ಬೆಂಗಳೂರು: ರಹಿಮಾನ್ಹತ್ಯೆಕೇಸ್ ಗೆ ಸಂಬಂಧಪಟ್ಟಂತೆ ನಾವು ಯಾವುದೇ ಕಾರಣಕ್ಕೂ ಕೈಕಟ್ಟಿ ಕೂರುವುದಿಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನಾವು ಯಾರನ್ನೂ ಸುಮ್ಮನೆ ಬಿಡುವುದಿಲ್ಲ. ಪ್ರಜ್ಞಾವಂತ ಸಮುದಾಯ ಎಂದು ಅಲ್ಲಿನ ಸಮುದಾಯದವರ ಜೊತೆ ಮಾತನಾಡಿ ಬಂದಿದ್ದೇನೆ.
ಮತ್ತೆ ಅದೇ ರೀತಿ ಆದರೆ ಹೇಗೆ? ನಾವು ಯಾವುದೇ ಕಾರಣಕ್ಕೂ ಕೈಕಟ್ಟಿ ಕೂರುವುದಿಲ್ಲ. ಜನರು ನಮಗೆ ಸಹಕಾರ ಕೊಡಬೇಕು. ಹಿಂದೆಯೇ ಅವರನ್ನ ಬದಲಿಸಿ ಇವರನ್ನ ಬದಲಿಸಿ ಎಂಬ ಒತ್ತಾಯ ಮಾಡಿದ್ದರು. ಅವರು ಹೇಳಿದ ಕೂಡಲೇ ಮಾಡಬಾರದು ಅಂತ ಸುಮ್ಮನಿದ್ದೆವು. ಈಗ ಅಧಿಕಾರಿಗಳನ್ನು ಬದಲಿಸಿದ್ದೇವೆ ಎಂದರು.
ಗಟ್ಟಿಮುಟ್ಟಾದ ಮೂಳೆ ನಿಮ್ಮದಾಗಬೇಕಾ!? ಹಾಗಿದ್ರೆ ಈ ಬೀಜಗಳನ್ನು ತಿನ್ನುವ ಅಭ್ಯಾಸ ಇಟ್ಟುಕೊಳ್ಳಿ!
ಕರಾವಳಿಯಲ್ಲಿ ನಡೆಯುತ್ತಿರುವ ಘಟನೆಗಳನ್ನು ಸರ್ಕಾರ ಬಹಳ ಗಂಭೀರವಾಗಿ ತೆಗೆದುಕೊಂಡಿದೆ. ಯಾರು ಏನೇ ಹೇಳಿದರು ನಾವು ಸಹಿಸುವುದಿಲ್ಲ. ಯಾವ ಕಾರಣಕ್ಕೂ ಜಿಲ್ಲೆಯಲ್ಲಿ ಶಾಂತಿಯನ್ನು ಕದಡಲು ಬಿಡುವುದಿಲ್ಲ.
ಈ ರೀತಿ ಹತ್ಯೆಗಳು ನಡೆಯುತ್ತಲೇ ಇದ್ದರೆ ಸರ್ಕಾರ ಸಹಿಸೋಕೆ ಆಗುತ್ತಾ? ಇಲ್ಲ ನಾವು ಸಹಿಸುವುದಿಲ್ಲ. ಅನಿವಾರ್ಯವಾಗಿ ಕೆಲವು ಅಧಿಕಾರಿಗಳನ್ನ ಬದಲಿಸಿದ್ದೇವೆ. ಈಗ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇವೆ. ನಾವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.