ಹುಬ್ಬಳ್ಳಿ; ಸಾಮಾಜಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದನ್ನ ಪರಿಗಣಿಸಿ ಖ್ಯಾತ ಸಾಮಾಜಿಕ ಕಾರ್ಯಕರ್ತೆ ಜುಬೇದಾ ನಧಾಫ್ ಅವರಿಗೆ ತಮಿಳುನಾಡಿನ ಏಷಿಯಾ ಇಂಟರ್ ನ್ಯಾಶನಲ್ ಕಲ್ಚರಲ್ ಅಕಾಡೆಮಿ ವತಿಯಿಂದ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.
ಬೆಂಗಳೂರಿನ ಹೊಸೂರಿನ ಖಾಸಗಿ ಹೊಟೇಲ್ ನಲ್ಲಿ ನಡೆದ 2025 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತಮಿಳುನಾಡಿನ ಮಾಜಿ ಶಾಸಕ ಹಾಗೂ ಐ ಎನ್ ಟಿಯುಸಿಐ ಪ್ರಧಾನ ಕಾರ್ಯದರ್ಶಿ ಡಾ.ಕೆ.ಎ.ಮನೋಕರನ್ ಹಾಗೂ ಆಂದ್ರಪ್ರದೇಶದ ನಿವೃತ್ತ ನ್ಯಾಯಾಧೀಶ ಡಾ.ಜೆ.ಹರಿಡಾಸ್ ಪದವಿ ನೀಡಿ ಗೌರವಿಸಿದರು. ಅತಿಥಿಗಳಾಗಿ ಕರಾಠೆ ವಿಶ್ವ ದಾಖಲೆಯ ಡಾ.ಕರಾಟೆ ಎ.ಪಿ.ಶ್ರೀನಾಥ್, ಹಿರಿಯ ಪತ್ರಕರ್ತ ಡಾ. ಎಸ್. ಗುಣಶೇಖರನ್, ರಾಷ್ಟ್ರೀಯ ಮಾನವ ಹಕ್ಕುಗಳ ರಕ್ಷಣಾ ಸಂಘದ ರಾಷ್ಟ್ರೀಯ ಅಧ್ಯಕ್ಷ ಡಾ.ಡಿ.ದೇವಸಂಗ್ಮಣಿ, ಸೌತ್ ವೆಸ್ಟರ್ನ್ ರೈಲ್ವೆ ಪ್ರಧಾನ ಕಾರ್ಯದರ್ಶಿ ಜೆಮ್ಸ್ ತಮಿಳುನಾಡಿನ ಪೈನೂರ್ ಪಂಚಾಯತ್ ಅಧ್ಯಕ್ಷ ಮುತ್ತುಕುಮಾರ್,ಕಲಾವಿದ, ಗಾಯಕ ಹಾಗೂ ನಿರ್ದೇಶಕ ಡಾ.ಜನಾರ್ದನ ಕೆ.ಬಿ. ಚಲನಚಿತ್ರ ನಿರ್ದೇಶಕ ಎಚ್.ಎಸ್.ನಾರಾಯಣ ಸ್ವಾಮಿ ,ಗುತ್ತಿಗೆದಾರ ಹಾಗೂ ಡೆವಲಪರ್ ಡಾಪವನ ಹನುಮಯ್ಯಾ ನರೇಂದ್ರ ಉಪಸ್ಥಿತರಿದ್ದರು.
ಸಮಾರಂಭದ ಸಾನಿಧ್ಯವನ್ನ ಬೆಂಗಳೂರಿನ ಮಹಾಕಾಳಿ ಮಠ ಅರ್ಚಕರಾದ ಶ್ರೀ ಆದಿತ್ಯ ಸ್ವಾಮೀಜಿ ಹಾಗೂ ಶ್ರೀ ಗಂಗಮ್ಮ ದೇವಿ ಶಕ್ತಿ ಪೀಠದ ಫೀಠಾಧಿಕಾರಿ ಸ್ವಾಮೀಜಿ ಡಾ.ಎಸ್.ರವಿಂದ್ರನ್ ಸಾನ್ನಿಧ್ಯ ವಹಿಸಿದ್ದರು . ಇದೇ ಸಮಯದಲ್ಲಿ ಗೌರವ ಡಾಕ್ಟರೇಟ್ ಪ್ರಶಸ್ತಿ ಪುರಸ್ಕೃತೆ ಜುಬೇದಾ ನಧಾಫ್ ಪ್ರತಿಕ್ರಿಯೆ ನೀಡಿದ್ದು ಇದೊಂದು ಅವಿಸ್ಮರಣೀಯ ದಿನ ಆಗಿದೆ. ನನ್ನ ಸಾಮಾಜಿಕ ಸೇವೆ ಪರಿಗಣಿಸಿ ಅತ್ಯುನ್ನತ ಗೌರವ ಡಾಕ್ಟರೇಟ್ ಪದವಿ ನೀಡಿದ್ದು ಇನ್ನಷ್ಟು ಜವಾಬ್ದಾರಿ ಹೆಚ್ಚಳ ಆಗಿದೆ ಎಂದರು. ಅನೇಕ ಸಾಮಾಜಿಕ ಕಾರ್ಯಕರ್ತರು, ಹೋರಾಟಗಾರರು, ಶಿಕ್ಷಣ ತಜ್ಞರು ಭಾಗವಹಿಸಿದ್ದರು.