ರಜತ್ ಪಾಟೀದಾರ್ ನಾಯಕತ್ವದ ಆರ್ ಸಿಬಿ ಹಾಗೂ ಶ್ರೇಯಸ್ ಅಯ್ಯರ್ ನಾಯಕನಾಗಿರುವ ಪಂಜಾಬ್ ಕಿಂಗ್ಸ್ ಈ ಬಾರಿಯ ಐಪಿಎಲ್ ಟೂರ್ನಿಯ ಫೈನಲ್ ಗೆ ಲಗ್ಗೆ ಇಟ್ಟಿವೆ. ಐಪಿಎಲ್ ಆರಂಭದಿಂದಲೂ ಆಡುತ್ತಿರುವ ಈ ಎರಡು ತಂಡಗಳು ಇಲ್ಲಿವರೆಗೂ ಟ್ರೋಫಿ ಎತ್ತಿಲ್ಲ. ಹೀಗಾಗಿ ಎರಡು ತಂಡಗಳ ನಡುವೆ ಜಿದ್ದಾಜಿದ್ದು ಜೋರಾಗಿದ್ದು, ಚೊಚ್ಚಲ ಟ್ರೋಫಿಯನ್ನು ಯಾವ ತಂಡ ಮುಡಿಗೇರಿಸಿಕೊಳ್ಳಲಿದೆ ಎಂಬ ಕುತೂಹಲ ಕ್ರಿಕೆಟ್ ಪ್ರೇಮಿಗಳಲ್ಲಿದೆ.
ಗುಜರಾತ್ ಅಹಮದಾಬಾದ್ ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಾಳೆ ಆರ್ ಸಿಬಿ ವರ್ಸಸ್ ಪಂಜಾಬ್ ಹಣಾಹಣಿ ನಡೆಯಲಿದ್ದು, ಈ ಬಗ್ಗೆ ಸ್ಟಾರ್ ಡೈರೆಕ್ಟರ್ ರಾಜಮೌಳಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಶ್ರೇಯಸ್ ಅಯ್ಯರ್ ಹಾಗೂ ಕಿಂಗ್ ಕೊಹ್ಲಿ ಬಗ್ಗೆ ರಾಜಮೌಳಿ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಈ ವ್ಯಕ್ತಿ ದೆಹಲಿಯನ್ನು ಫೈನಲ್ಗೆ ಕೊಂಡೊಯ್ಯುತ್ತಾನೆ. ಮತ್ತು ಕೈಬಿಡಲ್ಪಡುತ್ತಾನೆ. ಕೋಲ್ಕತ್ತಾವನ್ನು ಟ್ರೋಫಿಗೆ ಕೊಂಡೊಯ್ಯುತ್ತಾನೆ… ಕೈಬಿಡಲ್ಪಡುತ್ತಾನೆ.. 11 ವರ್ಷಗಳ ನಂತರ ಯುವ ಪಂಜಾಬ್ ತಂಡವನ್ನು ಫೈನಲ್ಗೆ ಕೊಂಡೊಯ್ಯುತ್ತಾನೆ. ಈ ವರ್ಷದ ಟ್ರೋಫಿಗೂ ಅವರು ಅರ್ಹರು…ಮತ್ತೊಂದೆಡೆ, ಕೊಹ್ಲಿ… ವರ್ಷದಿಂದ ವರ್ಷಕ್ಕೆ ಪ್ರದರ್ಶನ ನೀಡುತ್ತಿದ್ದಾನೆ… ಸಾವಿರಾರು ರನ್ಗಳನ್ನು ಸಂಗ್ರಹಿಸುತ್ತಿದ್ದಾನೆ. ಅವನಿಗೆ ಅಂತಿಮ ಗಡಿ… ಅವರು ಕೂಡ ಅದಕ್ಕೆ ಅರ್ಹರು. ಫಲಿತಾಂಶ ಏನೇ ಇರಲಿ… ಅದು ಹೃದಯ ವಿದ್ರಾವಕವಾಗಿರುತ್ತದೆ… 😢 ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
Iyer guiding Bumrah’s and Boult’s yorkers to the third man boundary… Exquisite…
This man leads Delhi to a final… and is dropped…
Leads Kolkata to a trophy… dropped…
Leads a young Punjab to the finals after 11 years.
He deserves this year’s trophy too…On the other hand,… pic.twitter.com/ws0anhcZ3l
— rajamouli ss (@ssrajamouli) June 2, 2025
ಕೊಹ್ಲಿ ಮತ್ತು ಶ್ರೇಯರ್ ದಾಖಲೆಗಳ ಬಗ್ಗೆ ಮಾತನಾಡಿರುವ ರಾಜಮೌಳಿ ಯಾರು ಕಪ್ ಗೆದ್ದರು ಅದು ಹೃದಯ ವಿದ್ರಾವಕವಾಗಿರುತ್ತದೆ ಎಂದಿದ್ದಾರೆ. ಆರ್ ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ಎರಡು ತಂಡಗಳು ಚೊಚ್ಚಲ ಕಪ್ ನಿರೀಕ್ಷೆಯಲ್ಲಿವೆ. ಎರಡು ತಂಡಗಳು ಆರಂಭದಿಂದ ಅದ್ಭುತವಾಗಿ ಪ್ರದರ್ಶನ ನೀಡುತ್ತಿವೆ. ಆದ್ರೆ ವಿಜಯಲಕ್ಷ್ಮಿ ಯಾರಿಗೆ ಒಲಿಯುತ್ತಾಳೋ ನಾಳೆ ಕಾದುನೋಡ್ಬೇಕು.