ಪ್ರಕೃತಿಯನ್ನು ಉಳಿಸುವ ವಿಷಯ ಭೂಮಿಗೆ ಸೀಮಿತವಾಗಿಲ್ಲ, ಬಾಹ್ಯಾಕಾಶದ ಬಗ್ಗೆ ಕಾಳಜಿಯೂ ಹೆಚ್ಚುತ್ತಿದೆ. ಹದಗೆಡುತ್ತಿರುವ ಪರಿಸ್ಥಿತಿಯ ಬಗ್ಗೆ ಭಾರತವೂ ಕಣ್ಣುಮುಚ್ಚಿ ನೋಡುವಂತಿಲ್ಲ.
ಹುಷಾರ್ ಜನರೇ: ಕಲರ್ ಬೆರೆಸಿದ ಬೆಲ್ಲ ಮಾರುಕಟ್ಟೆಗೆ ಬರುತ್ತಿದೆ! ಇದು ಕಿಡ್ನಿಗೆ ಹಾನಿ!
ಆರಂಭದಲ್ಲಿ ಇದು ಕೇವಲ ಕ್ಯೂರಿಯಾಸಿಟಿ, ಆದರೆ ಈಗ ನಾವು ಚಂದ್ರ ಮತ್ತು ಮಂಗಳವನ್ನು ನೋಡುತ್ತಿರುವ ರೀತಿಯಲ್ಲಿ ಅದು ಕ್ಯೂರಿಯಾಸಿಟಿಗಿಂತ ಮುಂದಿದೆ. ಭೂಮಿಯ ಮೇಲೆ ಶೋಷಣೆಗೆ ಒಳಗಾದ ಸಂಪನ್ಮೂಲಗಳ ಮೇಲೆ ನಮ್ಮ ಕಣ್ಣುಗಳು ನೇರವಾಗಿವೆ. ದುರಾಸೆಯಿಂದಾಗಿ ಮನುಷ್ಯನು ಒಂದು ಕಡೆ ಸಮುದ್ರವನ್ನು ನುಸುಳಲು ಪ್ರಾರಂಭಿಸಿದನು, ಮತ್ತೊಂದೆಡೆ ಅವನ ಕಣ್ಣುಗಳು ಆಕಾಶದತ್ತ ನೆಟ್ಟಿದ್ದವು. ಆರಂಭಿಕ ಹಂತದಲ್ಲಿ, ನಾವು ಬಾಹ್ಯಾಕಾಶ ನೌಕೆಯನ್ನು ಕಳುಹಿಸಿದ್ದೇವೆ, ಇದರಿಂದ ನಾವು ಇತರ ಗ್ರಹಗಳನ್ನು ಅರ್ಥಮಾಡಿಕೊಳ್ಳಬಹುದು. ನಂತರ ನಾವು ಚಂದ್ರನ ಮೇಲೆ ಹಂತಗಳನ್ನು ಹಾಕುತ್ತೇವೆ ಮತ್ತು ಮಂಗಳಕ್ಕೆ ಹೋಗಲು ಪ್ರಯತ್ನಿಸುತ್ತಿದ್ದೇವೆ.
ಇದೀಗ ಬಾಹ್ಯಾಕಾಶದಲ್ಲಿ ಸಿಲುಕಿರುವ ಸುನೀತಾ ಅವರು ಭೂಮಿಗೆ ಶೀಘ್ರವೇ ಬರಲಿದ್ದಾರೆ. ಆದರೆ ಬಾಹ್ಯಾಕಾಶದಿಂದ ಭೂಮಿಗೆ ಮರಳೋದು ಸುಲಭದ ಮಾತಲ್ಲ.
ಬಾಹ್ಯಕಾಶದಿಂದ ಸುನೀತಾರನ್ನ ಕರೆತರೋದನ್ನ ಮೂರು ಹಂತದ ಭರ್ಜರಿ ತಯಾರಿಗಳನ್ನ ಮಾಡಲಾಗಿದೆ. ಅದರಲ್ಲಿ ಮೋಸ್ಟ್ ಇಂಪಾರ್ಟೆಂಟ್ ಅಂದ್ರೆ ಗ್ರೌಂಡ್ ಪ್ರಿಪೇರಷನ್. ಅಂದ್ರೆ, ಸುನೀತಾ ಭೂಮಿಗೆ ಬಂದ ಮೇಲೆ ಹೇಗೆ ಅವರನ್ನ ರಿಸೀವ್ ಮಾಡ್ಬೇಕು? ಟೈಮಿಂಗ್. ವಾತವರಣ ಎಲ್ಲವೂ ಮುಖ್ಯವಾಗಿರುತ್ತೆ. ಎರಡನೇ ವಿಚಾರ, ಸ್ಪೇಸ್ ಸ್ಟೇಷನ್ನಲ್ಲಿ ಹೊರಡುವ ಮುಂಚೆ ಮಾಡ್ಬೇಕಾದ ತಯಾರಿ.
ಈಗಾಗಲೇ ಕ್ರ್ಯೂ 9 ಭೂಮಿಯತ್ತ ಬರ್ತಿದೆ. ಆದ್ರೆ, ಕರೆಕ್ಟ್ ಆಗಿ ಕ್ಯಾಪ್ಸುಲ್ ಸಮುದ್ರದಲ್ಲಿ ಸ್ಪ್ಲ್ಯಾಶ್ಡೌನ್ ಆಗ್ಬೇಕು ಅಂದ್ರೆ ಅಲ್ಲೂ ಕೂಡ 7 ವಿಚಾರಗಳು ತುಂಬಾನೇ ಇಂಪಾರ್ಟೆಂಟ್. ಗಲ್ಫ್ ಆಫ್ ಮೆಕ್ಸಿಕೋ ಮತ್ತು ಅಟ್ಲಾಂಟಿಕ್ ಮೆಕ್ಸಿಕೋ ಈ ಎರಡರಲ್ಲಿ 35 ಕಿಲೋಮೀಟರ್ ಅಂತರದಲ್ಲಿರೋ 7 ಕೇಂದ್ರಗಳಲ್ಲಿ ಒಂದು ಪಾಯಿಂಟ್ನಲ್ಲಿ ಕ್ಯಾಪ್ಸುಲ್ ಸ್ಪ್ಲ್ಯಾಶ್ಡೌನ್ ಆಗುತ್ತೆ. ಆದ್ರೆ ಅದು ಸುಲಭದ ಕೆಲಸವಲ್ಲ. ಇನ್ನೇನು ಬಾಹ್ಯಾಕಾಶದಿಂದ ಬರುವ ಕ್ಯಾಪ್ಸುಲ್ ಸಮುದ್ರಕ್ಕೆ ಸ್ಪರ್ಶ ಆಗುತ್ತೆ ಅನ್ನೋವಾಗ ಇಷ್ಟೆಲ್ಲಾ ತಯಾರಿಗಳನ್ನ ಮಾಡ್ಬೇಕು. ಕೊನೆಯ ಆರು ಗಂಟೆಯಲ್ಲಿ ಎರಡು ಪಾಯಿಂಟ್ಗಳನ್ನ ಫಿಕ್ಸ್ ಮಾಡಿ ಇದಾದ ಮೇಲೆ ಕೊನೆಗೆ ಅವೆರಡರಲ್ಲಿ ಯಾವುದು ಬೆಸ್ಟ್ ಅನ್ಸುತ್ತೋ, ಅದನ್ನ ಸೆಲೆಕ್ಟ್ ಮಾಡಿ ಕ್ಯಾಪ್ಸುಲ್ ಪಾದಸ್ಪರ್ಶ ಮಾಡುತ್ತೆ. ಈಗಾಗಲೇ ಎರಡು ಪಾಯಿಂಟ್ಗಳು ಫಿಕ್ಸ್ ಆಗಿದೆ. ಇದಾದ ಮೇಲೆ ಅನ್ಡಾಕಿಂಗ್ ಪ್ರೊಸೆಸ್ ಶುರುವಾಗಿ ಗಗನಯಾತ್ರಿಗಳನ್ನ ಹೊತ್ತ ಕ್ಯಾಪ್ಸುಲ್ ಭೂಮಿಯತ್ತ ಬರ್ತಿದೆ.
ಸ್ಲ್ಯಾಶ್ ಡೌನ್ ಅಥವಾ ಸಮುದ್ರ ಪಾದಸ್ಪರ್ಶ ಮಾಡೋದಕ್ಕಿಂತ ಮೊದಲು ಎರಡು ಶಿಪ್ಗಳನ್ನ ರೆಡಿ ಇಟ್ಟಿರಲಾಗುತ್ತೆ. ಏನಿಲ್ಲ.. ಡಾಕ್ಟರ್ಸ್ ಸೈಂಟಿಂಸ್ಟ್ ಸೇರಿ 500ಕ್ಕೂ ಹೆಚ್ಚು ಜನ ಎಸ್ಕಾರ್ಟ್ಗಳು ಸಿದ್ಧತೆ ಮಾಡಿಕೊಂಡಿರ್ತಾರೆ. ಗಗನಯಾತ್ರಿಗಳನ್ನ ಹೊತ್ತೊಯ್ಯೋದಕ್ಕೆ ಸಿದ್ಧವಿರೋ ಶಿಪ್ಗಳ ರೆಡಾರ್ ಸೇರಿ ಸುಮಾರು ನಾಲ್ಕು ಹಂತದ ಬ್ಯಾಕಪ್ಗಳನ್ನ ಇಟ್ಟಿರಲಾಗುತ್ತೆ. ಇದಷ್ಟೇ ಅಲ್ಲದೇ ಸಮುದ್ರದ ಮೇಲೆ ಹೆಲಿಕಾಫ್ಟರ್ ಕೂಡ ಹಾರಾಡ್ತಿರುತ್ತೆ. ಯಾಕಂದ್ರೆ, ಗಗನಯಾತ್ರಿಗಳ ಆರೋಗ್ಯದ ಸ್ಥಿತಿ ನೋಡಿ ಕೂಡಲೇ ಏರ್ಲಿಫ್ಟ್ ಮಾಡೋಕೆ ಈ ತಯಾರಿಗಳನ್ನ ಮಾಡಿಕೊಂಡಿರಲಾಗುತ್ತೆ.
ಬಾಹ್ಯಕಾಶದಿಂದ ಭೂಮಿಗೆ ಈ 17 ಗಂಟೆಗಳ ಪ್ರಯಾಣದಲ್ಲಿ ಕೊನೆಯ 1 ಗಂಟೆಯೇ ನಿಜಕ್ಕೂ ಸವಾಲು. ಈ ಒಂದು ಗಂಟೆಯಲ್ಲಿ ಕೊನೆಯ 15 ನಿಮಿಷ ಸಾವು ಬದುಕಿನ ಹೋರಾಟವೇ ಸರಿ. ಯಾಕಂದ್ರೆ ಈ 15 ನಿಮಿಷದಲ್ಲಿ ಕ್ಯಾಪ್ಸುಲ್ ಸಮುದ್ರಕ್ಕೆ ಸ್ಮ್ಯಾಶ್ಡೌನ್ ಆಗ್ಬೇಕು. ಒಂದು ವೇಳೆ 15 ನಿಮಿಷದಲ್ಲಿ ಒಂದು ನಿಮಿಷವೂ ಹೆಚ್ಚು ಕಮ್ಮಿಯಾದ್ರೆ ಕಂಟಕ ಕಟ್ಟಿಟ್ಟ ಬುತ್ತಿಯೇ ಸರಿ. ಕೊನೆಯ 56 ನಿಮಿಷ. ಇದೇ 56 ನಿಮಿಷದಲ್ಲಿ ಡ್ಯ್ರಾಗನ್ ಕ್ಯಾಪ್ಸುಲ್ ಭೂಮಿಯ ವಾತಾವರಣಕ್ಕೆ ಎಂಟ್ರಿಯಾಗ್ಬೇಕು.
ಈ ಟೈಮ್ನಲ್ಲಿ ವಾತಾವರಣ ಕೂಡ ಕ್ಯಾಪ್ಸುಲ್ಗೆ ಸಹಕಾರಿಯಾಗಿರಬೇಕು. 28 ಸಾವಿರ ಕಿಲೋ ಮೀಟರ್ ವೇಗದಲ್ಲಿರೋ ಕ್ಯಾಪ್ಸುಲ್ ವೇಗವನ್ನ ಫೈನ್ ಬ್ರೇಕಿಂಗ್ ಅನ್ನುವುದರ ಮೂಲಕ ಜಸ್ಟ್ 6 ಸಾವಿರ ಕಿಲೋ ಮೀಟರ್ಗೆ ಇಳಿಸಬೇಕು. ಈ 17 ಗಂಟೆಯ ಪ್ರಯಾಣದಲ್ಲಿ ಅತ್ಯಂತ ಚಾಲೆಂಜಿಂಗ್ ಕೆಲಸ ಅಂದ್ರೆ ಇದೇ ನೋಡಿ. ಬೆಚ್ಚಿ ಬೀಳಿಸೋ ವಿಚಾರ ಏನಂದ್ರೆ, ಕ್ಯಾಪ್ಸುಲ್ ಭೂಮಿಗೆ ಎಂಟ್ರಿಯಾಗುವ ಹೊತ್ತಲ್ಲಿ ತಾಪಮಾನ 2 ಸಾವಿರದಿಂದ 3 ಸಾವಿರ ಡಿಗ್ರಿ ಇರುತ್ತೆ. ಈ ಟೈಮ್ನಲ್ಲಿ ಮಾಡ್ಯುಲ್ ಸುಟ್ಟು ಭಸ್ಮವಾಗುವ ಸಾಧ್ಯತೆಗಳೇ ದಟ್ಟವಾಗಿರುತ್ತೆ. ಹೀಗಾಗಿ, ಕ್ಯಾಪ್ಸುಲ್ಗೆ ಹೀಟ್ ಶೀಲ್ಡ್ ಅಂದ್ರೆ ರಕ್ಷಣಾ ಕವಚಗಳನ್ನ ಆ್ಯಕ್ಟೀವ್ ಮಾಡ್ತಾರೆ. ಇದಾದ ಮೇಲೆ ಕೊನೆಯ 15 ನಿಮಿಷದಲ್ಲಿ ಸ್ಪೀಡ್ನ್ನ ಕಂಟ್ರೋಲ್ ಮಾಡಿ ಇನ್ನೇನು ಸಮುದ್ರಕ್ಕೆ ಇಳಿಯೋದಕ್ಕೆ ನಾಲ್ಕು ನಿಮಿಷ ಇರೋವಾಗ ಪ್ಯಾರಚೂಟ್ಗಳನ್ನ ಓಪನ್ ಮಾಡಲಾಗುತ್ತೆ.
ಈ ಟೈಮ್ನಲ್ಲಿ ಕ್ಯಾಪ್ಸುಲ್ 560 ಕಿಲೋಮೀಟರ್ ವೇಗದಲ್ಲಿರುತ್ತೆ. ಕೊನೆಗೆ ಗಂಟೆಗೆ ಆರು ಕೀಲೋಮೀಟರ್ ವೇಗದಲ್ಲಿ ಬಂದು ಕ್ಯಾಪ್ಸುಲ್ ಸಮುದ್ರದಲ್ಲಿ ಸ್ಪ್ಲ್ಯಾಶ್ ಡೌನ್ ಮಾಡ್ಲಾಗುತ್ತೆ.
ಡ್ರ್ಯಾಗನ್ ಕ್ಯಾಪ್ಸುಲ್ ಸಮುದ್ರಕ್ಕೆ ಇಳೀತಾ ಇದ್ದಂತೆ ಮುಂಚೆಯೇ ರೆಡಿಯಿದ್ದ ನೌಕಾಪಡೆ ಕ್ಯಾಪ್ಸುಲ್ನ್ನ ಶಿಪ್ಗೆ ತಗೊಂಡು ಬಂದು ಕ್ಯಾಪ್ಸುಲ್ನ ಬಾಗಿಲನ್ನ ಓಪನ್ ಮಾಡಿ ಗಗನಯಾತ್ರಿಗಳನ್ನ ಹೊರಗೆ ಕರ್ಕೊಂಡು ಬರ್ತಾರೆ. ಇದಿಷ್ಷು ಅಂತರಿಕ್ಷದಿಂದ ಭೂಮಿಗೆ ಬಂದಿಳಿಯುವಾಗ ಎದುರಾಗುವ ಸವಾಲುಗಳಾದ್ರೆ, ಭೂಮಿಗೆ ಬಂದು ಇಳಿದ್ಮೇಲೂ ಸುನೀತಾ ವಿಲಿಯಮ್ಸ್ಗೆ ಹತ್ತಾರು ಚಾಲೆಂಜ್ಗಳು ಎದುರಾಗುತ್ತವೆ.