ಹುಬ್ಬಳ್ಳಿ: ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಅಥವಾ ರಾಜ್ಯದ ಯಾವುದೇ ನಾಯಕರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಇದರ ಬದಲಾಗಿ ರಾಜ್ಯ ಸರ್ಕಾರವನ್ನ ಕೈ ಹೈಕಮಾಂಡ್ ಎಟಿಎಂಯನ್ನಾಗಿ ಮಾಡಿಕೊಳ್ಳತಾ ಇದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ್ ಶೆಟ್ಟರ್ ಆರೋಪ ಮಾಡಿದರು
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು.
ಸಿಎಂ,ಡಿಸಿಎಂ ಕಾಂಗ್ರೆಸ್ ಹಿರಿಯ ನಾಯಕರನ್ನ ಭೇಟಿಯಾದ ವಿಚಾರವಾಗಿ ಮಾತನಾಡಿದ ಅವರು
ಕಾಂಗ್ರೆಸ್ ಹೈಕಮಾಂಡಗೆ ಸಿಎಂ,ಡಿಸಿಎಂ ಮೇಲೆ ಕ್ರಮ ಕೈಗೊಳ್ಳುವ ತಾಕತ್ ಇಲ್ಲ
ಸುಮ್ಮನೆ ಕರೆಸಿಕೊಂಡು ಕಳಿಸುವುದುನಂತರ ವಾರ್ನ್ ಮಾಡಿದವು ಅಂತಾ ಹೇಳುವುದಕ್ಕೆ ಅಷ್ಟೇಇದರಿಂದ ಯಾವುದೇ ಪ್ರಯೋಜನ ಆಗಲ್ಲಇನ್ನಷ್ಟು ಅವರಿಂದ ವಸೂಲಿ ಮಾಡಿ ಕಳಿಸುತ್ತಾರೆ ಅಷ್ಟೇ ಎಂದರು.
ಕಾಲ್ತುಳಿತ ಪ್ರಕರಣ ಕುರಿತು ರಾಜ್ಯ ಸರ್ಕಾರ ಜವಾಬ್ದಾರಿ ತೆಗೆದುಕೊಳ್ಳದ ವಿಚಾರ
ಇದೊಂದು ದೊಡ ದುರಂತ ನಡೆದು ಮೂರು ಗಂಟೆ ಆದರು ಸರಕಾರದ ಗಮನಕ್ಕೆ ಬಂದಿಲ್ಲ ಅಂದರೆ ಏನು ಅಧಿಕಾರಿಗಳು ತಮ್ಮ ಗಮನಕ್ಕೆ ಕೂಡಲೆ ತಂದಿಲ್ಲ ಎಂದಿದ್ದಾರೆ. ರಾಜ್ಯದಲ್ಲಿ ಸರಕಾರ ಇದೆಯೋ ಇಲ್ಲವೋ ತಿಳಿತಾ ಇಲ್ಲಇಂದು ಸರಕಾರ ಹಾಗೂ ಸಿಎಂ ಅಸ್ತಿತ್ವದ ಪ್ರಶ್ನೆ ಬರತಾ ಇದೆಸಾವನ್ನಪ್ಪಿದವರು ಸ್ವತ; ಸಿಎಂ ಹೇಳುತ್ತಾರೆ ಎಂದರೆ ಹೇಗೆಒಬ್ಬ ರಿಸ್ಪಾನ್ಸಿಬಲ್ ವ್ಯಕ್ತಿ ಆಗಿ ಸಿಎಂ ಸ್ಥಾನಕ್ಕೆ ಐದು ನಿಮಿಷ ಇರಲು ಯೋಗ್ಯರಲ್ಲಕೂಡಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದ ಅವರು ಸಿಎಂ ಹೇಳಿಕೆ ನೋಡಿದರೆ ಗೊತ್ತಾಗುತ್ತದೆ ಎಷ್ಟೋಂದು ಜವಾಬ್ದಾರಿ ಇದೆ ಅಂತಾಪೊಲೀಸ್ ಅಧಿಕಾರಿಗಳು ನನಗೆ ಮಾಹಿತಿ ಕೊಟ್ಟಿಲ್ಲ ತಮಗೆ ಮಾಹಿತಿ ಸಿಕ್ಕಿಲ್ಲ ಅಂದರೆ ತಮ್ಮದೇ ರೀತಿಯಲ್ಲಿ ಮಾಹಿತಿ ಪಡೆಯಬಹುದಿತ್ತು.
ನಿಮ್ಮ ತಪ್ಪು ನೀವು ಅಲೈರ್ಟ್ ಆಗದೇ ಇರುವುದಕ್ಕೆ ಕಾರಣ ಘಟನೆ ನಡೆದಿದೆಈಗ ಪೊಲೀಸ್ ಅಧಿಕಾರಿಗಳ ಮೇಲೆ ತಪ್ಪು ಹಾಕುವುದು ಬೇಡಾಆದ್ದರಿಂದ ಕೂಡಲೇ ಸಿಎಂ ಡಿಸಿಎಂ ರಾಜೀನಾಮೆ ಕೊಡಬೇಕುರಾಜ್ಯ ಸರ್ಕಾರದ ವಜಾಕ್ಕೆ ಆಗ್ರಹಿಸಿ ಬಿಜೆಪಿ ರಾಜ್ಯ ಘಟಕ ರಾಜ್ಯಪಾಲರಿಗೆ, ರಾಷ್ಟ್ರಪತಿಗಳಿಗೆ ಮನವಿ ಕೊಡುವ ಚಿಂತನೆ ಆಗಿದ್ದು, ಅನಿವಾರ್ಯ ಮನವಿ ಕೊಡಬೇಕಾಗುತ್ತದೆ ಅಧಿಕಾರಿಗಳ ಅಸಹಕಾರ, ಕಾಲ್ತುಳಿತ ಬಗ್ಗೆ ಮಾಹಿತಿ ಕೊರತೆ ಇದ್ದುಇದರಿಂದಾಗಿ ಸರಕಾರ ಇದ್ದು ಇಲ್ಲದ ರೀತಿಯಲ್ಲಿ ಇದೆ. ರಾಜ್ಯ ಸರ್ಕಾರ ರಾಜ್ಯದಲ್ಲಿ ಸತ್ತು ಹೋಗಿದೆರಾಜ್ಯಪಾಲರು ಕಾರ್ಯಕ್ರಮಕ್ಕೆ ಬರುತ್ತಾರೆ, ಸನ್ಮಾನ ಕಾರ್ಯಕ್ರಮ ಇದೆ ಅಂತಾ ಅನ್ನುವುದು ಸಹ ಮಾಹಿತಿ ಇಲ್ಲರಾಜ್ಯ ಸರಕಾರ ಜೀವಂತ ಇಲ್ಲ ರಾಜ್ಯದಲ್ಲಿ ವ್ಯಾಕ್ಯೋಂ ಕಳೆದುಕೊಂಡಿದೆ ಎಂದರು.