ಚಿತ್ರದುರ್ಗ:- ಕೋಟೆನಾಡು ಚಿತ್ರದುರ್ಗ ನಗರದ ಈದ್ಗಾ ಮೈಧಾನದಲ್ಲಿ ರಂಜಾನ್ ಹಿನ್ನೆಲೆ ಸಾಮೋಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ನಾಡಿನೆಲ್ಲೆಡೆ ಇಂದು ಮುಸ್ಲಿಂ ರ ಪವಿತ್ರ ಹಬ್ಬ ರಂಜಾನ್ ಅನ್ನ ಆಚರಣೆ ಮಾಡಲಾಗುತ್ತಿದ್ದು ಚಿತ್ರದುರ್ಗ ನಗರದ ಈದ್ಗಾ ಮೈದಾನದಲ್ಲಿ ಸೋಮವಾರ ಬೆಳಗ್ಗೆ 8 ಗಂಟೆಗೆ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಬಾಂದವರು ಸಮೋಹಿಕ ಪ್ರಾರ್ಥನೆ ಸಲ್ಲಿಸಿದ್ದಾರೆ.
ಇನ್ನೂ ಬಿಸಿಲನ್ನು ಸಹ ಲೆಕ್ಕಿಸದೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಮುಸ್ಲಿಂ ಬಾಂದವರು ಈದ್ಗಾ ಮೈಧಾನದಲ್ಲಿ ಕೂತು ಸಾಮೋಹಿಕ ಪ್ರಾರ್ಥನೆ ಸಲ್ಲಿಸಿದ್ದು ಸರ್ವರಿಗೂ ಒಳಿತಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೆ ದರ್ಮ ಗುರುಗಳು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದು ಪುಟಾಣಿ ಮಕ್ಕಳು ವೃದ್ದರು ಕೂಡ ಈ ಒಂದು ರಂಜಾನ್ ನ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಪರಸ್ಪರ ಶುಭಕೋರಿ ರಂಜಾನ್ ಅನ್ನ ಆಚರಣೆ ಮಾಡಿದ್ದು ಕಳೆದ ಒಂದು ತಿಂಗಳಿನಿಂದ ಉಪವಾಸ ಇದ್ದು ದೇವರಲ್ಲಿ ಪ್ರಾರ್ಥನೆ ಸಲ್ಲಿಸುವ ಮುಲಕ ರಂಜಾನ್ ಅನ್ನ ಆಚರಣೆ ಮಾಡಿದ್ದಾರೆ