ಕೆ ಆರ್ ಪುರಂ:- ರಾತ್ರೋ ರಾತ್ರಿ ರಕ್ತವಾಂತಿ ಮಾಡಿಕೊಂಡು ನಾಯಿಗಳು ಸಾವನ್ನಪ್ಪಿರುವ ಘಟನೆ ಕೆ.ಆರ್.ಪುರಂನ ಭಟ್ಟರಹಳ್ಳಿಯಲ್ಲಿ ಜರುಗಿದೆ.
ಡ್ರೈ ಫ್ರೂಟ್ಸ್ ಒಳ್ಳೆಯದು ಆದರೆ ಇಂಥವರು ಯಾವುದೇ ಕಾರಣಕ್ಕೂ ತಿನ್ನಬಾರದು..!
ರಕ್ತವಾಂತಿ ಮಾಡಿಕೊಂಡು 6 ನಾಯಿಗಳಲ್ಲಿ ಒಂದನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಉಳಿದ 5 ನಾಯಿಗಳು ನರಳಿ ನರಳಿ ಪ್ರಾಣಬಿಟ್ಟಿವೆ. ನಾಯಿಗಳು ಒದ್ದಾಡಿ ಪ್ರಾಣಬಿಡೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೀದಿನಾಯಿಗಳಿಗೆ ಕಿಡಿಗೇಡಿಗಳು ವಿಷ ಇಟ್ಟಿರೋ ಶಂಕೆ ವ್ಯಕ್ತವಾಗಿದೆ.
ಘಟನೆ ಸಂಬಂಧ ಬಿಬಿಎಂಪಿ ಅಧಿಕಾರಿಗಳು ದೂರು ನೀಡಿದ್ದು, ದೂರಿನ ಅನ್ವಯ ಕೆ.ಆರ್.ಪುರಂ ಠಾಣೆಯಲ್ಲಿ ಎಫ್ ಐಆರ್ ದಾಖಲುಯಾಗಿದೆ.
ನಾಯಿಗಳ ಸಾವಿಗೆ ಕಾರಣ ಏನು ಎಂಬುವುದರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಫೋರೆನ್ಸಿಕ್ ಲ್ಯಾಬ್ ಗೆ ನಾಯಿಗಳ ರಕ್ತ ಸ್ಯಾಂಪಲ್ ರವಾನೆ ಮಾಡಲಾಗಿದೆ. ತನಿಖೆ ನಂತರ ಸತ್ಯಾಸತ್ಯತೆ ತಿಳಿದು ಬರಲಿದೆ.