ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಪಟ್ಟಣದ ಸರ್ವೇ ನಂಬರ್ 237 ರಲ್ಲಿ 33 ಎಕರೆ ಸರಕಾರಿ ಜಮೀನು ಇರುತ್ತದೆ. ಇದರಲ್ಲಿ 18 ಎಕರೆ ಜಮೀನನ್ನು 6 ಬೂರಹಿತ ಕುಟುಂಬಗಳಿಗೆ ಸರ್ಕಾರದಿಂದಲೇ ಕೊಡಪಟ್ಟಿದೆ ಇನ್ನುಳಿದ ಜಮೀನನ್ನು ಸ್ವಂತ ಜಮೀನು ಇದ್ದವರೇ ಅಧಿಕೃತವಾಗಿ ಆಕ್ರಮಿಸಿಕೊಂಡ್ಡಿದ್ದು ಸದ್ಯ 13 ಜನಕ್ಕೆ ಸರ್ಕಾರದಿಂದ ನೋಟೀಸ್ ಕೂಡ ಜಾರಿಗೆ ಬಂದಿದೆ ಆದ್ರೂ ಸ್ಥಳೀಯ ಮಟ್ಟದ ಕಂದಾಯ ಅಧಿಕಾರಿಗಳು ನಮಗೆ ಸಂಬಂಧವೇ ಇಲ್ಲಾ ಎನ್ನುವಂತೆ ನಿದ್ರೆಗೆ ಜಾರಿದ್ದಾರೆ.
ಕರ್ನಾಟಕ ಭೂ ಕಬಳಿಕೆ ನಿಷೇದ ವಿಶೇಷ ನ್ಯಾಯಾಲಯ ಬೆಂಗಳೂರ 13 ಜನರಿಗೆ ನೋಟೀಸ್ ಜಾರಿ ಮಾಡಿದೆ, AC ಯವರು ತೆರವು ಗೊಳಿಸಲು ಆದೇಶ ನೀಡಿದರು ಸ್ಥಳೀಯ ಅಧಿಕಾರಿಗಳು ತಹಸೀಲ್ದಾರ್ ರಾಜೇಶ್ ಬುರ್ಲಿ ಯಾವ ಕೆಲಸವನ್ನು ಮಾಡದೇ ಒಮ್ಮೆಯೂ ಆ ಸ್ಥಳಕ್ಕೆ ಬೆಟ್ಟಿ ನೀಡದೆ ಇರುವದು ವಿಪರ್ಯಾಸ ಹಾಗೂ ಬೇಜವಾಬ್ದಾರಿತನ
ಇನ್ನೂ ಸರ್ಕಲ್ ಹಾಗೂ ಗ್ರಾಮ ಲೆಕ್ಕಧಿಕಾರಿ ಬಲಿಷ್ಠರ ಕೈಗೊಂಬೆಯಾಗಿ ಅತಿಕ್ರಮಣಕಾರರ
ಆಳಾಗಿ ಕೂತಿದ್ದಾರೆ. ಸದ್ಯ ಈ ಅನ್ಯಾಯ ವನ್ನು ಪ್ರಶ್ನೆ ಮಾಡಿ ಸಮರ ಸಾರಿದ ಸುನೀತಾ ರಾಮಪ್ಪ ನಾಗನೂರ ಹೇಳುವಂತೆ ಸುಮಾರು ವರ್ಷ್ಗಳಿಂದ ನಾನು ಈ ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತಲೆ ಬಂದಿದ್ದಾರೆ ಆದ್ರೆ ಈ ಎಮ್ಮೆ ಚರ್ಮದ ಅಧಿಕಾರಿಗಳ ಕ್ರಿಯೆ ಮಾತ್ರ ಶೂನ್ಯ
ನೋಟೀಸ್ ಪಡೆದ 13 ಜನರಲ್ಲಿ ಮಾಯಪ್ಪ ಶಿವಪ್ಪ ಹಲ್ಯಾಳ 27 ಎಕರೆ, ನವಲಪ್ಪ ಹಾದಿಮನಿ 10 ಎಕರೆ, ಭೂಮಿ, ರಡ್ಡಿ, ಮೇತ್ರಿ, ದನೋಳ್ಳಿ, ಕುರುಬರ ಇನ್ನೂ ಅನೇಕರು ಸ್ವಂತ ಜಮೀನನ್ನು ಹೊಂದಿದರೂ ಸರ್ಕಾರದ ಜಮೀನಿಗೆ ಕಣ್ಣು ಹಾಕಿದ್ದಾರೆ.
ಈ ಆಕ್ರಮದ ಇಂಚಿoಚು ಮಾಹಿತಿ ಯನ್ನು ಕಲೆಹಾಕಿದ ಸುನೀತಾ ನಾಗನೂರ ಪಡಬಾರದ ಕಷ್ಟ ಪಟ್ಟಿದ್ದಾರೆ ತಮ್ಮವರಿಂದಲೇ ನೋವು ಅವಮಾನ ಅಪಮಾನ ಉಂಡು ಸಮರ ಸಾರಿ AIN ನ್ಯೂಸ್ ಮೊರೆ ಹೋಗಿದ್ದಾರೆ
“ದೇವರು ವರ ಕೊಟ್ರು ಪೂಜಾರಿ ಕೊಡ್ಲಿಲ್ಲ” ಅನ್ನುವಂತೆ ನ್ಯಾಯಾಲಯ ಹಾಗೂ AC, DC ಯವರ ಆದೇಶವಿದ್ರು ಈ ಬುರ್ಲಿ ಗೆ ಅದೇನ್ ರೋಗ ಬಂದಿದಿಯೋ ಗೊತ್ತಿಲ್ಲ,
ಸಂಬಂಧಪಟ್ಟ ಅಧಿಕಾರಿಗಳು ಈ ತಹಸೀಲ್ದಾರ್ ಬುರ್ಲಿ ಹಾಗೂ ಸರ್ಕಲ್ ಹಾಗೂ ತಲಾಟಿ ಮೇಲೆ ನಿರ್ಧಾಕ್ಷನ್ಯ ಕ್ರಮ ಕೈಗೊಳ್ಳಕಿದೆ… ಅನ್ಯಾಯದ ವಿರುದ್ಧ ಸಿಡಿದೆದ್ದ ಸುನಿತಾ ಅವರಿಗೆ ಸೂಕ್ತ ರಕ್ಷಣೆ ನೀಡಬೇಕಿದೆ
ವರದಿ: *
ಎಂ. ಕೆ. ಸಪ್ತಸಾಗರ* AIN ನ್ಯೂಸ್ ಚಿಕ್ಕೋಡಿ