ಚಿಕ್ಕಮಗಳೂರು:- ಇಲ್ಲಿನ ಕೊಪ್ಪ ತಾಲೂಕಿನ ಜಯಪುರದಲ್ಲಿ ಸುರಿದ ಭಾರೀ ಮಳೆಗೆ ನಾಡಕಚೇರಿ ಕಟ್ಟಡ ಕುಸಿದಿದ್ದು, ಮಹತ್ತರ ದಾಖಲೆಗಳು ನಾಶವಾಗಿದೆ.
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗೆಲ್ಲ ಕ್ರೈಂ ರೇಟ್ ಹೆಚ್ಚಳ: ಶೋಭಾ ಕರಂದ್ಲಾಜೆ!
ಎಸ್, ಕಳೆದ ಒಂದು ವಾರದಿಂದ ಸುರಿದ ಮಳೆಗೆ ವರ್ಷದ ಹಿಂದಷ್ಟೇ 5 ಲಕ್ಷ ರೂ. ವೆಚ್ಚದಲ್ಲಿ ದುರಸ್ತಿ ಮಾಡಿದ್ದ ನಾಡಕಚೇರಿ ಕಟ್ಟಡ ಕುಸಿದು ಬಿದ್ದಿದೆ. ಕಚೇರಿಯಲ್ಲಿ ಅಧಿಕಾರಿಗಳು, ಜನಸಾಮಾನ್ಯರು ಇದ್ದಾಗಲೇ ಕಟ್ಟಡ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾರಿಗೂ ಹಾನಿಯಾಗಿಲ್ಲ. ಕಟ್ಟಡ ಇದ್ದಕ್ಕಿದ್ದಂತೆ ಕುಸಿದಿದ್ದರಿಂದ ಕಚೇರಿಯಲ್ಲಿದ್ದ ದಾಖಲೆಗಳು ನಾಶವಾಗಿವೆ.
ಸುಮಾರು 50 ವರ್ಷ ಹಿಂದಿನ ಹಳೇಯ ಪಾಳುಬಿದ್ದ ಶಾಲೆಯನ್ನು ನಾಡಕಚೇರಿಯನ್ನಾಗಿ ಮಾಡಿದ್ದರು. ಕಳೆದ 1 ವರ್ಷದ ಹಿಂದಷ್ಟೆ 5 ಲಕ್ಷ ರೂ. ವೆಚ್ಚದಲ್ಲಿ ದುರಸ್ತಿಯನ್ನೂ ಮಾಡಲಾಗಿತ್ತು. ಆದರೆ ವಾರದ ಮಳೆಗೆ ಕುಸಿದಿದ್ದು, ಕಳಪೆ ಕಾಮಗಾರಿ ಎಂಬ ಆರೋಪ ಕೇಳಿ ಬಂದಿದೆ.