ಹುಬ್ಬಳ್ಳಿ: ಕನ್ನಡಿಗರ ಮೆಚ್ಚಿನ ಜೀ ಕನ್ನಡ ವಾಹಿನಿಯು ರಾಜ್ಯದ ವಿವಿಧ ಕ್ಷೇತ್ರಗಳ ಗಣ್ಯರನ್ನು ಗುರ್ತಿಸಿ ರಿಯಲ್ ಸ್ಟಾರ್ಸ್ ಅವಾರ್ಡ್ಸ್-2025 ರನ್ನ ಹುಬ್ಬಳ್ಳಿಯ ಪ್ರಗತಿಪರ ರೈತರು, ಸಾವಯವ ಕೃಷಿ ಸಾಧಕರು ಹಾಗೂ ಶಿಕ್ಷಣ ಪ್ರೇಮಿಗಳಾದ ಕೃಷ್ಣಗೌಡ ವಿ.ಹುಲಕೋಟಿ ಅವರಿಗೆ ಪ್ರದಾನ ಮಾಡಲಾಯಿತು.
ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ ರಿಯಲ್ ಸ್ಟಾರ್ಸ್ ಸಾಧಕರ ಸೇವೆ ಕೊಂಡಾಡಿದರು. ಈ ಸಂದರ್ಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಪ್ರತಿಕ್ರಿಯೆ ನೀಡಿದ ಕೃಷ್ಣಗೌಡ ಹುಲಕೋಟಿ ಅವರು ಜೀ ಕನ್ನಡ ನ್ಯೂಸ್ ವಾಹಿನಿಯ ಜನಪರ ಕಾಳಜಿ, ರೈತಪರ ಕಾಳಜಿ ಮೆಚ್ಚುಗೆಗೆ ಪಾತ್ರವಾಗಿದೆ. ನನ್ನ ಸೇವೆ ಗುರುತಿಸಿ ಹರಿಸಿದ್ದಾರೆ. ಇನ್ನಷ್ಟು ಜವಾಬ್ದಾರಿ ಹೆಚ್ಚಾಗಿದೆ ಎಂದರು. ಸಚಿವ ಶಿವರಾಜ್ ತಂಗಡಗಿ, ಮಾಜಿ ಸಚಿವ ಅಶ್ವಥನಾರಾಯಾಣ, ನಟಿ ತಾರಾ, ನಟ ಶಿವರಾಜ್ ಕುಮಾರ್ ,ಗೀತಾ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರು ಭಾಗವಹಿಸಿದ್ದರು.