ಬೆಳಗಾವಿ : ತ್ಯಾಗ ಬಲಿದಾನ ಪ್ರೀತಿ ಭಾವೈಕ್ಯತೆಯ ದ್ಯೋತಕವಾದ ರಂಜಾನ ಹಬ್ಬವನ್ನು ಸಹಸ್ರಾರು ಮುಸ್ಲಿಂ ಬಾಂಧವರು ಅದ್ದೂರಿಯಾಗಿ ಆಚರಿಸಿದರು. ರಾತ್ರಿ ವೇಳೆಯಲ್ಲಿ ಕುಡಚಿಯ ಪ್ರಮುಖ ಬಿದಿಯುದ್ಧಕ್ಕೂ ವಿದ್ಯುತ್ ದೀಪದ ಅಲಂಕಾರ ನೋಡುಗರ ಮನಸೆಳೆದಿತ್ತು.
ಬೆಳಗ್ಗೆ 9 ಗಂಟೆಗೆ ಪಟ್ಟಣದ ಈದ್ಗ ಮೈದಾನದಲ್ಲಿ ನೆರೆದ ನೂರಾರು ಮಂದಿ ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಸೇರಿದಂತೆ ಅನೇಕರು ಶುಭಾಶಯಗಳು ಕೋರಿದರು. ಇದೆ ಸಂದರ್ಭದಲ್ಲಿ SDPI ಸಂಘಟನೆಯ ಕಾರ್ಯಕರ್ತರು ಮುಸ್ಲಿಂ ರ ಮೇಲೆ ಆಗುತ್ತಿರುವ ದಬ್ಬಾಳಿಕೆ ಹಾಗೂ ಅನಾಚಾರದ ಕುರಿತಾದ ಬಿತ್ತಿಪತ್ರಗಳನ್ನು ಹಿಡಿದು ಜಾಗೃತಿ ಮೂಡಿಸಿದರು.
ರಂಜಾನ್ ಸಂಭ್ರಮ: ಚಿತ್ರದುರ್ಗದ ಈದ್ಗಾ ಮೈಧಾನದಲ್ಲಿ ಸಾಮೂಹಿಕ ಪ್ರಾರ್ಥನೆ!
ಈ ಸಂದರ್ಭದಲ್ಲಿ ಕೈ ಶಾಸಕ, ಪುರಸಭೆ ಅಧ್ಯಕ್ಷ ಹಾಗೂ ಸದಸ್ಯರು ಪೊಲೀಸ್ ಇಲಾಖೆ ಸೇರಿದಂತೆ ನಾನಾ ಇಲಾಖೆಯ ಅಧಿಕಾರಿಗಳು ಹಾಗೂ ಹಿರಿಯರು ಉಪಸ್ಥಿತರಿದ್ದರು.