ಕನ್ನಡ ಭಾಷೆ, ನೆಲೆ ಜಲದ ಬಗ್ಗೆ ಧೀಮಾಕು ತೋರಿಸಿದವರಿಗೆ ಕನ್ನಡಿಗರು ತಕ್ಕ ಪಾಠ ಕಲಿಸುತ್ತಾರೆ ಅನ್ನೋದಕ್ಕೆ ಆನೇಕಲ್ ತಾಲೂಕಿನ ಸೂರ್ಯ ನಗರದಲ್ಲಿ ನಡೆದ ಘಟನೆ ಸಾಕ್ಷಿ.. ಯಾರೇ ಬರಲಿ ನಾನು ಕನ್ನಡ ಮಾತಾಡಲ್ಲ ಎಂದಿದ್ದ ಎಸ್ ಬಿಐ ಬ್ಯಾಂಕ್ ಮ್ಯಾನೇಕರ್ ಧೀಡೀರ್ ಅಂತಾ ಎತ್ತಂಗಡಿ ಮಾಡಲಾಗಿದೆ. ಕನ್ನಡ ಭಾಷೆಗೆ ಅಗೌರವ ತೋರಿಸಿದ ಮ್ಯಾನೇಜರ್ ನ್ನು ರಾತ್ರೋರಾತ್ರಿ ಬೇರೆಕಡೆಗೆ ಟ್ರಾನ್ಸ್ ಫರ್ ಮಾಡಲಾಗಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.
ಘಟನೆ ಏನು?
ಆನೇಕಲ್ ತಾಲೂಕಿನ ಸೂರ್ಯ ನಗರದಲ್ಲಿ ಎಸ್ ಬಿ ಐ ಮ್ಯಾನೇಜರ್ ಆಗಿರುವ ಪ್ರಿಯಾಂಕಾ ಸಿಂಗ್, ಕನ್ನಡ ಮಾತನಾಡಿ ಎಂದಿದಕ್ಕೆ ದರ್ಪ ಮೆರೆದಿದ್ದರು. ಕನ್ನಡದಲ್ಲಿ ಮಾತಾಡಬೇಕು ಎಂದು ರೂಲ್ಸ್ ಇದೆಯಾ? ಯಾರೇ ಬಂದರೂ ಕನ್ನಡ ಮಾತಾಡೋದಿಲ್ಲ ಅಂತ ದಬ್ಬಾಳಿಕೆ ಮಾಡಿದ್ದರು. ಇದೀಗ ಆ ಬ್ಯಾಂಕ್ ಮ್ಯಾನೇಜರ್ ಎತ್ತಂಗಡಿ ಮಾಡಲಾಗಿದೆ.
ಕನ್ನಡ ಹೋರಾಟಗಾರಿಗೆ ಹೆದರಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎನ್ನಲಾಗುತ್ತಿದೆ. ಆನೇಕಲ್ ಕೆಆರ್ಎಸ್ ಪಕ್ಷದವರು ಇಂದು ಬ್ಯಾಂಕ್ ಗೆ ತೆರಳಿ ಪ್ರತಿಭಟನೆ ಮಾಡಿದ್ದಾರೆ.
ಬೀಕಾಬಿಟ್ಟೆ ಕ್ಷಮೆ ಕೇಳಿದ್ದ ಮ್ಯಾನೇಜರ್!
ಬ್ಯಾಂಕ್ ಮ್ಯಾನೇಜರ್ ಕನ್ನಡ ಮಾತಾಡಲ್ಲ ಎಂಬ ದರ್ಪ ಮೆರೆದ ವಿಡಿಯೋ ವೈರಲ್ ಆಗ್ತಿದ್ದಂತೆ ಪ್ರಿಯಾಂಕಾ ಸಿಂಗ್ ಬೇಕಾಬಿಟ್ಟಿ ಕ್ಷಮೆ ಕೇಳಿದ್ದರು.
ಸಿಎಂ ಖಂಡನೆ!
ಬ್ಯಾಂಕ್ ಮ್ಯಾನೇಜರ್ ನಡೆ ಬಗ್ಗೆ ಸಿಎಂ ಮುಖ್ಯಮಂತ್ರಿ ಖಂಡನೆ ವ್ಯಕ್ತಪಡಿಸಿದ್ದಾರೆ. ಬ್ಯಾಂಕ್ ಸಿಬ್ಬಂದಿ ಜನರ ಜೊತೆ ಸ್ಥಳೀಯ ಭಾಷೆಯಲ್ಲಿ ವ್ಯವಹರಿಸಬೇಕು. ಎಸ್ಬಿಐ ಶಾಖಾ ವ್ಯವಸ್ಥಾಪಕರು ಕನ್ನಡ ನಿರಾಕರಿಸಿ ನಾಗರಿಕರನ್ನು ಕಡೆಗಣಿಸಿರುವುದು ತೀವ್ರವಾಗಿ ಖಂಡನೀಯ. ಅಧಿಕಾರಿಯನ್ನು ವರ್ಗಾವಣೆ ಮಾಡುವಲ್ಲಿ ಎಸ್ಬಿಐನ ತ್ವರಿತ ಕ್ರಮವನ್ನು ಪ್ರಶಂಸಿಸುತ್ತೇವೆ. ಅಂತಹ ಘಟನೆಗಳು ಮರುಕಳಿಸಬಾರದು. ಎಲ್ಲಾ ಬ್ಯಾಂಕ್ ಉದ್ಯೋಗಿಗಳು ಗ್ರಾಹಕರನ್ನ ಘನತೆಯಿಂದ ನಡೆಸಿಕೊಳ್ಳಬೇಕು. ಗ್ರಾಹಕರ ಜೊತೆ ಸ್ಥಳೀಯ ಭಾಷೆಯಲ್ಲಿ ಮಾತನಾಡುವ ಪ್ರಯತ್ನ ಮಾಡಬೇಕು. ಬ್ಯಾಂಕ್ ಸಿಬ್ಬಂದಿಗೆ ಸಾಂಸ್ಕೃತಿಕ ಮತ್ತು ಭಾಷಾ ಸಂವೇದನಾ ತರಬೇತಿ ಕಡ್ಡಾಯಗೊಳಿಸಬೇಕು. ಸ್ಥಳೀಯ ಭಾಷೆಯನ್ನು ಗೌರವಿಸುವುದು ಎಂದರೆ ಜನರನ್ನು ಗೌರವಿಸುವುದು ಎಂದರ್ಥ ಎಂದು ಹೇಳುತ್ತಾ ಕೇಂದ್ರದ ಹಣಕಾಸ ಇಲಾಖೆಗೆ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
The behaviour of the SBI Branch Manager in Surya Nagara, Anekal Taluk refusing to speak in Kannada & English and showing disregard to citizens, is strongly condemnable.
We appreciate SBI’s swift action in transferring the official. The matter may now be treated as closed.…
— Siddaramaiah (@siddaramaiah) May 21, 2025