ರಶ್ಮಿಕಾ ಮಂದಣ್ಣ ಯಶಸ್ಸಿನ ನಾಗಲೋಟಕ್ಕೆ ಬ್ರೇಕ್ ಬಿದ್ದಿದೆ. ಅದಕ್ಕೆ ಕಾರಣ ಆ ನಿರ್ದೇಶಕ ಅನ್ನೋ ಚರ್ಚೆ ಶುರುವಾಗಿದೆ. ಛಾವಾ, ಪುಷ್ಪ ಸರಣಿ ಸಿನಿಮಾ ಹಾಗೂ ಅನಿಮಲ್ ಮೂಲಕ ಹ್ಯಾಟ್ರಿಕ್ ಹಿಟ್ ಬಾರಿಸಿದವರು ಇದೇ ಹುಡ್ಗಿ ಈಗ ಹಿಂದಿ ಚಿತ್ರರಂಗದ ಮೊದಲ ಸೋಲಿನ ರುಚಿ ಕಂಡಿದ್ದಾರೆ. ಎ.ಆರ್. ಮುರುಗದಾಸ್ ನಿರ್ದೇಶನದ, ಸಲ್ಮಾನ್ ಖಾನ್ ನಾಯಕನಾಗಿ , ರಶ್ಮಿಕಾ ನಾಯಕಿಯಾಗಿ ಸಿಕಂದರ್ ಚಿತ್ರ. ಈದ್ ಹಬ್ಬದ ಮುನ್ನಾದಿನ ಬಿಡುಗಡೆಯಾಗಿತ್ತು. ಆದ್ರೆ ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಮೋಡಿ ಮಾಡುವಲ್ಲಿ ವಿಫಲವಾಗಿದೆ.
ಸಿಕಂದರ್ ಸಿನಿಮಾ ಮೊದಲ ದಿನದ ಕಲೆಕ್ಷನ್ ಕೇಳಿ ಸಲ್ಲು ಫ್ಯಾನ್ಸ್ ದಂಗಾಗಿ ಹೋಗಿದ್ದಾರೆ. ಅದಕ್ಕೆ ಕಾರಣ ಸಲ್ಮಾನ್ ಖಾನ್ ವೃತ್ತಿ ಜೀವದಲ್ಲಿ ಅತಿ ಕಡಿಮೆ ಗಳಿಕೆ ಮಾಡಿದ ಚಿತ್ರ ಅನ್ನೋ ಮುದ್ರೆ ಬಿದ್ದಿದೆ. ಸಿಕಂದರ್ ಚಿತ್ರ ಮೊದಲ ದಿನ ಕೇವಲ 26 ಕೋಟಿ ಗಳಿಸಿದೆ. ಇದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಇದರ ಮುಖ್ಯ ಕಾರಣ ಕಥೆಯಲ್ಲಿನ ಸತ್ವದ ಕೊರತೆ ಇರುವುದು. ಘಜನಿಯಂತಹ ಹಿಟ್ ಚಿತ್ರ ನೀಡಿದ್ದ ಮುರುಗದಾಸ್ ಈಗಿನ ಟ್ರೆಂಡ್ ಗೆ ತಕ್ಕಂತಹ ಸ್ಕ್ರೀಪ್ಟ್ ಮಾಡುವಲ್ಲಿ ಹಿಂದೆ ಬಿದ್ದಿದ್ದಾರೆ. ಇದು ಸಿಕಂದರ್ ಸಕ್ಸಸ್ ಗೆ ದೊಡ್ಡ ಪೆಟ್ಟು ಬಿದ್ದಿದೆ.
ಪುಷ್ಪ, ಅನಿಮಲ್ ಮತ್ತು ಛಾವಾ ಬ್ಲಾಕ್ ಬಸ್ಟರ್ ಹಿಟ್ಗಳೊಂದಿಗೆ ಬಾಲಿವುಡ್ನಲ್ಲಿ ಒಂದು ಬ್ರ್ಯಾಂಡ್ ಅನ್ನು ನಿರ್ಮಿಸಿರುವ ರಶ್ಮಿಕಾಗೆ ಸಿಕಂದರ್ ಸಿನಿಮಾ ಅವರ ಕರಿಯರ್ ಮೇಲೆ ದೊಡ್ಡ ಪೆಟ್ಟು ಕೊಡಲಿದೆ ಅನ್ನೋ ಚರ್ಚೆಗೆ ಕಾರಣವಾಗಿದೆ. ಸಿನಿಮಾ ಅಂದ್ಮೇಲೆ ಸೋಲು ಗೆಲುವು ಅನ್ನೋದು ಕಾಮನ್. ಆದ್ರೆ ಸಲ್ಮಾನ್ ಖಾನ್ ಗೆ ಮಾತ್ರ ಸೋಲು ಅನ್ನೋದು ಕಟ್ಟಿಟ್ಟ ಬುತ್ತಿಯಂತಾಗಿದೆ. ಸಾಲು ಸಾಲು ಸೋಲಗಳು ಅವರ ಭತ್ತಳಿಕೆ ಸೇರುತ್ತಿವೆ. ಸಿಕಂದರ್ ಭಾಯಿಜಾನ್ ಸಿನಿ ಜರ್ನಿಗೆ ಫ್ಲಸ್ ಪಾಯಿಂಟ್ ಆಗಲಿದೆ ಎಂಬ ನಿರೀಕ್ಷೆ ಇತ್ತು. ಆದರೆ ಆ ನಿರೀಕ್ಷೆ ಹುಸಿಯಾಗಿದೆ.