ಹಾವೇರಿ : ರಾಜ್ಯದ ಹಲವೆಡೆ ಮಳೆಯಾಗುತ್ತಿದೆ. ಹಾವೇರಿ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಹಲವೆಡೆ ಧಾರಾಕಾರ ಮಳೆಯಾಗಿದೆ. ಮಳೆಯಿಂದಾಗಿ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ರೈತರ ಪರದಾಡುವಂತಾಗಿದೆ.
ಮಳೆಯಿಂದಾಗಿ ಬ್ಯಾಡಗಿಯಲ್ಲಿ ಮಾರಾಟ ಮಾಡಲು ತಂದಿದ್ದ ಮೆಣಸಿನಕಾಯಿ ಉಳಿಸಿಕೊಳ್ಳಲು ರೈತರು, ವರ್ತಕರು ಪರದಾಡುವಂತಾಗಿದೆ.
ಬ್ಯಾಡಗಿ ಮಾರುಕಟ್ಟೆಗೆ ಬಂದಿದ್ದ2 ಲಕ್ಷಕ್ಕೂ ಅಧಿಕ ಮೆಣಸಿನಕಾಯಿ ಚೀಲಗಳು ಬಂದಿವೆ. ಆದರೆ ಮಳೆಯಿಂದಾಗಿ ಒಣಮೆಣಸಿನಕಾಯಿ ನೆನಯುವ ಆತಂಕ ಎದುರಾಗದ್ದು,ಟಾರ್ಪಲ್ಗಳನ್ನು ಮುಚ್ಚಿದ್ದಾರೆ.