ಹುಬ್ಬಳ್ಳಿ: ನಗರದ ಸರ್ವ ಧರ್ಮಗಳ ಸಮನ್ವಯದ ಮಠ ಎಂದೇ ಪ್ರಸಿದ್ಧತಾದ ಮೂರು ಸಾವಿರ ಮಠದಲ್ಲಿ ಶ್ರೀ ಬಸವೇಶ್ವರ ಜಯಂತಿ ಅಂಗವಾಗಿ ವೀರಶೈವ ಸಂಘಟನಾ ಸಮಿತಿ ವತಿಯಿಂದ ಬಸವ ಜಯಂತಿ ಆಚರಣೆ ಪ್ರಯುಕ್ತ ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷರನ್ನಾಗಿ ಸಾಮಾಜಿಕ ಕಾರ್ಯಕರ್ತೆ ಸರೋಜಾ ಹೂಗಾರ ಅವರನ್ನ ಆಯ್ಕೆ ಮಾಡಲಾಯಿತು.
ಕಾರ್ಯಾಧ್ಯಕ್ಷರಾಗಿ ಹೋರಾಟಗಾರ ವೀರಶೈವ ಸಮಾಜದ ಮುಖಂಡ ಈರಪ್ಪ ಎಮ್ಮಿ, ಪ್ರಧಾನ ಕಾರ್ಯದರ್ಶಿ ಆಗಿ ಚನ್ನಬಸಪ್ಪ ಧಾರವಾಡಶೆಟ್ರು, ಉಪಾಧ್ಯಕ್ಷರಾಗಿ ಅಂದಪ್ಪ ಹರದಾರಿ, ಸಂಘಟನಾ ಕಾರ್ಯದರ್ಶಿ ಆಗಿ ಸದಾಶಿವ ಚೌಶಿಟ್ಟಿ, ರವಿ, ಬಾಪುಗೌಡ ಎಳವತ್ತಿ, ಮಲ್ಲೇಶಪ್ಪ ಶಿರಗೆಣ್ಣವರ, ತಾರಾದೇವಿ ವಾಲಿ, ಅನಸೂಯಾ ಅರಕೇರಿ, ರತ್ನಾ ಚೌಶೆಟ್ಟಿ,ರತ್ನಾ ಗಂಗಣ್ಣವರ,ಮಂಜುಳಾ ಮೇಟಿ,ಕಾರ್ಯದರ್ಶಿ ಆಗಿ ವೀರಣ್ಣ ನೀರಲಗಿ, ತಡಸದಮಠ,ವೀರಣ್ಣ ಅವರನ್ನಆಯ್ಕೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಅಕ್ಕನ ಬಳಗದ ಅಧ್ಯಕ್ಷೆ ನಿರ್ಮಲಾ ಅಂಗಡಿ, ಮಹಾದೇವಿ ಬಡಕಣ್ಣವರ,ವಿಜಯಲಕ್ಷ್ಮಿ ಉಮಚಗಿ,ಶಕುಂತಲಾ ಮುಂತಾದವರು ಇದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷೆ ಸರೋಜಾ ಹೂಗಾರ ಮೂರು ಸಾವಿರ ಮಠದಲ್ಲಿ ಶ್ರೀ ಬಸವೇಶ್ವರ ಜಯಂತಿ ಅಂಗವಾಗಿ ವೀರಶೈವ ಸಂಘಟನಾ ಸಮಿತಿ ವತಿಯಿಂದ ಬಸವ ಜಯಂತಿ ಆಚರಣೆ ಪ್ರಯುಕ್ತ ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷರನ್ನಾಗಿ ನನ್ನನ್ನ ಆಯ್ಕೆ ಮಾಡಿದ್ದು ಅತ್ಯಂತ ಸಂತಸ ಆಗಿದ್ದು ಶ್ರೀ ಬಸವೇಶ್ವರರ ಸಾರಿದ ತ್ವತ್ವದ ಅಡಿ ಕಾರ್ಯಕ್ರಮ ಮಾಡಲಾಗುವುದು ಎಂದರು.