ಹಾಸನ:- ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದೆ. ಮೃಗಶಿರ ಮಳೆಯ ಆರ್ಭಟಕ್ಕೆ ಜನ ತತ್ತರಿಸಿದ್ದಾರೆ. ಸುರಿಯುತ್ತಿರುವ ಭಾರೀ ಮಳೆಯಿಂದ ಶಿರಾಡಿ ಘಾಟ್ನಲ್ಲಿ ಅಧ್ವಾನ ಸೃಷ್ಟಿಯಾಗಿದೆ
ಹೀಗಾಗಿ ಮಳೆಯಿಂದ ಹಾನಿಯಾದ ಶಿರಾಡಿಘಾಟ್ ಪ್ರದೇಶಕ್ಕೆ ಶಾಸಕ ಸಿಮೆಂಟ್ ಮಂಜು ಭೇಟಿ ನೀಡಿ ಪರಿಶೀಲಿಸಿದರು. ಭಾರೀಮಳೆಗೆ ಆನೆಮಹಲ್- ದೋಣಿಗಲ್ ನಡುವಿನ ತಡೆಗೋಡೆ ಕೊಚ್ಚಿ ಹೋಗಿದ್ದು, ಹೀಗಾಗಿ ರಸ್ತೆಗೆ ಹಾನಿಯಾದ ಸ್ಥಳಕ್ಕೆ ಶಾಸಕರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಶಾಸಕ ಸಿಮೆಂಟ್ ಮಂಜು ಹೇಳಿದ್ದೇನು?
ಅಧಿಕಾರಿಗಳು ಅವೈಜ್ಞಾನಿಕವಾಗಿ ಕೆಲಸ ಮಾಡಿದ್ದಾರೆ. ಗೇಬಿಯನ್ ವಾಲ್ ಮಲೆನಾಡಿಗೆ ಆಗೊದಿಲ್ಲ. ಇದು ಗೊತ್ತಿದ್ದರೂ ಈ ತಡೆಗೋಡೆ ಮಾಡಿ ಅವಾಂತರ ಮಾಡಿದ್ದಾರೆ.
ಕೂಡಲೆ ಮಳೆಗಾಲ ಮುಗಿಯೊವರೆಗೆ ಗೇಬಿಯನ್ ವಾಲ್ ಇರೊಕಡೆ ವಾಹನ ಸಂಚಾರ ನಿಲ್ಲಿಸಬೇಕು. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದ್ದಾರೆ.