ಬೆಂಗಳೂರು ಗ್ರಾಮಾಂತರ:- ಲಂಚ ಸ್ವೀಕರಿಸುವಾಗ ಕಂದಾಯ ಇಲಾಖೆ ಅಧಿಕಾರಿ ಲೋಕಾ ಬಲೆಗೆ ಬಿದ್ದಿರುವ ಘಟನೆ ಜರುಗಿದೆ. ದಿವಾಕರ್ ಗ್ರೇಡ್ ೨ ತಹಶಿಲ್ದಾರ್ ಲೋಕಾ ಬಲೆಗೆ ಬಿದ್ದ ಅಧಿಕಾರಿ.
ಮಹಿಳೆ ಹತ್ಯೆ: ಗಂಡ, ಅತ್ತೆ ವಿರುದ್ಧ ದಾಖಲಾಯ್ತು ದೂರು.. ತನಿಖೆ ಚುರುಕು!
ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ,ಕಚೇರಿಯ ಗ್ರೇಡ್ ೨ ತಹಶಿಲ್ದಾರ್ ದಿವಾಕರ್ ಅವರು, ನೆಲಮಂಗಲ ತಾಲೂಕಿನ ಗಿರಿಯನಪಾಳ್ಯ ಗ್ರಾಮಕ್ಕೆ ಸೇರಿದ ಜಮೀನು ಖಾತೆ ಮಾಡಿಸಲು ಎರಡು ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಈ ವೇಳೆ ಒಂದೂವರೆ ಲಕ್ಷಕ್ಕೆ ಡೀಲ್ ಆಗಿದೆ.
ಮಾತುಕತೆಯಂತೆ ಇವತ್ತು ಹಣ ಪಡೆಯುವ ವೇಳೆ ಲೋಕಾ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಲೋಕಾ ಇನ್ಸ್ಪೆಕ್ಟರ್ ರಮೇಶ್ ಮತ್ತು ತಂಡದಿಂದ ದಾಳಿ ನಡೆಸಲಾಗಿದ್ದು, ದಾಖಲೆಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ.