ಬೆಂಗಳೂರು:- ನಗರದಲ್ಲಿ ನಕಲಿ ಸಿಗರೇಟ್ ಹಾವಳಿ ಹೆಚ್ಚಾಗಿದ್ದು, ದುಬೈನಿಂದ ಬೆಂಗಳೂರಿಗೆ ನಕಲಿ ಸಿಗರೇಟ್ ಸ್ಮಗ್ಲಿಂಗ್ ನಡೆಯುತ್ತಿದೆ.
ಕರ್ನಾಟಕದಲ್ಲಿ ನಾಳೆಯಿಂದ ಮುಂಗಾರು ಚುರುಕು: 5 ದಿನ ವ್ಯಾಪಕ ಮಳೆ ಸಾಧ್ಯತೆ!
ದುಬೈನಿಂದ ಕಡಿಮೆ ಬೆಲೆಗೆ ನಕಲಿ ಸಿಗರೇಟ್ ತಂದು ಬೆಂಗಳೂರಲ್ಲಿ ಸೇಲ್ ಮಾಡುತ್ತಿದ್ದ ಕೇರಳ ಮೂಲದ ಇಬ್ಬರು ಆರೋಪಿಗಳನ್ನು ಇದೀಗ ಅರೆಸ್ಟ್ ಮಾಡಲಾಗಿದೆ. ಮೊಹಮ್ಮದ್ ಸಾಹೀರ್ ಹಾಗೂ ಅಬ್ದುಲ್ ರಜಾಕ್ ಬಂಧಿತ ಆರೋಪಿಗಳು. ಕೇರಳದ ಕಣ್ಣೂರು ಮೂಲದ ಆರೋಪಿಗಳು, ಸೂಟ್ ಕೇಸ್ ನಲ್ಲಿ ಕೆಜಿ ಲೆಕ್ಕದಲ್ಲಿ ಸಿಗರೇಟ್ ತರ್ತಿದ್ದರು. ಬಳಿಕ ಬೆಂಗಳೂರಲ್ಲಿ ಡಿಸ್ಟ್ರಿಬ್ಯೂಟ್ ಮಾಡ್ತಿದ್ರು.
70 ರೂ ಗೆ ನಕಲಿ ಸಿಗರೇಟ್ ಪ್ಯಾಕ್ ಖರೀದಿಸಿ 175 ರೂ ಗೆ ಸೇಲ್ ಮಾಡ್ತಿದ್ರು. ಇದೀಗ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಬಂಧಿತರಿಂದ ಹನ್ನೊಂದು ಲಕ್ಷ ಮೌಲ್ಯದ 62 ಸಾವಿರ ನಕಲಿ ಸಿಗರೇಟ್ ವಶಕ್ಕೆ ಪಡೆಯಲಾಗಿದೆ. ಕಲಾಸಿಪಾಳ್ಯದ ಖಾಸಗಿ ಹೋಟೆಲ್ ನಲ್ಲಿ ರೂಂ ಮಾಡಿಕೊಂಡು ನಕಲಿ ಸಿಗರೇಟ್ ಸೇಲ್ ಮಾಡ್ತಿದ್ರು ಎಂಬುವುದು ತನಿಖೆಯಲ್ಲಿ ತಿಳಿದು ಬಂದಿದೆ.
ಪೊಲೀಸರ ದಾಳಿ ವೇಳೆ ಸೂಟ್ ಕೇಸ್ ಗಟ್ಟಲೇ ಸಿಗರೇಟ್ಸ್ ವಶಕ್ಕೆ ಪಡೆಯಲಾಗಿದ್ದು, ಕಲಾಸಿಪಾಳ್ಯ ಪೊಲೀಸರಿಂದ ಆರೋಪಿಗಳನ್ನು ಬಂಧಿಸಿ ವಿಚಾರಣೆ ಮಾಡಲಾಗುತ್ತಿದೆ.