ಬೆಳಗಾವಿ:- ನಗರದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ. ಒಂದೇ ದಿನ ಗ್ರಾಮದ ಎಂಟು ಜನರಿಗೆ ಬೀದಿ ನಾಯಿ ಕಚ್ಚಿರುವ ಘಟನೆ ಬೆಳಗಾವಿ ತಾಲೂಕಿನ ಕುದ್ರೆಮನಿ ಗ್ರಾಮದಲ್ಲಿ ಜರುಗಿದೆ.
ಜೆಪಿ ಭವನದಲ್ಲಿ ಡಾ. ಬಿ ಆರ್ ಅಂಬೇಡ್ಕರ್ & ಬಾಬುಜಗಜೀವನರಾಂ ಜಯಂತಿ ಆಚರಣೆ: TA ಶರವಣ ಭಾಗಿ!
ಹುಚ್ಚು ನಾಯಿ ದಾಳಿಯಿಂದ ಎಂಟಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದೆ. ಕೈ, ಕಾಲು, ಹೊಟ್ಟೆ ಭಾಗ ಸೇರಿ ದೇಹದ ವಿವಿಧ ಭಾಗಗಳ ಮೇಲೆ ಹುಚ್ಚು ನಾಯಿ ದಾಳಿ ನಡೆಸಿದ್ದು, ಅವರುಗಳನ್ನು ಚಿಕಿತ್ಸೆಗಾಗಿ ಬಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ವಿಠ್ಠಲ್ ದೇವಸ್ಥಾನದಲ್ಲಿ ಸಂಜೆ ಹೊತ್ತು ಗ್ರಾಮಸ್ಥರು ಕುಳಿತಿದ್ದರು. ಈ ವೇಳೆ ದೇವಸ್ಥಾನದ ಒಳಗೆ ನುಗ್ಗಿದ ಹುಚ್ಚು ನಾಯಿ, ಎಲ್ಲರ ಮೇಲೂ ದಾಳಿ ಮಾಡಿದೆ. ಓರ್ವ ಮಹಿಳೆ ಸೇರಿ ಏಳು ಜನ ಪುರುಷರ ಮೇಲೆ ದಾಳಿ ಮಾಡಿದೆ. ದಾಳಿಗೊಳಗಾದವರನ್ನು ಮಲ್ಲಪ್ಪ ಪಾಟೀಲ್, ಮಲಪ್ರಭಾ ಪಾಟೀಲ್, ನೀಲಕಂಠ ಸಾಕರೆ, ವಿಠ್ಠಲ್ ಮಾಂಡೇಕರ್ ಸೇರಿ ಹಲವರು ಎಂದು ಗುರುತಿಸಲಾಗಿದೆ.
ಮೊದಲು ನಾಯಿ ದಾಳಿ ಮಾಡುತ್ತಿದ್ದಂತೆ ರೊಚ್ಚಿಗೆದ್ದ ಗ್ರಾಮಸ್ಥರು, ನಾಯಿಯ ಮೇಲೆ ಮರುದಾಳಿ ಮಾಡಿದ್ದಾರೆ. ಹುಚ್ಚು ನಾಯಿಯನ್ನು ಹೊಡೆದು ಗ್ರಾಮಸ್ಥರು ಕೊಂದಿದ್ದಾರೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.