Close Menu
Ain Live News
    Facebook X (Twitter) Instagram YouTube
    Sunday, June 22
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಗೆಲ್ಲುವ ಪಂದ್ಯ ಕೈಚೆಲ್ಲಿದ ರಾಜಸ್ಥಾನ್: RR ಕ್ಯಾಪ್ಟನ್ ರಿಯಾನ್ ಪರಾಗ್ ಹೇಳಿದ್ದೇನು?

    By AIN AuthorApril 25, 2025
    Share
    Facebook Twitter LinkedIn Pinterest Email
    Demo

    ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಆರ್ ಆರ್ ವಿರುದ್ಧ ಗೆದ್ದು ಬೀಗಿದೆ. ಆದರೆ ಗೆಲುವಿನ ಸನಿಹದಲ್ಲಿ ಬಂದು ರಾಜಸ್ಥಾನ್ ಪಂದ್ಯ ಕೈಚೆಲ್ಲಿದೆ.

    ಬಿಜೆಪಿಗೆ ತಿರುಗೇಟು ನೀಡಿದ ಸಿ.ಎಂ.ಸಿದ್ದರಾಮಯ್ಯ: ಹೇಳಿದ್ದೇನು!?

    ಪಂದ್ಯದ ಸೋಲಿನ ನಂತರ ಪಂದ್ಯ ಪ್ರಸ್ತುತಿಯಲ್ಲಿ ಮಾತನಾಡಿದ ರಾಜಸ್ಥಾನ್ ರಾಯಲ್ಸ್ ನಾಯಕ ರಿಯಾನ್ ಪರಾಗ್ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದರು, ‘ನಾವು ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದೆವು. ಈ ಪಿಚ್​ನಲ್ಲಿ 210 ರಿಂದ 215 ರನ್‌ ಕಲೆಹಾಕಬಹುದು ಎಂದು ನಾವು ಭಾವಿಸಿದ್ದೇವು. ಆದರೆ ನಾವು ಆರ್‌ಸಿಬಿಯನ್ನು 205 ರನ್​​ಗಳಿಗೆ ಕಟ್ಟಿಹಾಕಿದೆವು. ಈ ಗುರಿ ಬೆನ್ನಟ್ಟಿದಾಗ ಪಂದ್ಯದ ಮೊದಲಾರ್ಧದಲ್ಲಿ ನಾವು ಉತ್ತಮ ಸ್ಥಾನದಲ್ಲಿದ್ದೆವು. ಆದರೆ ಆ ನಂತರ ನಮ್ಮ ಬ್ಯಾಟಿಂಗ್‌ ಹಳಿತಪ್ಪಿತು. ನಾವು ನಮ್ಮ ತಪ್ಪನ್ನು ಒಪ್ಪಿಕೊಳ್ಳಬೇಕು. ವಿಶೇಷವಾಗಿ ಸ್ಪಿನ್ ಬೌಲರ್‌ಗಳ ವಿರುದ್ಧ, ನಾವು ಆಕ್ರಮಣಶೀಲತೆಯನ್ನು ತೋರಿಸಲಿಲ್ಲ’ ಎಂದರು.

    ಇನ್ನು ಮಧ್ಯಮ ಕ್ರಮಾಂಕದ ವೈಫಲ್ಯ ಮಾನಸಿಕ ಒತ್ತಡದಿಂದಾಗಿ ಸಂಭವಿಸಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಪರಾಗ್, ‘ಹೌದು, ಮಾನಸಿಕ ಅಂಶವೂ ಮುಖ್ಯವಾಗಿದೆ, ಆದರೆ ನಮ್ಮ ಕೋಚ್ ಮತ್ತು ಸಹಾಯಕ ಸಿಬ್ಬಂದಿ ನಮಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದ್ದಾರೆ. ಈಗ ಆ ಸ್ವಾತಂತ್ರ್ಯವನ್ನು ಸರಿಯಾಗಿ ಬಳಸುವುದು ಮತ್ತು ಮುಕ್ತವಾಗಿ ಆಡುವುದು ನಮ್ಮ ಜವಾಬ್ದಾರಿಯಾಗಿದೆ. ಈ ಪಂದ್ಯಾವಳಿಯಲ್ಲಿ, ನೀವು ಒಂದು ಸಣ್ಣ ತಪ್ಪು ಮಾಡಿದರೂ, ನೀವು ಅದಕ್ಕೆ ಭಾರೀ ಬೆಲೆ ತೆರಬೇಕಾಗುತ್ತದೆ. ನಾವು ಒಂದು ತಂಡವಾಗಿ ಬಹಳಷ್ಟು ಮಾತನಾಡುತ್ತೇವೆ ಮತ್ತು ಪ್ರತಿಯೊಬ್ಬರೂ ಒಂದು ನಿರ್ದಿಷ್ಟ ಪರಿಸ್ಥಿತಿಯಲ್ಲಿ ತಮಗೆ ಹೇಗೆ ಅನಿಸಿತು ಎಂಬುದನ್ನು ಪ್ರಾಮಾಣಿಕವಾಗಿ ಹೇಳುತ್ತಾರೆ.

    ನಾವು ಮೊದಲೇ ಇದೇ ರೀತಿಯ ಪರಿಸ್ಥಿತಿಯ ಬಗ್ಗೆ ಮಾತನಾಡಿದ್ದೆವು, ಆದರೆ ಇಂದು ನಾವು ಅದನ್ನು ಮೈದಾನದಲ್ಲಿ ಇರಿಸಲು ಸಾಧ್ಯವಾಗಲಿಲ್ಲ. ಈಗ ನಾವು ಗೌರವಕ್ಕಾಗಿ ಆಡಬೇಕಾಗಿದೆ. ನಮ್ಮನ್ನು ಬೆಂಬಲಿಸುವ ಮತ್ತು ನಮಗಾಗಿ ಶ್ರಮಿಸುವ ಅನೇಕ ಜನರಿದ್ದಾರೆ. ನಾವು ಅವರಿಗಾಗಿ ಚೆನ್ನಾಗಿ ಆಡಬೇಕು. ಈ ತಂಡಕ್ಕಾಗಿ ಆಡಲು ನನಗೆ ಹೆಮ್ಮೆಯಿದೆ ಎಂದರು.

    Demo
    Share. Facebook Twitter LinkedIn Email WhatsApp

    Related Posts

    ಟೀಮ್ ಇಂಡಿಯಾ ಕೋಚ್ ಆಗಲು ರೆಡಿ ಇದ್ದಾರಂತೆ ಸೌರವ್ ಗಂಗೂಲಿ!

    June 22, 2025

    33 ಎಸೆತಕ್ಕೆ ಶತಕ..ಶರವೇಗದ ಸೆಂಚುರಿ ಸಿಡಿಸಿ ಹೊಸ ಇತಿಹಾಸ ನಿರ್ಮಿಸಿದ ಅಭಿಷೇಕ್!

    June 22, 2025

    ಟೆಸ್ಟ್‌ ಕ್ರಿಕೆಟ್‌ನಲ್ಲಿ ರಿಷಭ್ ಪಂತ್‌ ದಾಖಲೆ..ಧೋನಿ ರೆಕಾರ್ಡ್‌ ಬ್ರೇಕ್!

    June 21, 2025

    Paris Diamond League: ನೀರಜ್ ಚೋಪ್ರಾ ಅಬ್ಬರ: ನಡುಗುವ ಚಳಿಯಲ್ಲೂ ಚಿನ್ನಕ್ಕೆ ಮುತ್ತಿಟ್ಟ ಕ್ರೀಡಾ ತಾರೆ!

    June 21, 2025

    India vs England: ಟೆಸ್ಟ್’ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ ರಿಷಭ್ ಪಂತ್! ಧೋನಿ ದಾಖಲೆ ಉಡೀಸ್

    June 21, 2025

    ಚಿನ್ನಸ್ವಾಮಿ ದುರಂತ: ಜಿಲ್ಲಾಧಿಕಾರಿ ನೇತೃತ್ವದಲ್ಲಿ ತನಿಖೆ ಚುರುಕು.. ಕೆ.ಎಸ್.ಸಿ.ಎ ಖಜಾಂಚಿ- ಸೆಕ್ರೆಟ್ರಿಗೆ ನೋಟಿಸ್ ಜಾರಿ!

    June 21, 2025

    IND vs ENG Test: ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ಕೆ: ಹೀಗಿದೆ ನೋಡಿ ಉಭಯ ತಂಡಗಳ ಪ್ಲೇಯಿಂಗ್ XI

    June 20, 2025

    Sachin Tendulkar: ನಾನು ಕ್ಯಾಪ್ಟನ್ ಆಗಿದ್ರೆ ಪಂತ್’ಗೆ ಇದೇ ರೀತಿಯ ಎಚ್ಚರಿಕೆ ನೀಡುತ್ತಿದ್ದೆ: ಸಚಿನ್ ತೆಂಡೂಲ್ಕರ್

    June 20, 2025

    ಟೆಸ್ಟ್ ಗೆಲ್ಲಲು ಬ್ಯಾಟಿಂಗ್ ಕ್ರಮಾಂಕ ಬದಲಿಸಲು ನಾನು ಸಿದ್ಧ: ಶುಭ್​ಮನ್ ಗಿಲ್!

    June 20, 2025

    Team India: BCCI ನಾಯಕತ್ವಕ್ಕೆ ಪರಿಗಣಿಸಿದೆ.. ನನಗೆ ಅದು ಬೇಡ.. ಟೆಸ್ಟ್ ಕ್ಯಾಪ್ಟನ್ ಆಫರ್ ಬಗ್ಗೆ ಬುಮ್ರಾ ಹೇಳಿದ್ದೇನು..?

    June 19, 2025

    ಲಂಡನ್’ನಲ್ಲಿರುವ ಕೊಹ್ಲಿ ನಿವಾಸಕ್ಕೆ ಶುಭಮನ್ ಗಿಲ್, ಪಂತ್ ಭೇಟಿ.! ಯಾಕೆ ಗೊತ್ತಾ..?

    June 19, 2025

    Sophie Devine: ವಿಶ್ವಕಪ್ ನಂತರ ವಿದಾಯ.. ಏಕದಿನ ಪಂದ್ಯಗಳಿಂದ ನಿವೃತ್ತಿಯಾಗಲು ಕಿವೀಸ್ ನಾಯಕಿ ನಿರ್ಧಾರ..!

    June 18, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.