ಬೆಂಗಳೂರು: ರಾಜ್ಯದಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆಯಲ್ಲಿ 14 ಸಾವಿರ ಕೋಟ ಹಗರಣದ ನಡೆದಿದೆ ಎಂದು ಬಿಜೆಪಿ ನಾಯಕ ಡಾ.ಅಶ್ವಥ್ ನಾರಾಯಣ್ ದಾಖಲೆ ಬಹಿರಂಗಪಡಿಸಿದ್ದರು. ಬಿಜೆಪಿ ನಾಯಕರ ಆರೋಪವನ್ನು ಇಂಧನ ಸಚಿವ ಕೆ,ಜೆ ಜಾರ್ಜ್ ತಳ್ಳಿ ಹಾಕಿದ್ದರು.
ರಾಜ್ಯದಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆ ವಿಚಾರವಾಗಿ ಇಂಧನ ಸಚಿವ ಕೆ.ಜೆ ಜಾರ್ಜ್ ಯಾವುದೂ ಕಾನೂನಿನ ವಿರುದ್ಧವಾಗಿಲ್ಲ ಅಂತ ಯಾವುದೇ ದಾಖಲೆ ನೀಡದೆ ಹೇಳಿದ್ದಾರೆ.
ಅವರು ಹೇಳಿರೋ ವಿಚಾರದಲ್ಲಿ 9 ಸುಳ್ಳುಗಳ ಬಗ್ಗೆ ದಾಖಲೆ ಸಹಿತ ಮುಂದೆ ಇಡ್ತಿದ್ದೇವೆ.
ಕಾನೂನು ಚೌಕಟ್ಟಿನಲ್ಲಿ ಮಾಡದೆ, ಎಲ್ಲವನ್ನೂ ಉಲ್ಲಂಘನೆ ಮಾಡಲಾಗಿದೆ ಅಂತ
ಸಚಿವ ಜಾರ್ಜ್ ಹಾಗೂ ಇಲಾಖೆ ಅಧಿಕಾರಿಗಳ ಸುದ್ದಿಗೋಷ್ಟಿ ಬಗ್ಗೆ ಅಶ್ವಥ್ ನಾರಾಯಣ್.
ದಾಖಲೆ ಬಿಡುಗಡೆ ಮಾಡಿದ್ದಾರೆ.
ಎಲ್ಲವೂ KTPP ಆಕ್ಟ್ ಪ್ರಕಾರವೇ ನಡೆದಿದೆ ಅಂತ ಸರ್ಕಾರ ಹೇಳುತ್ತದೆ. ಆದ್ರೆ ಟೆಂಡರ್ನಲ್ಲಿ ಅನೇಕ ಗೋಲ್ಮಾಲ್ ಆಗಿದೆ. ಬಿಡ್ಡಿಂಗ್ ಮಾಡುವ ಮೊದಲೇ 177 ಆಕ್ಷೇಪಣೆ ಬಂದಿದೆ. 200 ಕೋಟಿಗೂ ಹೆಚ್ಚು ಮೊತ್ತದ ಟೆಂಡರ್ ಆದರೆ, ಗ್ಲೋಬಲ್ ಟೆಂಡರ್ ಮಾಡಬೇಕು, ಇಲ್ಲಿ ಮಾಡಿಲ್ಲ. ಸ್ಟ್ಯಾಂಡರ್ಡ್ ಬಿಡ್ ಡಾಕ್ಯುಮೆಂಟ್ ಕೂಡ ಉಲ್ಲಂಘನೆ ಮಾಡಲಾಗಿದೆ. ಹೀಗೆ
ಹತ್ತು ರೀತಿಯ ಉಲ್ಲಂಘನೆಗಳು ಟೆಂಡರ್ನಲ್ಲಿ ಕಂಡುಬಂದಿದೆ. ಇಂಧನ ಇಲಾಖೆ ಸಚಿವ ಜಾರ್ಜ್ ಸುದ್ದಿಗೋಷ್ಟಿಯಲ್ಲಿ ಸುಳ್ಳು ಹೇಳಿದ್ದಾರೆ ಎಂದು ಅಶ್ವಥ್ ನಾರಾಯಣ್ ಅಋೋಪಿಸಿದರು.
ಹೊಸ ಗ್ರಾಹಕರಿಗೆ ಪ್ರೀ ಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ ಮೀಟರ್ ಐಚ್ಛಿಕ ಅಂತ ಉತ್ತರ ಕೊಟ್ಟಿದ್ದಾರೆ. KTPP ಆಕ್ಟ್ KW-4 ಆಕ್ಟ್ ಪ್ರಕಾರವೇ ಮಾಡಿದ್ದೇವೆ ಅಂದಿದ್ದಾರೆ. ವರ್ಷಕ್ಕೆ 947 ಕೋಟಿ ಅಂತ ಹೇಳಿದ್ದಾರೆ. ಅದನ್ನ ಐದು ವರ್ಷಗಳಿಗೆ ಅನ್ವಯಿಸಿದ್ರೆ 4,996 ಕೋಟಿ ಆಗಲಿದೆ.
ಟೆಂಡರ್ ಪ್ರಕಾರ EMD 10 ಕೋಟಿ ಇಡಬೇಕು. KTPP ಪ್ರಕಾರ ಫೈನಾನ್ಸಿಯಲ್ ಟರ್ನ್ ಓವರ್ 1,999 ಕೋಟಿ ಇರಬೇಕು. ಟೆಂಡರ್ ಕರೆದ ಮೂರರಷ್ಟು ಅವರ ಫೈನಾನ್ಸ್ ಕೆಪಾಸಿಟಿ ಇರಬೇಕು.
300 ಕೋಟಿ ಬಿಡ್ ಕೆಪಾಸಿಟಿ ಇರಬೇಕು. ಟೆಂಡರ್ ಬಿಡ್ ಕೆಪಾಸಿಟಿಯೇ ತೋರಿಸಿಲ್ಲ.
ರಾಜಶ್ರೀ ಎಲೆಕ್ಟ್ರಿಕಲ್ಸ್ ಸಂಸ್ಥೆಗೆ ಟೆಂಡರ್ ನೀಡಿದ್ದಾರೆ. ಆ ಸಂಸ್ಥೆ ಅಸ್ಸಾಂ ನಲ್ಲಿ ಬ್ಲಾಕ್ ಲೀಸ್ಟ್ಗೆ ಸೇರಿಸಲಾಗಿದೆ. ಆದ್ರೆ ಸಚಿವರು ಡಿಬಾರ್ ಮಾತ್ರ ಆಗಿದೆ ಅಂತಿದ್ದಾರೆ. ಬ್ಲಾಕ್ ಲೀಸ್ಟ್ ಅಂದ್ರೂ ಒಂದೇ, ಡಿಬಾರ್ ಅಂದ್ರೂ ಒಂದೇ. ಬಿಡ್ಡರ್ ಕೆಲಸದ ಅನುಭವದಲ್ಲೂ ಉಲ್ಲಂಘನೆ ಆಗಿದೆ ಎಂದು ಆರೋಪಿಸಿದ್ದಾರೆ..