Close Menu
Ain Live News
    Facebook X (Twitter) Instagram YouTube
    Wednesday, June 4
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    RCB ಜೆರ್ಸಿ ತೊಟ್ಟು ಈ ಸಲಾ ಕಪ್‌ ನಮ್ದೇ ಎಂದ ರಮೇಶ್ ಅರವಿಂದ್!

    By Author AINJune 3, 2025
    Share
    Facebook Twitter LinkedIn Pinterest Email
    Demo

    ಐಪಿಎಲ್ ನ ಫ಼ೈನಲ್ಸ್ ಗೆ ಆರ್ಸಿಬಿ ತಂಡ ತಲುಪಿರುವ ಹಿನ್ನೆಲೆಯಲ್ಲಿ, ದೈಜಿ ಸಿನೆಮಾ ತಂಡವು ನಗರದ ನ್ಯೂ ಬಿ.ಇ.ಎಲ್ ರಸ್ತೆಯಲ್ಲಿರುವ ಮಸಾಲ ಮಾರ್ಟಿನಿ ಪಬ್ ನಲ್ಲಿ ಚಿತ್ರದ ಶೂಟಿಂಗ್ ವೇಳೆ ಸಂಭ್ರಮಿಸಿ ಆರ್ಸಿಬಿ ತಂಡಕ್ಕೆ ಬೆಂಬಲ ವ್ಯಕ್ತಪಡಿಸಿತು.

    ಈ ಸಂದರ್ಭದಲ್ಲಿ ಶೂಟಿಂಗ್ ನಲ್ಲಿ ಭಾಗವಹಿಸಿದ್ದ ದೈಜಿ ಸಿನೆಮಾದ ಮುಖ್ಯ ತಾರಾಗಣದಲ್ಲಿರುವ ರಮೇಶ್ ಅರವಿಂದ್, ರಾಧಿಕಾ ನಾರಾಯಣ್, ದಿಗಂತ್, ನಿಧಿ ಹೆಗ್ಡೆ ಹಾಗೂ ನಿರ್ದೇಶಕರಾದ ಆಕಾಶ್ ಶ್ರೀವತ್ಸ ಮತ್ತು ನಿರ್ಮಾಪಕರಾದ ರವಿ ಕಶ್ಯಪ್ ಇವರೆಲ್ಲರೂ ತಂಡದ ಇನ್ನಿತರ ಸದಸ್ಯರೊಂದಿಗೆ ಆರ್ಸಿಬಿ ತಂಡದ ಜೆರ್ಸಿ ಧರಿಸಿ, ಹರ್ಷೋದ್ಗಾರದೊಂದಿಗೆ ಸಂಭ್ರಮಿಸಿ ಹಾರೈಸಿದರು.

    ೧೮ ವರ್ಷಗಳಲ್ಲಿ ಮೂರನೇ ಬಾರಿ ಐಪಿಎಲ್ ಫ಼ೈನಲ್ಸ್ ಗೆ ತಲುಪಿರುವ ಆರ್ಸಿಬಿ ತಂಡ ಈ ಸಲ ಕಪ್ ತಮ್ಮದಾಗಿಸಿಕೊಳ್ಳಲಿ ಎಂಬ ಆಶಯದೊಂದಿಗೆ ಇಡೀ ತಂಡ ಆರ್ಸಿಬಿ ಜೆರ್ಸಿ ಧರಿಸಿ, ಬಾವುಟ ಹಿಡಿದು ಒಕ್ಕೊರಲಿನಿಂದ ತಮ್ಮ ಹಾರೈಕೆಗಳನ್ನು ವ್ಯಕ್ತಪಡಿಸಿದ್ದು ಸೆಟ್ ನಲ್ಲಿ ನೆರೆದಿದ್ದ ಎಲ್ಲರಲ್ಲೂ ವಿಶೇಷ ಸಂಚಲನ ಮೂಡಿಸಿತ್ತು.

    ಈ ಮಧ್ಯೆ ಚಿತ್ರದ ನಿರ್ಮಾಪಕ ರವಿ ಕಶ್ಯಪ್ ರವರು – “ನಮ್ಮ ತಂಡದ ಎಲ್ಲರೂ ತಮ್ಮ ಹೃದಯದಾಳದಿಂದ, ಒಕ್ಕೊರಲಿನಿಂದ ಆರ್ಸಿಬಿ ತಂಡ ಫ಼ಿನಲ್ಸ್ ನಲ್ಲಿ ಜಯಗಳಿಸಲಿ” ಎಂದು ಹಾರೈಸುತ್ತಿದ್ದೇವೆ ಎಂದರು. ಮುಂದುವರೆದು, “ಒಂದು ಉತ್ಸಾಹಿ ಸಿನೆಮಾ ತಂಡವಾಗಿ ನಾವು ಆರ್ಸಿಬಿ ತಂಡದ ಶ್ರಮವನ್ನು ಅರ್ಥ ಮಾಡಿಕೊಂಡು, ಆ ತಂಡವನ್ನು ಪ್ರೋತ್ಸಾಹಿಸುವುದು ಹಾಗೂ ಅದರ ಗೆಲುವಿಗಾಗಿ ಹಾರೈಸುವುದು ಮುಖ್ಯ. ಇಂದಿನ ಫ಼ೈನಲ್ಸ್ ನಲ್ಲಿ ಆರ್ಸಿಬಿ ತಂಡ ಜಯಗಳಿಸಿ ಕಪ್ ತರಲಿ ಎಂಬುದು ನಮ್ಮೆಲ್ಲರ ಆಶಯ” ಎಂದರು.

    ದೈಜಿ ಸಿನೆಮಾವು ಸತ್ಯ ಘಟನೆಯಾಧಾರಿತ ಕಥೆಯಾಗಿದ್ದು, ಚಿತ್ರೀಕರಣ ಭರದಿಂದ ಸಾಗಿದೆ. ದೈಜಿ ಚಿತ್ರದ ನಿರ್ಮಾಣದಲ್ಲಿ ಹಗಲಿರುಳೂ ಶ್ರಮವಹಿಸಿ ತಂಡ ಕೆಲಸ ಮಾಡುತ್ತಿದೆ ಈಗ ಅದರ ಜತೆಗೆ ಸೆಟ್ ನಲ್ಲಿ ಐಪಿಎಲ್ ನ ಸಂಭ್ರಮಾಚರಣೆಯೂ ಜತೆಯಾಗಿದೆ.

    Demo
    Share. Facebook Twitter LinkedIn Email WhatsApp

    Related Posts

    ಹೈಕೋರ್ಟ್‌ ಚಾಟಿಗೆ ಬಗ್ಗದ ದುರಂಕಾರಿ ಕಮಲ್‌ ಹಾಸನ್..ಮತ್ತೆ ಧಿಮಾಕಿನ ಮಾತನಾಡಿದ ತಮಿಳು ನಟ!

    June 4, 2025

    Virat Kohli: RCBಯ ಗೆಲುವಿನ ದಡ ದಾಟಿಸಿದ ನಾಯಕ ರಜತ್ ಪಾಟಿದಾರ್’ಗೆ ಗಿಫ್ಟ್ ಕೊಟ್ಟ ಕೊಹ್ಲಿ..!

    June 4, 2025

    IPL Prize Money: IPL ಟ್ರೋಫಿಗೆ ಮುತ್ತಿಟ್ಟ RCB: ಚಾಂಪಿಯನ್ ಆರ್’ಸಿಬಿಗೆ ಸಿಕ್ಕ ಹಣವೆಷ್ಟು ಗೊತ್ತಾ..?

    June 4, 2025

    ಗೋಲ್ಡ್ ಬೆಲೆಯಲ್ಲಿ ಏರಿಕೆ! ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ನೋಡಿ

    June 4, 2025

    RCB ಕನಸು ನನಸು..ಚಿಕ್ಕ ಮಕ್ಕಳಂತೆ ಕುಣಿದು ಕುಪ್ಪಳಿಸಿದ KGF ಪ್ರಶಾಂತ್‌ ನೀಲ್‌ Video ವೈರಲ್!‌

    June 4, 2025

    ಬೆಂಗಳೂರಿನಲ್ಲಿ ತೆರೆದ ಬಸ್’ನಲ್ಲಿ RCB ವಿಜಯೋತ್ಸವ ಇಲ್ಲ: ಸಚಿವ ಜಿ ಪರಮೇಶ್ವರ್

    June 4, 2025

    RCB ತಂಡಕ್ಕೆ ಸರ್ಕಾರದಿಂದ ಸನ್ಮಾನ ಮಾಡಲು ಸಿದ್ಧತೆ: ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದೇನು..?

    June 4, 2025

    RCB ಗೆದ್ದ ಖುಷಿಯಲ್ಲಿ ಕುಣಿದು ಕುಪ್ಪಳಿಸುತ್ತಿದ್ದ ಅಭಿಮಾನಿ ಹೃದಯಾಘಾತದಿಂದ ಸಾವು..!

    June 4, 2025

    ʼRCBʼ ವಿಜಯಪತಾಕೆ: ಗಳಗಳ ಕಣ್ಣೀರಿಟ್ಟ ವಿಜಯ ಮಲ್ಯ ಪುತ್ರ ಸಿದ್ದಾರ್ಥ್‌ ಮಲ್ಯ! Video ವೈರಲ್!

    June 4, 2025

    ಈ ಸಲ ಕಪ್ ನಮ್ದು: RCB ತಂಡವನ್ನು ಅಭಿನಂದಿಸಿದ ಕೇಂದ್ರ ಸಚಿವ HDK

    June 4, 2025

    IPL 2025: ಇಂದು RCB ತಂಡದಿಂದ ವಿಕ್ಟರಿ ಪರೇಡ್: ಎಲ್ಲಿಂದ, ಎಲ್ಲಿಗೆ? ಟೈಮಿಂಗ್ಸ್ ಏನೂ..? ಇಲ್ಲಿದೆ ಮಾಹಿತಿ

    June 4, 2025

    ಕರ್ನಾಟಕದಲ್ಲಿ ಇಂದಿನಿಂದ ಮಳೆ ಚುರುಕು: ಇಲ್ಲೆಲ್ಲಾ ಯೆಲ್ಲೋ ಅಲರ್ಟ್!

    June 4, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.