ಬೆಳಗಾವಿ:-ಇತ್ತೀಚಿನ ಘನ ಸರ್ವೋಚ್ಚ ನ್ಯಾಯಾಲಯದ ಸಿವಿಲ್ ಅಪೀಲ್ ಸಂಖ್ಯೆ:14604/2024 ಮತ್ತು 14605/2024, ದಿನಾಂಕ:17-12-2025 ರಂದು ತೀರ್ಪು ಪ್ರಕಟಿಸಿದ ಪ್ರಕಾರ ದೇಶದ ಮಹಾನಗರ, ನಗರ, ಪಟ್ಟಣ ಮತ್ತು ಗ್ರಾಮೀಣ ಭಾಗದಲ್ಲಿ ಇರತಕ್ಕಂತ ಮತ್ತು ವಾಸವಾಗಿರುವಂತ ಕೊಟ್ಯಾಂತರ ಜನರು ಕಟ್ಟಿಸುವಂತಹ ಮನೆಗಳಿಗೆ ಹಾಗೂ ಕಟ್ಟಡಗಳಿಗೆ ವಿದ್ಯುತ, ಕುಡಿಯುವ ನೀರು ಹಾಗೂ ಒಳಚರಂಡಿ ಸಂಪರ್ಕ ಪಡೆದುಕೊಳ್ಳಬೇಕಾದರೆ ಆ ಮನೆಯ ಮತ್ತು ಕಟ್ಟಡಗಳಿಗೆ ಬಿಲ್ಲಿಂಗ್ ಪರ್ಮಿಶನ್, ಸಿ.ಸಿ. ಇವೆಲ್ಲವನ್ನು ಪಡೆದುಕೊಂಡಿರಬೇಕು,
ಕಿತ್ತಳೆ ಹಣ್ಣಿನ ಸಿಪ್ಪೆ ಎಸೆಯದಿರಿ: ಕಹಿಯಾದ್ರೂ ಇದರ ರಸದಲ್ಲಿ ಅಡಗಿದೆ ಆರೋಗ್ಯ ಸಿಹಿ!
ಆಗ ಮಾತ್ರ ಅವರಿಗೆ ಈ ಎಲ್ಲ ಸಂಪರ್ಕಗಳನ್ನು ಕೊಡಬಹುದು. ಬಿಲ್ಡಿಂಗ್ ಪರ್ಮಿಶನ್ ಹಾಗೂ ಸಿ.ಸಿ ಇಲ್ಲವಾದರೆ ಈ ಸಂಪರ್ಕಗಳನ್ನು ಕೊಡಬಾರದೆಂದು ನಿರ್ದೇಶನ ಕೊಟ್ಟ ಹಿನ್ನೆಲೆಯಲ್ಲಿ ಬರುವಂತಹ ದಿನಗಳಲ್ಲಿ ನಾಡಿನ ಲಕ್ಷಾಂತರ ಬಡ ಜನರಿಗೆ ಹಾಗೂ ಮಧ್ಯಮ ವರ್ಗದ ಜನರಿಗೆ ಈ ಯಾವುದೇ ಸಂಪರ್ಕಗಳನ್ನು ಪಡೆದುಕೊಳ್ಳಲಾರದಂತಹ ಪರಿಸ್ಥಿತಿ ನಿರ್ಮಾಣ ಆಗಲಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಹಾಗೂ ಬೆಳಗಾವಿ ಲೋಕಸಭಾ ಸದಸ್ಯರಾದ ಶ್ರೀ ಜಗದೀಶ ಶೆಟ್ಟರ ಅವರು ಹೇಳಿದರು.
ಮಾನ್ಯ ಸರ್ವೋಚ್ಚ ನ್ಯಾಯಾಲಯದ ತೀರ್ಪು ಸದುದ್ದೇಶದಿಂದ ಕೂಡಿದ್ದಾಗಿದ್ದರೂ ಈ ಆದೇಶದಿಂದ ಮನೆ ಮತ್ತು ಕಟ್ಟಡ ಕಟ್ಟುವಂತಹ ಮಾಲೀಕರು, ಕಟ್ಟಡದ ನಕ್ಷೆ ಮತ್ತು ಮಂಜೂರಾತಿ, ಕಟ್ಟಡ ನಿರ್ಮಾಣ ಪೂರ್ಣಗೊಂಡ ಬಳಿಕ ಹಾಗೂ ಸ್ಥಳ ಪರಿಶೀಲನೆ ನಂತರವಷ್ಟೆ ಸ್ವಾಧೀನಾನುಭವ ಪತ್ರ ದೊರೆಯುವುದು.
ಅಲ್ಲಿಯವರೆಗೆ ನೀರಿನ, ವಿದ್ಯುತ್ ಮತ್ತು ಒಳಚರಂಡಿ ಸಂಪರ್ಕ ದೊರೆಯುವುದು ಕಷ್ಟಸಾಧ್ಯ. ಹೀಗಾಗಿ ಸರ್ವೋಚ್ಛ ನ್ಯಾಯಾಲಯದ ಈ ತೀರ್ಪು ದೂರಗಾಮಿ ಪರಿಣಾಮ ಬೀರುವುದರಿಂದ ಬಡ ಜನರಿಗೆ, ಮಧ್ಯಮ ವರ್ಗದ ಜನರಿಗೆ ಮತ್ತು ಈ ಕಾಮಗಾರಿಗಳನ್ನು ನಿರ್ವಹಣೆ ಮಾಡುವಂತಹ ಗುತ್ತಿಗೆದಾರರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ರಾಜ್ಯ ಸರ್ಕಾರ ಈಗಾಗಲೇ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಅನುಷ್ಟಾನಗೊಳಿಸಲು ಎಲ್ಲ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರಿಂದ ಯಾವುದೇ ಕಟ್ಟಡ ಪರವಾನಿಗೆ, ಸಿ.ಸಿ ಮತ್ತು ನಕ್ಷೆಯ ಮಂಜೂರಾತಿಯಲ್ಲಿ ದೋಷಗಳಿದ್ದರೆ, ಆ ಕಟ್ಟಡಗಳಿಗೆ ಯಾವುದೇ ರೀತಿಯ ವಿದ್ಯುತ್, ಕುಡಿಯುವ ನೀರು, ಒಳಚರಂಡಿ ಸಂಪರ್ಕ ಪಡೆದುಕೊಳ್ಳದೆ ಇರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಜ್ಯ ಸರ್ಕಾರ ಈ ತೀರ್ಪಿನ ಬಗ್ಗೆ ಗಂಭೀರವಾಗಿ ಪರಿಗಣಿಸಿ, ನಾಡಿನ ಜನತೆಯ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶದ ಮರುಪರಿಶೀಲನೆ ಸಲುವಾಗಿ ಮಾನ್ಯ ಸರ್ವೋಚ್ಛ ನ್ಯಾಯಾಲಯಕ್ಕೆ ಸರ್ಕಾರದಿಂದ ಅರ್ಜಿಯನ್ನು ಬರೆಯುವುದು ಮತ್ತು ಬಡ ಜನತೆಗೆ ಅನ್ಯಾಯವಾಗದ ರೀತಿಯಲ್ಲಿ ಪರ್ಯಾಯವಾದಂತಹ ಅಗತ್ಯ ಕ್ರಮ ಕೈಗೊಳ್ಳಲು ಗಂಭೀರವಾಗಿ ಆಲೋಚನೆ ಮಾಡುವಂತಹ ಅವಶ್ಯಕತೆ ಇದೆ.
ಈ ಹಿನ್ನಲೆಯಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದಂತಹ ಶ್ರೀ ಸಿದ್ದರಾಮಯ್ಯನವರಿಗೆ ಮಾಜಿ ಮುಖ್ಯಮಂತ್ರಿಗಳು ಹಾಗೂ ಬೆಳಗಾವಿ ಲೋಕಸಭಾ ಸದಸ್ಯರಾದ ಶ್ರೀ ಜಗದೀಶ ಶೆಟ್ಟರ ಅವರು ಪತ್ರದ ಮುಖೇನ ವಿನಂತಿಸಿದ್ದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಾಳಪ್ಪ ತೇರದಾಳ AIN NEWS ಬೆಳಗಾವಿ