Close Menu
Ain Live News
    Facebook X (Twitter) Instagram YouTube
    Sunday, June 1
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಆಧುನಿಕ ಗುರುಕುಲ ಶಿಕ್ಷಣ ಆರಂಭಿಸಲು ರೆಡಿ: ಪ್ರೊ. ನಾಗೇಶ ಬೆಟಕೋಟಿ

    By Author AINMay 31, 2025
    Share
    Facebook Twitter LinkedIn Pinterest Email
    Demo

    ಹುಬ್ಬಳ್ಳಿ: ಮುಂದಿನ ಶೈಕ್ಷಣಿಕ ವರ್ಷ (2026-27)ದಿಂದ ಹುಬ್ಬಳ್ಳಿ ಉಣಕಲ್ ನಲ್ಲಿರುವ ಗುರುಕುಲದಲ್ಲಿ ಆಧುನಿಕ ಗುರುಕುಲ ಶಿಕ್ಷಣ ಆರಂಭಿಸಲು ನಾವು ಸಿದ್ಧರಿದ್ದೇವೆ. ಅದಕ್ಕೆ ತಕ್ಕಂತೆ ಪಠ್ಯಕ್ರಮವನ್ನು ರೆಡಿ ಇಟ್ಟಿದ್ದೇವೆ ಎಂದು ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ನಾಗೇಶ ಬೆಟಕೋಟಿ ಹೇಳಿದರು.

    ಕಿತ್ತಳೆ ಹಣ್ಣಿನ ಸಿಪ್ಪೆ ಎಸೆಯದಿರಿ: ಕಹಿಯಾದ್ರೂ ಇದರ ರಸದಲ್ಲಿ ಅಡಗಿದೆ ಆರೋಗ್ಯ ಸಿಹಿ!

    ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2023ರಲ್ಲಿ ರಾಜ್ಯ ಸರ್ಕಾರ, ಹುಬ್ಬಳ್ಳಿಯ ಗಂಗೂಬಾಯಿ ಹಾನಗಲ್ ಗುರುಕುಲವನ್ನು ನಮಗೆ ವಹಿಸಿದೆ. 2024-25ರಲ್ಲಿ ಶೈಕ್ಷಣಿಕ ಚಟುವಟಿಕೆ ಆರಂಭಿಸಿದ್ದೇವೆ. ಪುನಃ ಗುರುಕುಲ ಪದ್ಧತಿಯಲ್ಲಿ ಶಿಕ್ಷಣ ಪಡೆಯುವ ಬಗ್ಗೆ ಜನರು ಆಸಕ್ತಿ ತೋರಬೇಕಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿ ಜನಾಭಿಪ್ರಾಯ ಸಂಗ್ರಹಿಸಲಾಗುವುದು. ಅದಕ್ಕೂ ಪೂರ್ವ ವಿಶ್ವವಿದ್ಯಾಲಯದ ಸಿಂಡಿಕೇಟ್ ಹಾಗೂ ಅಕಾಡೆಮಿಕ್ ಕೌನ್ಸಿಲ್ ಸಭೆ ಕರೆದು ಒಪ್ಪಿಗೆ ಪಡೆಯಬೇಕಾಗುತ್ತದೆ ಎಂದರು.

    ಹುಬ್ಬಳ್ಳಿ ಗುರುಕುಲವು ವಿವಿಯ ಪ್ರಾದೇಶಿಕ ಕೇಂದ್ರವಾಗಿದೆ. ಸದ್ಯ ಹುಬ್ಬಳ್ಳಿ ಗುರುಕುಲದಲ್ಲಿ ವಿವಿ ಯಿಂದ ನಾಟಕದಲ್ಲಿ ಎಂಎ, ಡಿಪ್ಲೊಮಾ, ಹಿಂದೂಸ್ಥಾನಿ ಸಂಗೀತದಲ್ಲಿ ಸರ್ಟಿಫಿಕೇಟ್‌ ಕೋರ್ಸ್ ಗಳನ್ನು ನಡೆಸುತ್ತಿದ್ದೇವೆ. ಒಟ್ಟು 32 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಗುರುಕುಲ ಇದ್ದಾಗ ರಾಜ್ಯ ಸರ್ಕಾಪ ಹಣ ನೀಡುತ್ತಿತ್ತು. ಈಗ ವಿಶ್ವವಿದ್ಯಾಲಯದ ಹಣದಲ್ಲಿಯೇ ಗುರುಕುಲವನ್ನು ಮುನ್ನೆಡೆಸಿಕೊಂಡು ಹೋಗುತ್ತಿದ್ದೇವೆ ಎಂದು ಹೇಳಿದರು.

    ವಿವಿಧ ಕೋರ್ಸ್‌ಗಳಿಗೆ ಪ್ರವೇಶ
    ವಿಶ್ವವಿದ್ಯಾಲಯವು 2025-26ನೇ ಸಾಲಿಗೆ ವಿವಿಧ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಅರ್ಜಿ ಆಹ್ವಾನಿಸಿದೆ. ಮೂರು ವರ್ಷಗಳ ಬಿಪಿಎ, ಎಂಪಿಎ, ಡಿ.ಲಿಟ್, 6 ತಿಂಗಳ ಸರ್ಟಿಫಿಕೇಟ್ ಕೋರ್ಸ್, 1 ವರ್ಷದ ಡಿಪ್ಲೊಮಾ, 1 ವರ್ಷದ ಪಿ.ಜಿ. ಡಿಪ್ಲೊಮಾ ಕೋರ್ಸ್‌ಗಳಿಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. 2024-25ರಲ್ಲಿ 31 ಬಿಪಿಎ, 64 ಎಂಪಿಎ, 108 ಡಿ.ಲಿಟ್ ಸೇರಿ 616 ವಿದ್ಯಾರ್ಥಿಗಳು ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿದ್ದಾರೆ. 76 ಸಂಸ್ಥೆಗಳು ವಿವಿಯೊಂದಿಗೆ ಒಡಂಬಡಿಕೆ ಮಾಡಿಕೊಂಡಿವೆ ಎಂದರು.

    ಎಲ್ಲ ವಿವಿ ಗಳಂತೆ ನಮಗೂ ಬೋಧಕ ಸಿಬ್ಬಂದಿಯ ಕೊರತೆ ಇದೆ. ರಾಜ್ಯಾದ್ಯಂತ 22 ಪರೀಕ್ಷಾ ಕೇಂದ್ರಗಳಲ್ಲಿ ಶಾಸ್ತ್ರ ಪತ್ರಿಕೆ ಪರೀಕ್ಷೆಗಳನ್ನು ಮೇ 11ರಂದು ನಡೆಸಲಾಗಿದೆ. ಪ್ರಾಯೋಗಿಕ ಪರೀಕ್ಷೆಗಳು ಮೇ 13ರಿಂದ ಆರಂಭಗೊಂಡಿದ್ದು, ಜೂನ್ 8ಕ್ಕೆ ಕೊನೆಗೊಳ್ಳಲಿದೆ. ಮೌಲ್ಯಮಾಪನ ಕಾರ್ಯ ಆರಂಭಗೊಂಡಿದ್ದು, ಜುಲೈ ತಿಂಗಳಲ್ಲಿ ಫಲಿತಾಂಶ ಪ್ರಕಟಿಸಲಾಗುವುದು ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಕುಲಸಚಿವ (ಮೌಲ್ಯಮಾಪನ) ಎಂ.ಜಿ. ಮಂಜುನಾಥ ಇದ್ದರು.

    Demo
    Share. Facebook Twitter LinkedIn Email WhatsApp

    Related Posts

    ಪರಮೇಶ್ವರ್ ರಾಜೀನಾಮೆ ನೀಡಬೇಕಾದ ಅಗತ್ಯವಿಲ್ಲ: ಗೃಹ ಸಚಿವ ಪರಮೇಶ್ವರ್ ಪರ ಸೋಮಣ್ಣ ಬ್ಯಾಟಿಂಗ್!

    June 1, 2025

    ಚಿನ್ನದ ಗಣಿಯಲ್ಲಿ ಓರ್ವ ಕಾರ್ಮಿಕ ಬಲಿ, ಮತ್ತೋರ್ವನಿಗೆ ಮಾರಣಾಂತಿಕ ಗಾಯ!

    June 1, 2025

    ಕಳ್ಳರ ಕರಾಮತ್ತು: ಕಾರಿನ ಗ್ಲಾಸ್ ಒಡೆದು 11.5 ಲಕ್ಷ ರೂ. ನಗದು ದೋಚಿ ಎಸ್ಕೇಪ್.. ದೂರು ದಾಖಲು!

    June 1, 2025

    ನಾನು ಕಮಲ್ ಹಾಸನ್ ದೊಡ್ಡ ಫ್ಯಾನ್, ಆದರೆ ಕಮಲ್ ಹಾಸನ್ ಕ್ಷಮೆ ಕೇಳಬೇಕು- ರಚಿತಾ ರಾಮ್!

    June 1, 2025

    ಹಳೇ ದ್ವೇಷ.. ಆಸ್ತಿ ವಿಚಾರ: ನಡುರಸ್ತೆಯಲ್ಲೇ ವ್ಯಕ್ತಿಯ ಬರ್ಬರ ಕೊಲೆ!

    June 1, 2025

    ಗ್ಯಾಂಗ್ ರೇಪ್: ಬಾಲಕಿ ಪುಸಲಾಯಿಸಿ 6 ಮಂದಿಯಿಂದ ಕೃತ್ಯ.. ಇಬ್ಬರು ಅರೆಸ್ಟ್!

    June 1, 2025

    ರಿಯಲ್ ಸ್ಟಾರ್ಸ್ ಅವಾರ್ಡ್ಸ್-2025: ಶಿಕ್ಷಣ ಪ್ರೇಮಿ ಕೃಷ್ಣಗೌಡ ವಿ.ಹುಲಕೋಟಿಗೆ ಪ್ರಶಸ್ತಿ ಪ್ರದಾನ!

    June 1, 2025

    ಹುಬ್ಬಳ್ಳಿ : 11 ತಿಂಗಳ ಮಗುವಿಗೆ ಕೋವಿಡ್ ದೃಡ; ಆರೋಗ್ಯ ಸ್ಥಿರ!

    June 1, 2025

    ಆ ಕಮಲ್ ಹಾಸನ್ ಕ್ಷಮೆ ಕೇಳಲೇಬೇಕು, ಅಲ್ಲಿಯವರೆಗೂ ಬಿಡಲ್ಲ: ಶಿವರಾಜ್ ತಂಗಡಗಿ!

    May 31, 2025

    ಕಾಂಗ್ರೆಸ್ ಪುಢಾರಿಗಳ ಕುಮ್ಮಕ್ಕಿನಿಂದ ಹಿಂದೂ ಕಾರ್ಯಕರ್ತರ ಬಂಧನ – ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ

    May 31, 2025

    ಕ್ಷಮೆ ಕೇಳಿದ್ರೆ ನಿಮ್ಮ ತಾತನ ಮನೆ ಗಂಟು ಹೋಗಲ್ಲ: ಕಮಲ್ ಹಾಸನ್ ಗೆ ವಿ ಸೋಮಣ್ಣ ಟಾಂಗ್!

    May 31, 2025

    ಜನೌಷಧಿ ಕೇಂದ್ರ ಬಂದ್: ‘ಕೈ’ ಸರ್ಕಾರದ ವಿರುದ್ಧ ಬಿಜೆಪಿ ಪ್ರೊಟೆಸ್ಟ್!

    May 31, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.