ಹುಬ್ಬಳ್ಳಿ: ಸರ್ವಧರ್ಮ ಸಮಾಜ ಸೇವಕರು ಹಾಗೂ ಖ್ಯಾತ ಉದ್ಯಮಿಗಳಾದ ಡಾ.ರಮೇಶ ಮಹಾದೇವಪ್ಪನವರ ಜನ್ಮದಿನದ ಅಂಗವಾಗಿ ಜೂನ್ 4 ರಂದು ರಮೇಶೋತ್ಸವ ಸಂಭ್ರಮ ಹಾಗೂ ಡಿ.ಎಲ್.ಆರ್.ಎಂ.ಜೈ ಹನುಮಾನ್ ಫೌಂಡೇಶನ್ ಉದ್ಘಾಟನೆ ಕಾರ್ಯಕ್ರಮವನ್ನು ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಆಯೋಜಕರಾದ ಅಶೋಕ ವಾಲ್ಮೀಕಿ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಡಾ. ರಮೇಶ ಮಹಾದೇವಪ್ಪನವರ ಗೆಳೆಯರ ಬಳಗದ ವತಿಯಿಂದ ಆರೋಗ್ಯ ಶಿಬಿರ, ರಕ್ತದಾನ ಶಿಬಿರ, ನೇತ್ರದಾನ, ಅಂಗವಿಕರಿಗೆ ಕೃತಕ ಕಾಲು ಜೋಡಣೆ, ಪ್ರತಿಭಾವಂತ ಬಡವಿದ್ಯಾರ್ಥಿಗಳಿಗೆ ಪ್ರೋತ್ಸಾಹ & ಪ್ರತಿಭಾ ಪುರಸ್ಕಾರ,
ಮಾಜಿ ಸೈನಿಕರಿಗೆ ಸನ್ಮಾನ, ಪರಿಸರ ಉಳಿವಿಗಾಗಿ ಸಸಿ ವಿತರಣೆ, ಪೌರಕಾರ್ಮಿಕರಿಗೆ ಸನ್ಮಾನ, ವಿಕಲ ಚೇತನರಿಗೆ ಪ್ರೋತ್ಸಾಹ ಸನ್ಮಾನ, ವೃದ್ದಾಶ್ರಮದವರಿಗೆ ದೈನಂದಿನ ವಸ್ತುಗಳ ಕಿಟ್ ವಿತರಣೆ, ಅಸಂಘಟಿಕ ಕೋರಿಯರ್ ಕಾರ್ಮಿಕರಿಗೆ ರೇನ್ ಕೋರ್ಟ್, ಜಾಕೆಟ್ ವಿತರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಮಹೇಶ ಟೆಂಗಿನಕಾಯಿ ಮಾಡಲಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕಾರ್ಮಿಕ ಸಚಿವರಾದ ಸಂತೋಷ ಲಾಡ್ ಡಿ.ಎಲ್.ಆರ್.ಎಮ್ ಜೈ ಹನುಮಾನ ಫೌಂಡೇಶನ್ (ರಿ) ಉದ್ಘಾಟನೆ ಮಾಡುವರು, ಶಾಸಕ ಪ್ರಸಾದ್ ಅಬ್ಬಯ್ಯ, ಹು-ಧಾ ಮಹಾನಗರ ಪಾಲಿಕೆ ಮೇಯರ್ ರಾಮಣ್ಣ ಬಡಿಗೇರ, ಹು-ಧಾ ಮಹಾನಗರ ಉಪಮೇಯರ್ ದುರ್ಗಮ್ಮ ಬಿಜವಾಡ, ಜಿಲ್ಲಾಧಿಕಾರಿ ದಿವ್ಯಪ್ರಭು, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಪಾಟೀಲ್ ಭುವನೇಶ ದೇವಿದಾಸ್ ಘನ ಉಪಸ್ಥಿತಿ ಇರುವರು ಎಂದು ತಿಳಿಸಿದರು.
ಇನ್ನು ಮುಖ್ಯ ಅತಿಥಿಗಳಾಗಿ ಹು-ಧಾ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಹು-ಧಾ ಅಧ್ಯಕ್ಷ ಶಾಕೀರ್ ಸನದಿ, ಹು-ಧಾ ಮಹಾನಗರ ಪಾಲಿಕೆ ಆರೋಗ್ಯ ವೈದ್ಯಾಧಿಕಾರಿ ಶ್ರೀಧರ್ ದಂಡೆಪ್ಪನವರ, ಶ್ರೀ ಮಂಜುನಾಥೇಶ್ವರ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕರಾದ ದಯಾಶೀಲಾ, ಪ್ರೇಮಬಿಂಧು ರಕ್ತನಿಧಿ ಸಂಸ್ಥಾಪಕರಾದ ವಿ.ಎಂ.ಹಿರೇಮಠ, ಅಶೋಕ ಆಸ್ಪತ್ರೆ ವೈದ್ಯರಾದ ಡ.ಅಶೋಕ ಬಂಗಾರಶೆಟ್ಟರ್,
ಡಾ.ಸೃಷ್ಠಿ ವಾಳದ, ಡಾ.ಅಸುದುಲ್ಲಾ ಕರಿಗಾರ, ಹು-ಧಾ ಮಹಾನಗರ ಪಾಲಿಕೆ ಸದಸ್ಯ ತಿಪ್ಪಣ್ಣ ಮಜ್ಜಗಿ, ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ್ ಸೇರಿದಂತೆ ಇನ್ನಿತರ ಗಣ್ಯಮಾನ್ಯರು ಪಾಲ್ಗೊಳ್ಳಲಿದ್ದಾರೆ. ದಿವ್ಯ ಸಾನಿಧ್ಯವನ್ನು ಹುಬ್ಬಳ್ಳಿಯ ರುದ್ರಾಕ್ಷಿಮಠದ ಬಸವಲಿಂಗ ಮಹಾಸ್ವಾಮಿಗಳು, ಅಣ್ಣಿಗೇರಿಯ ಖಾದರಿಸಾಬ ಸನದನೂ ಭಾಯ, ಶಾಂತಿನಗರ ಪ್ರಾರ್ಥನಾ ಮಂದಿರದ ಫಾದರ್ ಡಾ.ಅಲ್ವಿನ್ ಸುಧೀರ್ ವಹಿಸಲಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ರಾಜು ಕಾಳೆ, ರವಿಚಂದ್ರ ದೊಡ್ಡಿಹಾಳ, ಅಶೋಕ ವಾಲ್ಮೀಕಿ, ಡಿ.ಆರ್.ಅಸುದುಲ್ಲಾ ಕಾರಿಗಾರ್, ಕಾಸಿಂಸಾಬ್ ಕೂಡಲಗಿ, ಚಂದ್ರಶೇಖರ್ ಮಾಡಲಗೇರಿ ಇದ್ದರು.