ವಿಜಯನಗರ : ವಿಜಯನಗರ ಜಿಲ್ಲೆಗೆ ಹಾಲಿನ ಮೆಗಾಡೈರಿ ಸ್ಥಾಪಿಸಬೇಕು ಎಂದು ಆಗ್ರಹಿಸಿ ಹಾಲಿನ ಖಾಲಿ ಕ್ಯಾನ್ ತಲೆ ಮೇಲೆ ಹೊತ್ತು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. .
ನಗರದ ಅಂಬೇಡ್ಕರ್ ಮೂರ್ತಿ ಮಾಲಾರ್ಪಣೆ ಬಳಿಕ ಬಸವೇಶ್ವರ ಸರ್ಕಲ್ ನಿಂದ ಸಾಯಿಬಾಬಾ ಸರ್ಕಲ್ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾಮೆರವಣಿಗೆ ನಡೆಸಲಾಯಿತು. ಬಳಿಕ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾವಣೆಗೊಂಡ ಸಾವಿರಾರು ರೈತರು ತಲೆಯ ಮೇಲೆ ಹಾಲಿನ ಕ್ಯಾನ್ ಹೊತ್ತು ವಿಜಯನಗರ ಜಿಲ್ಲೆಯಲ್ಲಿ ಹಾಲಿನ ಮೇಗಾಡೈರಿಯನ್ನ ಸ್ಥಾಪನೆ ಮಾಡಲೇಬೇಕು ಅಂತ ಸರ್ಕಾರದ ವಿರುದ್ಧ ರೈತರು ಆಕ್ರೋಶ ಹೊರ ಹಾಕಿದರು. ಎರಡು ತಿಂಗಳೊಳಗೆ ಮೇಗಾಡೈರಿ ಸ್ಥಾಪನೆ ಆಗದೇ ಹೋದ್ರೆ ಬಳ್ಳಾರಿಗೆ ಹಾಲು ಕೊಡೋದನ್ನ ನಿಲ್ಲಿಸುತ್ತೇವೆ ಅಂತ ರೈತರು ಆಕ್ರೋಶ ಹೊರಹಾಕಿದರು.
ಆಸ್ತಿ ವಿವಾದ ; ಮಿನಿವಿಧಾನಸೌಧ ಆವರಣದಲ್ಲಿ ಕುಟುಂಬದ ಹೊಡೆದಾಟ ; ವಿಡಿಯೋ ವೈರಲ್
ಬಳ್ಳಾರಿಯಲ್ಲಿರುವ ಈಗಿರುವ ಹಾಲು ಒಕ್ಕೂಟಕ್ಕೆ ವಿಜಯನಗರ, ರಾಯಚೂರು, ಬಳ್ಳಾರಿ, ಕೊಪ್ಪಳ ಜಿಲ್ಲೆಗಳು ಸೇರಿವೆ. ಹಾಲು ಉತ್ಪಾದನೆಯಲ್ಲು ಸಿಂಹಪಾಲು ವಿಜಯನಗರ ಜಿಲ್ಲೆಯದ್ದು ಆಗಿದೆ. ಬಳ್ಳಾರಿ ಜಿಲ್ಲೆಯಲ್ಲಿ 69 ಘಟಕಗಳ ಪೈಕಿ 9 ಸಾವಿರ ಲೀಟರ್, ರಾಯಚೂರಲ್ಲಿ 129 ಘಟಕಗಳ ಪೈಕಿ 30 ಸಾವಿರ ಲೀಟರ್, ಕೊಪ್ಪಳದಲ್ಲಿ 270 ಘಟಕಗಳ ಪೈಕಿ 70 ಸಾವಿರ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಆದರೆ ವಿಜಯನಗರ ಜಿಲ್ಲೆವೊಂದರಲ್ಲೇ 360 ಘಟಕಗಳ ಪೈಕಿ 1.20 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗ್ತದೆ. ಅಧಿಕಾರಕ್ಕಾಗಿ ಬರೀ ಬಳ್ಳಾರಿ ಜಿಲ್ಲೆಯವರೇ ಅಧ್ಯಕ್ಷರಾಗುತ್ತಿದ್ದಾರೆ. ಇಲ್ಲಿವರೆಗೂ ಬೇರೆ ಜಿಲ್ಲೆಯಲ್ಲಿ ಅಭಿವೃದ್ಧಿ ಮಾಡಿಲ್ಲ. ಹೀಗಾಗಿ ವಿಜಯನಗರ ಜಿಲ್ಲೆಗೆ ಪ್ರತ್ಯೇಕ ಹಾಲು ಉತ್ಪಾದಕ ಘಟಕ ಸ್ಥಾಪನೆ ಆಗಲೇ ಬೇಕು. ಅಲ್ಲಿವರೆಗೂ ಹೋರಾಟ ನಿಲ್ಲಲ್ಲ ಎಂದು ರೈತರು ಸರ್ಕಾರಕ್ಕೆ ಎಚ್ಚರಿಕೆನೀಡಿದ್ದಾರೆ.