ಕೊಡಗು:- ಜಿಲ್ಲೆಯಲ್ಲಿ ಕಳೆದ ಎರಡು ಮೂರು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು ನದಿ ತೊರೆಗಳು ತುಂಬಿ ಹರಿಯುತ್ತಿದೆ. ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದೆ. ಬ್ರಹ್ಮಗಿರಿ ತಪ್ಪಲು ಪ್ರದೇಶ ತಲಕಾವೇರಿ ಭಾಗಮಂಡಲದಲ್ಲು ಭಾರಿ ಮಳೆಯಾಗುತ್ತಿದೆ.
ಇರಾನ್-ಇಸ್ರೇಲ್ ಯುದ್ಧ ಎಫೆಕ್ಟ್: ಕರ್ನಾಟಕಕ್ಕೆ ಬರುತ್ತಿದ್ದ ಮಸಾಲೆ, ಡ್ರೈಫ್ರೂಟ್ಸ್ ಸಪ್ಲೈ ಬಂದ್!
ಈ ಭಾಗದಲ್ಲಿ ಭಾರಿ ಮಳೆ ಹಿನ್ನಲೆ ಕಾವೇರಿ ನದಿ ಮಟ್ಟ ಗಣನೀಯ ಏರಿ ಕಂಡಿದೆ. ಕಾವೇರಿ ನದಿಯಲ್ಲಿ ನೀರು ಹೆಚ್ಚಾಗಿರೋದ್ರಿಂದ ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೋಮ್ಮೆ ಭರ್ತಿಯಾಗಿದೆ. ನಾಪೋಕ್ಲು-ಭಾಗಮಂಡಲ ರಸ್ತೆ ಮೇಲೆ ಅಲ್ಪ ಪ್ರಮಾಣದಲ್ಲಿ ನೀರು ಹರಿಯುತ್ತಿದೆ.
ಇದೇ ರೀತಿ ಮಳೆ ಮುಂದುವರೆದಲ್ಲಿ ಮಡಿಕೇರಿ-ಭಾಗಮಂಡಲ, ನಾಪೋಕ್ಲು-ಭಾಗಮಂಡಲ ರಸ್ತೆಗಳ ಮೇಲು ನೀರು ತುಂಬಿ ಬಾಗಮಂಡಲದ ಭಗಂಡೇಶ್ವರ ದೇವಾಲಯದ ಸಮೀಪಕ್ಕು ನೀರು ಬರುವ ಸಾಧ್ಯತೆ ಇದೆ. ಈ ಭಾರಿ ರಸ್ತೆಗಳ ಮೇಲು ನೀರು ಹರಿದು ಬಂದ್ ಆದ್ರು ಕೂಡ ಜನತೆ ಯಾವುದಕ್ಕು ಭಯ ಪಡುವ ಅಗತ್ಯ ಇಲ್ಲ. ಪರ್ಯಾಯವಾಗಿ ಮೆಲ್ಸೆತುವೆಯನ್ನ ಅವಲಂಬಿಸಲಿದ್ದಾರೆ.