ರಾಯಚೂರು: ಆರ್ಸಿಬಿ ಐಪಿಎಲ್ ಟ್ರೋಫಿ ಗೆದ್ದ ಸಂಭ್ರಮದಲ್ಲಿ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಕಾಲ್ತುಳಿತ ಸಂಭವಿಸಿ 11 ಮಂದಿ ಸಾವನ್ನಪ್ಪಿ, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. 2-3 ಲಕ್ಷ ಜನರ ದಟ್ಟಣೆಯಿಂದ ಈ ದುರಂತ ಸಂಭವಿಸಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಪ್ರದೀಪ್ ಈಶ್ವರ್ ಪ್ರತಿಕ್ರಿಯಿಸಿದ್ದಾರೆ.
ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ. ಸರ್ಕಾರ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.
ನಿತ್ಯ ಮೊಸರಿಗೆ ಈ ಪುಡಿ ಬೆರೆಸಿ ತಿಂದ್ರೆ ವಾರದಲ್ಲೇ ಕರಗುತ್ತೆ ಬೊಜ್ಜು! ನೀವು ಒಮ್ಮೆ ಟ್ರೈ ಮಾಡಿ!
ರಾಜ್ಯದ ಜನರು ಆರ್ಸಿಬಿ ತಂಡವನ್ನು ಸ್ವಾಗತಿಸುವ ಸಂಭ್ರಮದಲ್ಲಿ ಇದ್ದರು. ಈ ಹಿನ್ನೆಲೆ ಸರ್ಕಾರ ಮುನ್ನೆಚ್ಚರಿಕೆ ವಹಿಸಿದ್ದರೂ ಲಕ್ಷಾಂತರ ಅಭಿಮಾನಿಗಳು ಬಂದಿದ್ದರಿಂದ ಎಡವಟ್ಟಾಗಿದೆ. ಸರ್ಕಾರವನ್ನೋ, ಪೊಲೀಸರನ್ನೋ ತಪ್ಪಿಸ್ಥರನ್ನಾಗಿ ಮಾಡುವುದಲ್ಲ. ಘಟನೆ ಆಗಿದೆ, ಕುಟುಂಬಕ್ಕೆ ನೋವು ಭರಿಸುವ ಶಕ್ತಿಯನ್ನು ಆ ಭಗವಂತ ನೀಡಲಿ ಎಂದು ಹೇಳಿದರು.
ಇನ್ನೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಕ್ಕಳ ತರ ವರ್ತನೆ ಮಾಡುತ್ತಾರೆ ಎನ್ನುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, “ಕಾಲ್ತುಳಿತ ಘಟನೆ ಸೂಕ್ಷ್ಮವಾಗಿದೆ. ಎಲ್ಲರೂ ಶೋಕಸಾಗರದಲ್ಲಿ ಇರುವುದರಿಂದ ಈ ಬಗ್ಗೆ ಪ್ರತಿಕ್ರಿಯಿಸಲ್ಲ.
ಸಿಎಂ, ಡಿಸಿಎಂ ಎಲ್ಲ ಜಾಗೃತೆಯಿಂದ ಹ್ಯಾಂಡಲ್ ಮಾಡಿದ್ದಾರೆ. ಸದ್ಯ ಘಟನೆಯಲ್ಲಿ ಮೃತರಿಗೆ 10 ಲಕ್ಷ ಪರಿಹಾರ ಘೋಷಿಸಿದ್ದೇವೆ. ಗಾಯಾಳುಗಳಿಗೆ ಚಿಕಿತ್ಸೆ, ಶಸ್ತ್ರ ಚಿಕಿತ್ಸೆ ಕೊಡಿಸಲಾಗುತ್ತದೆ. ಸಿಎಂ, ಡಿಸಿಎಂ ಘಟನೆಯಿಂದ ಬೇಜಾರಾಗಿದ್ದಾರೆ.
ಚಿಂತಾಮಣಿ ಹುಡುಗ ಡೆಂಟಲ್ ಓದುತ್ತಿದ್ದವ ಮೃತಪಟ್ಟಿದ್ದಾರೆ. ಪೋನ್ ಮಾಡಿ ಮಾಡತನಾಡಿದ್ದೇವೆ. ಹಾಗೇ, ಬಿಜೆಪಿಯವರಿ ಮೃತರಿಗೆ ಹೆಚ್ಚುವರಿ ಪರಿಹಾರಕ್ಕೆ ಪಟ್ಟು ಹಿಡಿಯ ಬೇಕಿಲ್ಲ. ಹೆಚ್ಚುವರಿ ಬೇಕಿದ್ದರೆ ನಮ್ಮ ಸಿಎಂ, ಡಿಸಿಎಂ ಕೊಡುತ್ತಾರೆ. ಕೂತು ಸರ್ಕಾರಕ್ಕೆ ತಿಳಿಸಿ 5-10 ಲಕ್ಷ ಕೊಡಿಸೋಣ ಎಂದು ತಿಳಿಸಿದರು..