ನೂ ನ್ಯಾಯಾಲಯ ಹೊಡೆದು ಹಾಕಿದೆ ಎಂದು ರೆಡ್ಡಿ ಹೇಳಿದರು.