ಹುಬ್ಬಳ್ಳಿ: ಧಾರವಾಡ ಜಿಲ್ಲೆಯಿಂದ ಸೊಲ್ಲಾಪುರ ಹಾಗೂ ತುಳಜಾಪುರಕ್ಕೆ ಹೋಗಿ ಬರುವ ಭಕ್ತಾಧಿಗಳು ವಾಣಿಜ್ಯೋದ್ಯಮಿಗಳು, ಹಾಗೂ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಹುಬ್ಬಳ್ಳಿಯಿಂದ ತುಳಜಾಪುರಕ್ಕೆ ರಾಜಹಂಸ ಬಸ್ ಸಂಚಾರವನ್ನು ಆರಂಭಿಸಲಾಗಿದೆ.
ದೇಹಕ್ಕೆ ಒಳ್ಳೆಯದು ಅಂತ ಹೆಚ್ಚು ಖರ್ಜೂರ ತಿನ್ನೋ ಮುನ್ನ ಹುಷಾರ್! ಈ ಭಾಗಕ್ಕೆ ಹಾನಿಕಾರಕ!
ಹಿರಿಯ ಅಧಿಕಾರಿಗಳು ನೂತನ ಬಸ್ ಮಾರ್ಗಕ್ಕೆ ಚಾಲನೆ ನೀಡಿದರು. ನಂತರವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮಾತನಾಡಿಧಾರವಾಡ ಜಿಲ್ಲೆಯಿಂದ ತುಳಜಾಪುರ ಅಂಬಾ ಭವಾನಿ ದೇವಿಯ ದರ್ಶನಕ್ಕೆ ತೆರಳುವ ಭಕ್ತಾಧಿಗಳು,
ವಾಣಿಜ್ಯೋದ್ಯಮಿಗಳು ಹಾಗೂ ಮತ್ತಿತರ ಕೆಲಸ ಕಾರ್ಯಗಳಿಗೆ ಸೊಲ್ಲಾಪುರ ಮತ್ತಿತರ ಸ್ಥಳಗಳಿಗೆ ಹೋಗುವ ಇತರ ಪ್ರಯಾಣಿಕರಿಗೆ ಮತ್ತಷ್ಟು ಆರಾಮದಾಯಕ ಸಾರಿಗೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ನವಲಗುಂದ, ನರಗುಂದ, ಗದ್ದನಕೇರಿ ಕ್ರಾಸ್, ವಿಜಯಪುರ, ಸೋಲಾಪುರ ಮಾರ್ಗವಾಗಿ ಹುಬ್ಬಳ್ಳಿಯಿಂದ ತುಳಜಾಪುರಕ್ಕೆ ನೇರವಾಗಿ ರಾಜಹಂಸ ರಾತ್ರಿ ಸಾರಿಗೆ ಬಸ್ ಸಂಚಾರ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.
ವೇಳಾಪಟ್ಟಿ: ಹುಬ್ಬಳ್ಳಿ ಗೋಕುಲ ರಸ್ತೆ ಬಸ್ ನಿಲ್ದಾಣದಿಂದ ರಾತ್ರಿ 10-15ಕ್ಕೆ ಹೊರಡುತ್ತದೆ. ಹೊಸೂರು ಬಸ್ ನಿಲ್ದಾಣದಿಂದ 10-30ಕ್ಕೆ ಹೊರಡುತ್ತದೆ. ನವಲಗುಂದ(11-15), ನರಗುಂದ(11-45), ಗದ್ದನಕೇರಿ ಕ್ರಾಸ(ರಾತ್ರಿ1-15), ವಿಜಯಪುರ(ಬೆಳಿಗ್ಗೆ 2-45), ಸೊಲ್ಲಾಪುರ ಬೆಳಿಗ್ಗೆ 5-15ಕ್ಕೆ ಹೊರಟು ತುಳಜಾಪುರಕ್ಕೆ ಮರುದಿನ ಬೆಳಿಗ್ಗೆ 6-15ಕ್ಕೆ ತಲುಪುತ್ತದೆ.
ತುಳಜಾಪುರದಿಂದ ರಾತ್ರಿ 8-15 ಕ್ಕೆ ಹೊರಡುತ್ತದೆ. ಸೊಲ್ಲಾಪುರದಿಂದ ರಾತ್ರಿ10-00ಕ್ಕೆ ಹೊರಟು ವಿಜಯಪುರ ಮಾರ್ಗವಾಗಿ ಹುಬ್ಬಳ್ಳಿಗೆ ಮರುದಿನ ಬೆಳಿಗ್ಗೆ 5-00ಕ್ಕೆ ಆಗಮಿಸುತ್ತದೆ.
ಪ್ರಯಾಣ ದರ: ಅಪಘಾತ ಪರಿಹಾರ ಶುಲ್ಕ ಹಾಗೂ ಟೋಲ್ ಫೀ ಸೇರಿ ಹುಬ್ಬಳ್ಳಿಯಿಂದ ಸೊಲ್ಲಾಪುರಕ್ಕೆ ರೂ.568 ಹಾಗೂ ತುಳಜಾಪುರಕ್ಕೆ ರೂ.678 ಪ್ರಯಾಣ ದರ ನಿಗದಿಪಡಿಸಲಾಗಿದೆ.
ಮುಂಗಡ ಬುಕಿಂಗ್ ಗೆ ರಿಯಾಯಿತಿ
ಈ ಬಸ್ಸಿಗೆ ಮುಂಗಡ ಬುಕ್ಕಿಂಗ್ ಮಾಡಲು www.ksrtc.in ವೆಬ್ ಸೈಟ್, KSRTC Mobile App ಹಾಗೂ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ಒಂದೇ ಟಿಕೆಟ್ ನಲ್ಲಿ 4 ಅಥವಾ ಹೆಚ್ಚು ಆಸನಗಳನ್ನು ಕಾಯ್ದಿರಿಸಿದರೆ ಪ್ರಯಾಣ ದರದಲ್ಲಿ ಶೇಕಡ5 ರಷ್ಟು ರಿಯಾಯಿತಿ ನೀಡಲಾಗುತ್ತದೆ.
ಹೋಗುವ ಮತ್ತು ಹಿಂದಿರುಗುವ ಪ್ರಯಾಣಕ್ಕೆ ಒಂದೇ ಟಿಕೆಟ್ ಪಡೆದರೆ ಹಿಂದಿರುಗುವ ಪ್ರಯಾಣದರದಲ್ಲಿ ಶೇಕಡ 10 ರಷ್ಟು ರಿಯಾಯಿತಿ ನೀಡಲಾಗುತ್ತದೆ. ಎಂದು ಅವರು ಮಾಹಿತಿ ನೀಡಿದ್ದಾರೆ. ವಿಭಾಗೀಯ ಸಂಚಾರ ಅಧಿಕಾರಿ ಸಂಗಪ್ಪ ಮಾಟೊಳಿ, ವಿಭಾಗೀಯ ತಾಂತ್ರಿಕ ಇಂಜಿನಿಯರ್ ದೀಪಕ ಜಾಧವ, ಡಿಪೊ ಮ್ಯಾನೇಜರ ವಿನೋದ ಅಮ್ಮಣಗಿ ಮತ್ತಿತರರು ಇದ್ದರು.