ದೊಡ್ಡಬಳ್ಳಾಪುರ: ಗ್ರಾಮಗಳು ಅಭಿವೃದ್ಧಿ ಆಗಬೇಕು ಎಂದರೆ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮತ್ತು ಅಧ್ಯಕ್ಷ ಜನರ ಪರ ಕೆಲಸ ಮಾಡಬೇಕು. ಆದರೆ ಅಧ್ಯಕ್ಷನ ಅಪ್ಪಣೆ ಇಲ್ಲದೆ ಯಾವುದೇ ಫೈಲ್ ಮುಂದಕ್ಕೆ ಹೋಗುವಂತಿಲ್ಲ ಗ್ರಾಮಪಂಚಾಯ್ತಿಯ ಹಣೆಬರಹ..
ದೊಡ್ಡಬಳ್ಳಾಪುರ ತಾಲೂಕಿನ ಹಾದ್ರೀಪುರ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷ ಸತೀಶ್ ಕುಮಾರ್ ಮತ್ತು ಪಿಡಿಓ ಶಿವಾನಂದ ಮರಕೇರಿಯದ್ದೇ ದರ್ಬಾರ್ ಆಗಿದೆ. ಅದಕ್ಕೆ ತಾಜಾ ಉದಾಹರಣೆ ಎಂದರೆ ಪಂಚಾಯತಿ ಒಳಕ್ಕೆ ಹೋಗುತ್ತಿದ್ದಂತೆ ಮೊದಲು ಕಾಣುವುದು ಅಧ್ಯಕ್ಷರ ಅಪ್ಪಣೆ ಪತ್ರಗಳು.
ಪಿಡಿಓ ಕಚೇರಿಯ ಬಾಗಿಲಿನಲ್ಲಿಯೇ ಆದೇಶವನ್ನು ಅಂಟಿಸಿದ್ದಾರೆ. ಒಂದು ಈ ಖಾತೆ ಮಾಡಿಸಲು ಕನಿಷ್ಠ 25 ಸಾವಿರ ಹಣ ಕೊಡಬೇಕಂತೆ. ಹಣ ಕೊಟ್ಟವರಿಗೆ ಕೇವಲ 15 ದಿನದಲ್ಲೇ ಈ ಖಾತೆ ಬರುತ್ತದೆ. ಚೌಕಾಸಿ ಮಾಡಿದವರಿಗೆ ತಡವಾಗುತ್ತದೆ ಎಂದು ಅರ್ಜಿದಾರರು ಚೆನ್ನಲಕ್ಷ್ಮಯ್ಯ ಆರೋಪ ಮಾಡಿದ್ದಾರೆ.
ಇವರು AIN ಕನ್ನಡದ ಜೊತೆ ಮಾತನಾಡಿ ಮಳೆ ಬಂದರೆ ನಮ್ಮ ಮನೆಗೆ ನೀರು ನುಗ್ಗುತ್ತಿತ್ತು.ಇದರಿಂದ ಬೇಸತ್ತು ಮನೆ ಕಟ್ಟಬೇಕೆಂದು ಮೂರು ತಿಂಗಳ ಹಿಂದೆ ಈ ಖಾತೆ ಮಾಡಿಸಲು ದಾಖಲೆಗಳನ್ನು ಪಂಚಾಯ್ತಿಗೆ ಕೊಟ್ಟಿದ್ದೆ. ಕೇಳಿದಷ್ಟು ಹಣ ನೀಡದೆ ಇದ್ದರೂ ಸ್ವಲ್ಪ ಹಣವನ್ನು ನೀಡಿದ್ದೆ .
ಈ ಖಾತೆ ಗೆ ಅರ್ಜಿ ಹಾಕಿದರೆ ಮೂರು ತಿಂಗಳಿನಿಂದ ಕಚೇರಿಗೂ ಮನೆಗೂ ಅಲೆಸಿ, ಪಿಐಡಿ ನಂಬರ್ ಇಲ್ಲ, ಮಿಸ್ಸಿಂಗ್ ಪ್ರಾಪರ್ಟಿಗೆ ಸೇರಿಸಿ ಮಾಡಿಸಬೇಕು ಎಂದು ಹೇಳಿ, ಈಗ ಮೂರು ದಿನಗಳ ಹಿಂದೆ ಸರಕಾರ ಪಿಐಡಿ ನಂಬರ್ ಮಾಡುವುದನ್ನು ನಿಲ್ಲಿಸಿದೆ ಎಂದು ಹೇಳಿ ಫೈಲ್ ವಾಪಸ್ ನೀಡಿದ್ದಾರೆ.
ಈ ಪಂಚಾಯ್ತಿಯಲ್ಲಿ ಅಧ್ಯಕ್ಷರು ಮತ್ತು ಪಿಡಿಒ ದೆ ದರ್ಬಾರ್ ಆಗಿದೆ,ಬಡವರಿಗೆ ಇಲ್ಲಿ ನ್ಯಾಯ ಸಿಗುವುದು ಕಣ್ಮರೆಯಾಗಿದೆ. ಕೂಡಲೇ ಹಿರಿಯ ಅಧಿಕಾರಿಗಳು ಇವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ತಮ್ಮ ಆಕ್ರೋಶ ಹೊರಹಾಕಿದರು..