2025ರ ಐಪಿಎಲ್ ಕ್ವಾಲಿಫೈಯರ್ 1ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್ ವಿರುದ್ಧ ಏಕಪಕ್ಷೀಯ ಗೆಲುವು ಸಾಧಿಸಿ ಈ ಸೀಸನ್ನ ಮೊದಲ ತಂಡವಾಗಿ ಫೈನಲ್ ಪ್ರವೇಶಿಸಿದೆ. ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕೇವಲ 101 ರನ್ಗಳಿಗೆ ಆಲೌಟ್ ಆಯಿತು.
ಆರ್ಸಿಬಿ ಸುಲಭವಾಗಿ ಗುರಿ ಮುಟ್ಟಿತು. ಇದು ಆರ್ಸಿಬಿಗೆ ಐಪಿಎಲ್ನಲ್ಲಿ ನಾಲ್ಕನೇ ಫೈನಲ್ ಪ್ರವೇಶ. ಇತ್ತ ಸೋತ ಪಂಜಾಬ್ ಎಲಿಮಿನೇಟರ್ನಲ್ಲಿ ಗೆದ್ದ ತಂಡವನ್ನು ಕ್ವಾಲಿಫೈಯರ್ 2ರಲ್ಲಿ ಎದುರಿಸಲಿದೆ. ಇನ್ನೂ ಸೋತ ಬಳಿಕ ಮಾತನಾಡಿರುವ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್, ನಾವು ಯುದ್ಧವನ್ನು ಕಳೆದುಕೊಂಡಿದ್ದೇವೆ, ಆದರೆ ಅದು ಯುದ್ಧವಲ್ಲ. ಹಾಗಂತ ಈ ದಿನವನ್ನು ಮರೆಯುವಂತಿಲ್ಲ ಎಂದು ಹೇಳಿದ್ದಾರೆ.
ಗಟ್ಟಿಮುಟ್ಟಾದ ಮೂಳೆ ನಿಮ್ಮದಾಗಬೇಕಾ!? ಹಾಗಿದ್ರೆ ಈ ಬೀಜಗಳನ್ನು ತಿನ್ನುವ ಅಭ್ಯಾಸ ಇಟ್ಟುಕೊಳ್ಳಿ!
ಈ ದಿನ ನಮಗೆ ನೆನಪಿನಲ್ಲಿ ಇರಬೇಕು. ನಾವು ಮತ್ತೆ ನಮ್ಮ ಕಾರ್ಯತಂತ್ರವನ್ನು ರೂಪಿಸಬೇಕು. ಮೊದಲ ಇನ್ನಿಂಗ್ಸ್ನಲ್ಲಿ ಬಹಳಷ್ಟು ವಿಕೆಟ್ಗಳನ್ನು ಕಳೆದುಕೊಂಡೆವು. ಅದರ ಬಗ್ಗೆ ಯೋಚಿಸಬೇಕಾಗಿರೋದು ತುಂಬಾನೇ ಇದೆ.
ನಿಜ ಹೇಳಬೇಕು ಅಂದರೆ ನನ್ನ ನಿರ್ಧಾರಗಳನ್ನು ನಾನು ಅನುಮಾನಿಸುವುದಿಲ್ಲ. ಮೈದಾನದ ಹೊರಗೆ ಮತ್ತು ಒಳಗೆ ಏನೇ ಪ್ಲಾನ್ ಮಾಡಿದ್ದರೂ ಅದು ಸರಿಯಾಗಿದೆ ಎಂದು ಭಾವಿಸುತ್ತೇನೆ. ಈ ದಿನ ಅದು ಕಾರ್ಯಗತಗೊಳಿಸಲು ಸಾಧ್ಯವಾಗಲಿಲ್ಲ ಅಷ್ಟೇ ಎಂದಿದ್ದಾರೆ.
ಈ ಸೋಲಿಗೆ ಬೌಲರ್ಗಳನ್ನು ದೂಷಿಸಲಾಗುವುದಿಲ್ಲ. ನಮ್ಮ ಸ್ಕೋರ್ ತುಂಬಾನೇ ಕಡಿಮೆ ಇತ್ತು. ನಾವು ಬ್ಯಾಟಿಂಗ್ನಲ್ಲಿ ಕೆಲಸ ಮಾಡಬೇಕು. ವಿಶೇಷವಾಗಿ ಇಂಥ ವಿಕೆಟ್ನಲ್ಲಿ. ಇಲ್ಲಿ ಆಡಿದ ಎಲ್ಲಾ ಪಂದ್ಯಗಳು ಏರಿಳಿತಗಳನ್ನು ಹೊಂದಿವೆ. ಹಾಗಾಗಿ ಸೋಲಿಗೆ ಅಂತಹ ಕಾರಣಗಳನ್ನು ನೀಡಲು ಸಾಧ್ಯವಿಲ್ಲ. ಏಕೆಂದರೆ ನಾವು ವೃತ್ತಿಪರರು ಮತ್ತು ಪರಿಸ್ಥಿತಿಗೆ ಅನುಗುಣವಾಗಿ ಬ್ಯಾಟಿಂಗ್ ಮಾಡಬೇಕು. ಅದಕ್ಕೆ ತಕ್ಕಂತೆ ಪ್ರದರ್ಶನ ನೀಡಬೇಕು ಎಂದು ಹೇಳಿದ್ದಾರೆ.